ಸೋಮವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಅವರು,ಸಂಪುಟದಲ್ಲಿ ಹಿರಿಯ ಸಚಿವರ ತ್ಯಾಗ ಪ್ರಸ್ತಾವ ಇಲ್ಲ, ಸಚಿವ ಮಾಧುಸ್ವಾಮಿ ಅವರದು ವೈಯಕ್ತಿಕ ಹೇಳಿಕೆ ಎಂದರು. ಸಿದ್ದರಾಮಯ್ಯ ಕುರಿತ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು,ಸಿದ್ದರಾಮಯ್ಯ ಅವರೇ ಪಕ್ಷದಲ್ಲಿ ಅಪ್ರಸ್ತುತರಾಗುತ್ತಿದ್ದು, ಮತ್ತೆ ವಕೀಲಿಕೆಗೆ ಅರ್ಜಿ ಹಾಕಲು ಹೊರಟಿದ್ದಾರೆ, ಫ್ಫ್ರೀ ಕಾಶ್ಮೀರ ಘೋಷಣೆ ಕೂಗಿದವರ ಪರವಾಗಿ ವಕಾಲತು ನಡೆಸಲಿ ಎಂದು ಕುಟುಕಿದರು.