<p><strong>ಟುನಿಸ್:</strong> ವಲಸೆ ಹೊರಟ ಎರಡು ಪ್ರಯಾಣಿಕ ದೋಣಿಗಳು ಮೆಡಿಟರೇನಿಯನ್ ಸಮುದ್ರದ ಟ್ಯುನೀಷ್ಯಾದ ತೀರದ ಬಳಿ ಮುಳುಗಿದ ಪರಿಣಾಮ ಆಫ್ರಿಕಾದ 27 ಜನರು ಮೃತಪಟ್ಟಿದ್ದಾರೆ. ತಕ್ಷಣ ಕಾರ್ಯಾಚರಣೆ ನಡೆಸಿದ ಕಡಲು ರಕ್ಷಣಾ ಪಡೆ, ಕೆಲವರನ್ನು ರಕ್ಷಿಸಿದೆ.</p><p>ಸಫಾಕ್ಸ್ ಬಳಿ ದೋಣಿಗಳು ಮುಳುಗಿವೆ. ಕಳೆದ ಡಿಸೆಂಬರ್ನಲ್ಲಿ ನಡೆದ ಇಂಥದ್ದೇ ದೋಣಿ ದುರಂತದಲ್ಲಿ ಮೃತಪಟ್ಟ ಆಫ್ರಿಕಾದ 30 ಜನರ ಮೃತದೇಹವನ್ನು ಕಡಲು ರಕ್ಷಣಾ ಪಡೆಯು ಹೊರತೆಗೆದಿತ್ತು. </p><p>ವಲಸೆ ಹೊರಟವರು ಯುರೋಪ್ ಕಡೆ ಪ್ರಯಾಣಿಸುತ್ತಿದ್ದರು. ಗುರುವಾರ ಒಟ್ಟು 87 ಜನರನ್ನು ರಕ್ಷಿಸಲಾಗಿದೆ. ಇವರೆಲ್ಲರೂ ಮುಳುಗಿದ ದೋಣಿಯಲ್ಲಿದ್ದವರು ಎಂದು ರಾಷ್ಟ್ರೀಯ ಕಡಲು ರಕ್ಷಣಾ ಪಡೆ ತಿಳಿಸಿದೆ.</p><p>ಐರೋಪ್ಯ ರಾಷ್ಟ್ರಗಳಲ್ಲಿ ಉತ್ತಮ ಬದುಕು ಕಂಡುಕೊಳ್ಳುವ ಉದ್ದೇಶದೊಂದಿಗೆ ಟ್ಯೂನೀಷ್ಯಾ ಹಾಗೂ ಆಫ್ರಿಕಾದ ಹಲವು ರಾಷ್ಟ್ರಗಳ ಜನರು ವಲಸೆ ಹೋಗುವ ಪ್ರಕ್ರಿಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದ್ದು, ಇವರು ಲಿಬಿಯಾವನ್ನು ತಮ್ಮ ನಿರ್ಗಮನ ಕೇಂದ್ರವನ್ನಾಗಿ ಮಾಡಿಕೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಟುನಿಸ್:</strong> ವಲಸೆ ಹೊರಟ ಎರಡು ಪ್ರಯಾಣಿಕ ದೋಣಿಗಳು ಮೆಡಿಟರೇನಿಯನ್ ಸಮುದ್ರದ ಟ್ಯುನೀಷ್ಯಾದ ತೀರದ ಬಳಿ ಮುಳುಗಿದ ಪರಿಣಾಮ ಆಫ್ರಿಕಾದ 27 ಜನರು ಮೃತಪಟ್ಟಿದ್ದಾರೆ. ತಕ್ಷಣ ಕಾರ್ಯಾಚರಣೆ ನಡೆಸಿದ ಕಡಲು ರಕ್ಷಣಾ ಪಡೆ, ಕೆಲವರನ್ನು ರಕ್ಷಿಸಿದೆ.</p><p>ಸಫಾಕ್ಸ್ ಬಳಿ ದೋಣಿಗಳು ಮುಳುಗಿವೆ. ಕಳೆದ ಡಿಸೆಂಬರ್ನಲ್ಲಿ ನಡೆದ ಇಂಥದ್ದೇ ದೋಣಿ ದುರಂತದಲ್ಲಿ ಮೃತಪಟ್ಟ ಆಫ್ರಿಕಾದ 30 ಜನರ ಮೃತದೇಹವನ್ನು ಕಡಲು ರಕ್ಷಣಾ ಪಡೆಯು ಹೊರತೆಗೆದಿತ್ತು. </p><p>ವಲಸೆ ಹೊರಟವರು ಯುರೋಪ್ ಕಡೆ ಪ್ರಯಾಣಿಸುತ್ತಿದ್ದರು. ಗುರುವಾರ ಒಟ್ಟು 87 ಜನರನ್ನು ರಕ್ಷಿಸಲಾಗಿದೆ. ಇವರೆಲ್ಲರೂ ಮುಳುಗಿದ ದೋಣಿಯಲ್ಲಿದ್ದವರು ಎಂದು ರಾಷ್ಟ್ರೀಯ ಕಡಲು ರಕ್ಷಣಾ ಪಡೆ ತಿಳಿಸಿದೆ.</p><p>ಐರೋಪ್ಯ ರಾಷ್ಟ್ರಗಳಲ್ಲಿ ಉತ್ತಮ ಬದುಕು ಕಂಡುಕೊಳ್ಳುವ ಉದ್ದೇಶದೊಂದಿಗೆ ಟ್ಯೂನೀಷ್ಯಾ ಹಾಗೂ ಆಫ್ರಿಕಾದ ಹಲವು ರಾಷ್ಟ್ರಗಳ ಜನರು ವಲಸೆ ಹೋಗುವ ಪ್ರಕ್ರಿಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದ್ದು, ಇವರು ಲಿಬಿಯಾವನ್ನು ತಮ್ಮ ನಿರ್ಗಮನ ಕೇಂದ್ರವನ್ನಾಗಿ ಮಾಡಿಕೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>