<p><strong>ಬೆಂಗಳೂರು:</strong> ಚೆನ್ನೈ–ಬೆಂಗಳೂರು ನಡುವಣ ದಕ್ಷಿಣ ಭಾರತದ ಮೊದಲ ಸೆಮಿಸ್ಪೀಡ್ ರೈಲು ‘ವಂದೇ ಭಾರತ್ ಎಕ್ಸ್ಪ್ರೆಸ್‘ಗೆ ಶುಕ್ರವಾರ ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ.</p>.<p>ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಹೊಸ ರೈಲಿಗೆ ಪ್ರಧಾನಿ ಮೋದಿ ಹಸಿರು ನಿಶಾನೆ ತೋರಿಸಿದರು. 7 ನೇ ಪ್ಲಾಟ್ಫಾರಂನಿಂದ ಬೆಳಗ್ಗೆ 10.10ಕ್ಕೆ ರೈಲು ಚೆನ್ನೈಗೆ ಹೊರಟಿತು.</p>.<p><strong>ಇದನ್ನೂ ಓದಿ:</strong><a href="https://www.prajavani.net/district/bengaluru-city/pm-flags-off-south-indias-first-vande-bharat-express-in-bengaluru-987725.html" itemprop="url">ದಕ್ಷಿಣ ಭಾರತದ ಮೊದಲ ವಂದೇ ಭಾರತ್, ಕಾಶಿ ಯಾತ್ರೆ ರೈಲಿಗೆ ಮೋದಿ ಚಾಲನೆ</a></p>.<p>ಈ ಹೊಸ ರೈಲು ಬುಧವಾರ ಹೊರೆತುಪಡಿಸಿ ವಾರದ ಆರು ದಿನ ಚೆನ್ನೈ ಹಾಗೂ ಮೈಸೂರು ನಡುವೆ ಕಾರ್ಯಾಚರಣೆ ಮಾಡಲಿದೆ. ಕಟಪಾಡಿ ಹಾಗೂ ಬೆಂಗಳೂರಿನಲ್ಲಿ ರೈಲು ನಿಲ್ಲಲಿದೆ ಎಂದು ನೈಋತ್ಯ ರೈಲ್ವೇ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.</p>.<p><strong>ಟಿಕೆಟ್ ದರ ಎಷ್ಟು?</strong></p>.<p>ಉಪಹಾರ ಸೇರಿ ಮೈಸೂರು ಹಾಗೂ ಬೆಂಗಳೂರುವೆರೆಗಿನ ಚೇರ್ ಕಾರ್ (CC) ಪ್ರಯಾಣಕ್ಕೆ ₹720 ನಿಗದಿ ಮಾಡಲಾಗಿದೆ. ಎಕ್ಸಿಕ್ಯೂಟಿವ್ ಚೇರ್ ಕಾರ್ (EC) ಪ್ರಯಾಣಕ್ಕೆ ₹1,215 ನಿಗದಿ ಮಾಡಲಾಗಿದೆ.</p>.<p>ಬೆಂಗಳೂರಿನಿಂದ ಮೈಸೂರಿಗೆ ಚೇರ್ ಕಾರ್ನಲ್ಲಿ ₹515 ಹಾಗೂ ಎಕ್ಸಿಕ್ಯೂಟಿವ್ ಚೇರ್ ಕಾರ್ ಪ್ರಯಾಣಕ್ಕೆ ₹985 ದರ ಇದೆ.</p>.<p>ಚೆನ್ನೈನಿಂದ ಮೈಸೂರಿಗೆ ಚೇರ್ ಕಾರ್ನಲ್ಲಿ ಹಾಗೂ ಎಕ್ಸಿಕ್ಯೂಟಿವ್ ಚೇರ್ನಲ್ಲಿ ಕ್ರಮವಾಗಿ ₹ 1,200 ಹಾಗೂ ₹ 2,295 ಇದೆ. ಮೈಸೂರಿನಿಂದ ಚೆನ್ನೈಗೆ ಸಿಸಿ ಹಾಗೂ ಇಸಿ ಕೋಚ್ಗಳಲ್ಲಿ ಕ್ರಮವಾಗಿ ₹1,365 ಹಾಗೂ ₹2,485 ಇದೆ.