<p><strong>ಬೈರೂತ್ (ಲೆಬನಾನ್)</strong>: ಶಸ್ತ್ರಾಸ್ತ್ರ ತ್ಯಜಿಸುವಂತೆ ಇಸ್ರೇಲ್ ಒಡ್ಡುತ್ತಿರುವ ಬೆದರಿಕೆಗಳಿಗೆ ಹೆದರಿ ಶರಣಾಗುವುದಿಲ್ಲ. ಶಸ್ತ್ರಗಳನ್ನು ಕೆಳಗಿಟ್ಟು ತಲೆ ಬಾಗುವುದಿಲ್ಲ ಎಂದು ಹಿಜ್ಬುಲ್ಲಾ ಸಂಘಟನೆ ನಾಯಕ ನಯೀಮ್ ಖ್ವಾಸೆಮ್ ಭಾನುವಾರ ಹೇಳಿದ್ದಾರೆ.</p><p>ಹಿಜ್ಬುಲ್ಲಾದ ಭದ್ರಕೋಟೆ ಎನಿಸಿರುವ ಬೈರೂತ್ನ ಉಪನಗರಗಳಲ್ಲಿ ಶಿಯಾ ಮುಸ್ಲಿಮರ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಾವಿರಾರು ಬೆಂಬಲಿಗರನ್ನುದ್ದೇಶಿಸಿ ದೂರದರ್ಶನದಲ್ಲಿ ಮಾತನಾಡಿರುವ ನಯೀಮ್, 'ಇಂತಹ ಬೆದರಿಕೆಗಳಿಂದ ನಮ್ಮನ್ನು ಶರಣಾಗತರನ್ನಾಗಿಸಲು ಸಾಧ್ಯವಿಲ್ಲ' ಎಂದಿದ್ದಾರೆ.</p><p>ದೀರ್ಘ ಸಮಯದಿಂದ ಸಂಘಟನೆಯ ನಾಯಕರಾಗಿದ್ದ ಹಸನ್ ನಸ್ರಲ್ಲಾ ಅವರು ಕಳೆದ ವರ್ಷ ಇಸ್ರೇಲ್ ನಡೆಸಿದ ದಾಳಿಯಲ್ಲಿ ಹತ್ಯೆಯಾಗಿದ್ದಾರೆ. ನಂತರ ಅಧಿಕಾರ ವಹಿಸಿಕೊಂಡಿರುವ ಖ್ವಾಸೆಮ್, ಹೋರಾಟವನ್ನು ಕೊನೆಗೊಳಿಸಲು ನವೆಂಬರ್ನಲ್ಲಿ ಮಾಡಿಕೊಂಡಿರುವ ಕದನ ವಿರಾಮವನ್ನು ಇಸ್ರೇಲ್ ಪಾಲಿಸಬೇಕು ಎಂದು ಒತ್ತಾಯಿಸಿದ್ದಾರೆ.</p><p>ಅಮೆರಿಕದ ರಾಜತಾಂತ್ರಿಕ ಅಧಿಕಾರಿ ಟಾಮ್ ಬರಾಕ್ ಅವರು ಬೈರೂತ್ಗೆ ಸೋಮವಾರ ಆಗಮಿಸುವ ನಿರೀಕ್ಷೆ ಇದೆ. ಇದೇ ವೇಳೆ, ಖ್ವಾಸೆಮ್ ಭಾಷಣ ಪ್ರಸಾರವಾಗಿದೆ.</p><p>ಇರಾನ್ ಬೆಂಬಲಿತ ಹಿಜ್ಬುಲ್ಲಾ ಸಂಘಟನೆಯನ್ನು ವರ್ಷಾಂತ್ಯದೊಳಗೆ ನಿಶ್ಯಸ್ತ್ರಗೊಳಿಸಬೇಕು ಎಂದು ಬರಾಕ್ ಈಗಾಗಲೇ ಒತ್ತಾಯಿಸಿದ್ದಾರೆ. ಈ ಕುರಿತು ಅಧಿಕಾರಿಗಳು ಪ್ರತಿಕ್ರಿಯಿಸುವ ಸಾಧ್ಯತೆ ಇದೆ ಎಂದು ಹೆಸರು ಬಹಿರಂಗಪಡಿಸಲು ಬಯಸದ ಲೆಬನಾನ್ ಅಧಿಕಾರಿಯೊಬ್ಬರು ಹೇಳಿದ್ದಾರೆ.