ಈಚಿನ ವರ್ಷಗಳಲ್ಲಿ ಚುನಾವಣೆಗಳು ದುಬಾರಿಯಾಗುತ್ತಿವೆ. ಅರ್ಹರು, ಪ್ರಾಮಾಣಿಕರು ಆಯ್ಕೆಯಾಗುವುದು ವಿರಳವಾಗುತ್ತಿದೆ. ಚುನಾವಣೆಗೆ ಹಣಬೇಕು. ಆದರೆ, ಅದೇ ಪ್ರಧಾನವಾಗಬಾರದು ಎಂದು ಹೇಳಿದರು.
ಒಮ್ಮೆಯಾದರೂ ವಿಧಾನಸೌಧದ ಮೆಟ್ಟಿಲು ಹತ್ತಬೇಕು ಎಂದು ಎಷ್ಟೋ ಜನರು ಕನಸು ಕಾಣುತ್ತಾರೆ. ಆದರೆ, ಕನಸುನನಸಾದಾಗ ಕಲಾಪಗಳಿಗೆ ಬರುವುದಿಲ್ಲ. ಇಂತಹ ಮನೋಭಾವ ಹೋಗಬೇಕು. ಉತ್ತಮ ಸಂಸದೀಯ ಪಟುಗಳಾಗಬೇಕು ಎಂದರು
ಸಚಿವರಾದ ಜಮೀರ್ ಅಹಮದ್, ಎಚ್.ಕೆ.ಪಾಟೀಲ, ವಿಧಾನಸಭಾಧ್ಯಕ್ಷ ಯು.ಟಿ.ಖಾದರ್, ಸಭಾಪತಿ ಬಸವರಾಜ ಹೊರಟ್ಟಿ ಇದ್ದರು