</p>.<p><strong>ಇದನ್ನೂ ಓದಿ:</strong><a href="https://www.prajavani.net/karnataka-news/vande-bharat-express-hubli-bangalore-to-chennai-987262.html" itemprop="url">ಹುಬ್ಬಳ್ಳಿಗೆ ವಂದೇ ಭಾರತ್: ವೇಳಾಪಟ್ಟಿ ಕೇಳಿದ ರೈಲ್ವೆ ಮಂಡಳಿ</a></p>.<p><strong>ಟಿಕೆಟ್ ಬುಕ್ ಮಾಡುವುದು ಹೇಗೆ?</strong></p>.<p>ಐಆರ್ಸಿಟಿಯ ವೆಬ್ಸೈಟ್ಲ್ಲಿ ಅಥವಾ ಆ್ಯಪ್ನಲ್ಲಿ ಸಾಮಾನ್ಯ ರೈಲ್ವೇ ಟಿಕೆಟ್ಗಳನ್ನು ಖರೀದಿ ಮಾಡಿದಂತೆ ಮಾಡಬಹುದು. ರೈಲ್ವೆ ಸೇವೆ ಒದಗಿಸುವ ಥರ್ಡ್ ಪಾರ್ಟಿ ಅಪ್ಲಿಕೇಶನ್ನಲ್ಲಿಯೂ ಟಿಕೆಟ್ ಬುಕ್ ಮಾಡಬಹುದು. ಈಗಾಗಲೇ ಆನ್ಲೈನ್ ಟಿಕೆಟ್ ಬುಕ್ಕಿಂಗ್ ಪ್ರಾರಂಭವಾಗಿದೆ.</p>.<p>ಈ ರೈಲು ಮುಂಜಾನೆ 5.50ಕ್ಕೆ ಚೆನ್ನೈನಿಂದ ಹೊರಡಲಿದ್ದು, (ಗಾಡಿ ಸಂಖ್ಯೆ 20607) ಬೆಳಿಗ್ಗೆ 10.20ಕ್ಕೆ ಬೆಂಗಳೂರು ತಲುಪಲಿದೆ. ಮಧ್ಯಾಹ್ನ 12.20ಕ್ಕೆ ಮೈಸೂರು ತಲುಪಲಿದೆ. ಚೆನ್ನೈನಿಂದ ಮೈಸೂರು ತಲುಪು 6.30 ಗಂಟೆ ಸಮಯ ತೆಗೆದುಕೊಳ್ಳಲಿದೆ.</p>.<p><strong>ಇದನ್ನೂ ಓದಿ:</strong><a href="https://www.prajavani.net/detail/lack-of-infrastructure-is-the-biggest-obstacle-to-vande-bharat-express-services-986975.html" itemprop="url">ಆಳ– ಅಗಲ: ಮೂಲಸೌಕರ್ಯ ಕೊರತೆ- ವಂದೇ ಭಾರತ್ ವೇಗಕ್ಕೆ ಹತ್ತಾರು ತಡೆ</a></p>.<p>ಮೈಸೂರಿನಿಂದ ( ಗಾಡಿ ಸಂಖ್ಯೆ 20608) ಮಧ್ಯಾಹ್ನ 1.05ಕ್ಕೆ ಹೊರಡಲಿದ್ದು, ಮದ್ಯಾಹ್ನ 2.55ಕ್ಕೆ ಬೆಂಗಳೂರಿಗೆ ಬರಲಿದೆ. ಸಂಜೆ 7.30ಗೆ ಚೆನ್ನೈಗೆ ತಲುಪಲಿದೆ. ಮೈಸೂರಿನಿಂದ ಚೆನ್ನೈಗೆ ತಲುಪಲು 6 ಗಂಟೆ 35 ನಿಮಿಷ ತೆಗೆದುಕೊಳ್ಳಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಚೆನ್ನೈ–ಬೆಂಗಳೂರು ನಡುವಣ ದಕ್ಷಿಣ ಭಾರತದ ಮೊದಲ ಸೆಮಿಸ್ಪೀಡ್ ರೈಲು ‘ವಂದೇ ಭಾರತ್ ಎಕ್ಸ್ಪ್ರೆಸ್‘ಗೆ ಶುಕ್ರವಾರ ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ.</p>.<p>ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಹೊಸ ರೈಲಿಗೆ ಪ್ರಧಾನಿ ಮೋದಿ ಹಸಿರು ನಿಶಾನೆ ತೋರಿಸಿದರು. 7 ನೇ ಪ್ಲಾಟ್ಫಾರಂನಿಂದ ಬೆಳಗ್ಗೆ 10.10ಕ್ಕೆ ರೈಲು ಚೆನ್ನೈಗೆ ಹೊರಟಿತು.</p>.<p><strong>ಇದನ್ನೂ ಓದಿ:</strong><a href="https://www.prajavani.net/district/bengaluru-city/pm-flags-off-south-indias-first-vande-bharat-express-in-bengaluru-987725.html" itemprop="url">ದಕ್ಷಿಣ ಭಾರತದ ಮೊದಲ ವಂದೇ ಭಾರತ್, ಕಾಶಿ ಯಾತ್ರೆ ರೈಲಿಗೆ ಮೋದಿ ಚಾಲನೆ</a></p>.<p>ಈ ಹೊಸ ರೈಲು ಬುಧವಾರ ಹೊರೆತುಪಡಿಸಿ ವಾರದ ಆರು ದಿನ ಚೆನ್ನೈ ಹಾಗೂ ಮೈಸೂರು ನಡುವೆ ಕಾರ್ಯಾಚರಣೆ ಮಾಡಲಿದೆ. ಕಟಪಾಡಿ ಹಾಗೂ ಬೆಂಗಳೂರಿನಲ್ಲಿ ರೈಲು ನಿಲ್ಲಲಿದೆ ಎಂದು ನೈಋತ್ಯ ರೈಲ್ವೇ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.</p>.<p><strong>ಟಿಕೆಟ್ ದರ ಎಷ್ಟು?</strong></p>.<p>ಉಪಹಾರ ಸೇರಿ ಮೈಸೂರು ಹಾಗೂ ಬೆಂಗಳೂರುವೆರೆಗಿನ ಚೇರ್ ಕಾರ್ (CC) ಪ್ರಯಾಣಕ್ಕೆ ₹720 ನಿಗದಿ ಮಾಡಲಾಗಿದೆ. ಎಕ್ಸಿಕ್ಯೂಟಿವ್ ಚೇರ್ ಕಾರ್ (EC) ಪ್ರಯಾಣಕ್ಕೆ ₹1,215 ನಿಗದಿ ಮಾಡಲಾಗಿದೆ.</p>.<p>ಬೆಂಗಳೂರಿನಿಂದ ಮೈಸೂರಿಗೆ ಚೇರ್ ಕಾರ್ನಲ್ಲಿ ₹515 ಹಾಗೂ ಎಕ್ಸಿಕ್ಯೂಟಿವ್ ಚೇರ್ ಕಾರ್ ಪ್ರಯಾಣಕ್ಕೆ ₹985 ದರ ಇದೆ.</p>.<p>ಚೆನ್ನೈನಿಂದ ಮೈಸೂರಿಗೆ ಚೇರ್ ಕಾರ್ನಲ್ಲಿ ಹಾಗೂ ಎಕ್ಸಿಕ್ಯೂಟಿವ್ ಚೇರ್ನಲ್ಲಿ ಕ್ರಮವಾಗಿ ₹ 1,200 ಹಾಗೂ ₹ 2,295 ಇದೆ. ಮೈಸೂರಿನಿಂದ ಚೆನ್ನೈಗೆ ಸಿಸಿ ಹಾಗೂ ಇಸಿ ಕೋಚ್ಗಳಲ್ಲಿ ಕ್ರಮವಾಗಿ ₹1,365 ಹಾಗೂ ₹2,485 ಇದೆ.