ವಚನ ಹರಿಸಿದ ಮೀಸಲಾತಿ: ‘ಮೀಸಲಾತಿ ಪದ್ಧತಿಗೆ ನಮ್ಮ ವಿರೋಧ ಇಲ್ಲ, ಆದರೆ ಬೇಲಿಯೇ ಎದ್ದು ಹೊಲ ಮೇಯ್ದಂತಹ ಸ್ಥಿತಿ ಇದೆ’ ಎಂದು ನಾರಾಯಣಸ್ವಾಮಿ ಹೇಳಿದಾಗ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಬಸವಣ್ಣನ ವಚನ ಉದ್ಧರಿಸಿ, ಮೀಸಲಾತಿಯ ನಿಜ ಉದ್ದೇಶ 70 ವರ್ಷವಾದ ಬಳಿಕವೂ ಈಡೇರಿಲ್ಲ ಎಂದರು. ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ, ಬಿಜೆಪಿಯ ಆಯನೂರು ಮಂಜುನಾಥ್ ಅವರಿಂದಲೂ ವಚನಗಳು ಉಲ್ಲೇಖಗೊಂಡು, ಮೀಸಲಾತಿ ವ್ಯವಸ್ಥೆಗೆ ಸಮರ್ಥನೆ ದೊರೆಯಿತು.