</p>.<p><strong>ಇದನ್ನೂ ಓದಿ:</strong><a href="https://www.prajavani.net/karnataka-news/vande-bharat-express-hubli-bangalore-to-chennai-987262.html" itemprop="url">ಹುಬ್ಬಳ್ಳಿಗೆ ವಂದೇ ಭಾರತ್: ವೇಳಾಪಟ್ಟಿ ಕೇಳಿದ ರೈಲ್ವೆ ಮಂಡಳಿ</a></p>.<p><strong>ಟಿಕೆಟ್ ಬುಕ್ ಮಾಡುವುದು ಹೇಗೆ?</strong></p>.<p>ಐಆರ್ಸಿಟಿಯ ವೆಬ್ಸೈಟ್ಲ್ಲಿ ಅಥವಾ ಆ್ಯಪ್ನಲ್ಲಿ ಸಾಮಾನ್ಯ ರೈಲ್ವೇ ಟಿಕೆಟ್ಗಳನ್ನು ಖರೀದಿ ಮಾಡಿದಂತೆ ಮಾಡಬಹುದು. ರೈಲ್ವೆ ಸೇವೆ ಒದಗಿಸುವ ಥರ್ಡ್ ಪಾರ್ಟಿ ಅಪ್ಲಿಕೇಶನ್ನಲ್ಲಿಯೂ ಟಿಕೆಟ್ ಬುಕ್ ಮಾಡಬಹುದು. ಈಗಾಗಲೇ ಆನ್ಲೈನ್ ಟಿಕೆಟ್ ಬುಕ್ಕಿಂಗ್ ಪ್ರಾರಂಭವಾಗಿದೆ.</p>.<p>ಈ ರೈಲು ಮುಂಜಾನೆ 5.50ಕ್ಕೆ ಚೆನ್ನೈನಿಂದ ಹೊರಡಲಿದ್ದು, (ಗಾಡಿ ಸಂಖ್ಯೆ 20607) ಬೆಳಿಗ್ಗೆ 10.20ಕ್ಕೆ ಬೆಂಗಳೂರು ತಲುಪಲಿದೆ. ಮಧ್ಯಾಹ್ನ 12.20ಕ್ಕೆ ಮೈಸೂರು ತಲುಪಲಿದೆ. ಚೆನ್ನೈನಿಂದ ಮೈಸೂರು ತಲುಪು 6.30 ಗಂಟೆ ಸಮಯ ತೆಗೆದುಕೊಳ್ಳಲಿದೆ.</p>.<p><strong>ಇದನ್ನೂ ಓದಿ:</strong><a href="https://www.prajavani.net/detail/lack-of-infrastructure-is-the-biggest-obstacle-to-vande-bharat-express-services-986975.html" itemprop="url">ಆಳ– ಅಗಲ: ಮೂಲಸೌಕರ್ಯ ಕೊರತೆ- ವಂದೇ ಭಾರತ್ ವೇಗಕ್ಕೆ ಹತ್ತಾರು ತಡೆ</a></p>.<p>ಮೈಸೂರಿನಿಂದ ( ಗಾಡಿ ಸಂಖ್ಯೆ 20608) ಮಧ್ಯಾಹ್ನ 1.05ಕ್ಕೆ ಹೊರಡಲಿದ್ದು, ಮದ್ಯಾಹ್ನ 2.55ಕ್ಕೆ ಬೆಂಗಳೂರಿಗೆ ಬರಲಿದೆ. ಸಂಜೆ 7.30ಗೆ ಚೆನ್ನೈಗೆ ತಲುಪಲಿದೆ. ಮೈಸೂರಿನಿಂದ ಚೆನ್ನೈಗೆ ತಲುಪಲು 6 ಗಂಟೆ 35 ನಿಮಿಷ ತೆಗೆದುಕೊಳ್ಳಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>