</p><p>ಇಸ್ರೇಲ್ ಗಡಿಯಲ್ಲಿರುವ ಹಿಜ್ಬುಲ್ಲಾ ಮಿಲಿಟರಿ ಮೂಲಸೌಕರ್ಯಗಳನ್ನು ನಾಶಮಾಡುತ್ತಿರುವುದಾಗಿ ಲೆಬನಾನ್ ಅಧಿಕಾರಿಗಳು ಹೇಳಿಕೊಂಡಿದ್ದಾರೆ.</p><p>ನವೆಂಬರ್ನಲ್ಲಿ ಮಾಡಿಕೊಂಡಿರುವ ಕದನ ವಿರಾಮ ಒಪ್ಪಂದದ ಹೊರತಾಗಿಯೂ ಇಸ್ರೇಲ್ ಪಡೆಗಳು, ಹಿಜ್ಬುಲ್ಲಾ ನೆಲೆಗಳನ್ನು ಗುರಿಯಾಗಿಸಿ ಲೆಬನಾನ್ ಮೇಲೆ ದಾಳಿ ಮುಂದುವರಿಸಿವೆ. ಉಗ್ರ ಸಂಘಟನೆಯನ್ನು ನಿಶ್ಯಸ್ತ್ರಗೊಳಿಸುವ ಕೆಲಸವನ್ನು ಲೆಬನಾನ್ ಸೂಕ್ತ ರೀತಿಯಲ್ಲಿ ಮಾಡುತ್ತಿಲ್ಲ ಎಂದು ಇಸ್ರೇಲ್ ಆರೋಪಿಸಿದೆ.</p><p>ಕದನ ವಿರಾಮ ಒಪ್ಪಂದದ ಪ್ರಕಾರ, ಹಿಜ್ಬುಲ್ಲಾ ತನ್ನ ಹೋರಾಟಗಾರರನ್ನು ದೇಶದ ಗಡಿಯಿಂದ ಸುಮಾರು 30 ಕಿ.ಮೀ. ದೂರದಲ್ಲಿರುವ ಲಿಟಾನಿ ನದಿಯ ಉತ್ತರ ಭಾಗಕ್ಕೆ ಕರೆದೊಯ್ಯಬೇಕು ಎಂದು ಇಸ್ರೇಲ್ ಷರತ್ತುಹಾಕಿದೆ.</p><p>ಅದೇ ರೀತಿ ಇಸ್ರೇಲ್ ಕೂಡ ತನ್ನ ಪಡೆಗಳು ಲೆಬನಾನ್ನಿಂದ ಹಿಂಪಡೆಯಬೇಕಿತ್ತು. ಆದರೆ, ಕಾರ್ಯತಂತ್ರದ ಭಾಗವೆಂದು ಐದು ಹಂತಗಳಲ್ಲಿ ಯೋಧರನ್ನು ನಿಯೋಜಿಸಿದೆ.</p>.Texas Floods | ದಿಢೀರ್ ಪ್ರವಾಹ; ಸಾವಿನ ಸಂಖ್ಯೆ 50ಕ್ಕೆ ಏರಿಕೆ.ಇಸ್ರೇಲ್ ವಿರುದ್ಧದ ಯುದ್ಧ ಬಳಿಕ ಮೊದಲ ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡ ಖಮೇನಿ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೈರೂತ್ (ಲೆಬನಾನ್)</strong>: ಶಸ್ತ್ರಾಸ್ತ್ರ ತ್ಯಜಿಸುವಂತೆ ಇಸ್ರೇಲ್ ಒಡ್ಡುತ್ತಿರುವ ಬೆದರಿಕೆಗಳಿಗೆ ಹೆದರಿ ಶರಣಾಗುವುದಿಲ್ಲ. ಶಸ್ತ್ರಗಳನ್ನು ಕೆಳಗಿಟ್ಟು ತಲೆ ಬಾಗುವುದಿಲ್ಲ ಎಂದು ಹಿಜ್ಬುಲ್ಲಾ ಸಂಘಟನೆ ನಾಯಕ ನಯೀಮ್ ಖ್ವಾಸೆಮ್ ಭಾನುವಾರ ಹೇಳಿದ್ದಾರೆ.</p><p>ಹಿಜ್ಬುಲ್ಲಾದ ಭದ್ರಕೋಟೆ ಎನಿಸಿರುವ ಬೈರೂತ್ನ ಉಪನಗರಗಳಲ್ಲಿ ಶಿಯಾ ಮುಸ್ಲಿಮರ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಾವಿರಾರು ಬೆಂಬಲಿಗರನ್ನುದ್ದೇಶಿಸಿ ದೂರದರ್ಶನದಲ್ಲಿ ಮಾತನಾಡಿರುವ ನಯೀಮ್, 'ಇಂತಹ ಬೆದರಿಕೆಗಳಿಂದ ನಮ್ಮನ್ನು ಶರಣಾಗತರನ್ನಾಗಿಸಲು ಸಾಧ್ಯವಿಲ್ಲ' ಎಂದಿದ್ದಾರೆ.</p><p>ದೀರ್ಘ ಸಮಯದಿಂದ ಸಂಘಟನೆಯ ನಾಯಕರಾಗಿದ್ದ ಹಸನ್ ನಸ್ರಲ್ಲಾ ಅವರು ಕಳೆದ ವರ್ಷ ಇಸ್ರೇಲ್ ನಡೆಸಿದ ದಾಳಿಯಲ್ಲಿ ಹತ್ಯೆಯಾಗಿದ್ದಾರೆ. ನಂತರ ಅಧಿಕಾರ ವಹಿಸಿಕೊಂಡಿರುವ ಖ್ವಾಸೆಮ್, ಹೋರಾಟವನ್ನು ಕೊನೆಗೊಳಿಸಲು ನವೆಂಬರ್ನಲ್ಲಿ ಮಾಡಿಕೊಂಡಿರುವ ಕದನ ವಿರಾಮವನ್ನು ಇಸ್ರೇಲ್ ಪಾಲಿಸಬೇಕು ಎಂದು ಒತ್ತಾಯಿಸಿದ್ದಾರೆ.</p><p>ಅಮೆರಿಕದ ರಾಜತಾಂತ್ರಿಕ ಅಧಿಕಾರಿ ಟಾಮ್ ಬರಾಕ್ ಅವರು ಬೈರೂತ್ಗೆ ಸೋಮವಾರ ಆಗಮಿಸುವ ನಿರೀಕ್ಷೆ ಇದೆ. ಇದೇ ವೇಳೆ, ಖ್ವಾಸೆಮ್ ಭಾಷಣ ಪ್ರಸಾರವಾಗಿದೆ.</p><p>ಇರಾನ್ ಬೆಂಬಲಿತ ಹಿಜ್ಬುಲ್ಲಾ ಸಂಘಟನೆಯನ್ನು ವರ್ಷಾಂತ್ಯದೊಳಗೆ ನಿಶ್ಯಸ್ತ್ರಗೊಳಿಸಬೇಕು ಎಂದು ಬರಾಕ್ ಈಗಾಗಲೇ ಒತ್ತಾಯಿಸಿದ್ದಾರೆ. ಈ ಕುರಿತು ಅಧಿಕಾರಿಗಳು ಪ್ರತಿಕ್ರಿಯಿಸುವ ಸಾಧ್ಯತೆ ಇದೆ ಎಂದು ಹೆಸರು ಬಹಿರಂಗಪಡಿಸಲು ಬಯಸದ ಲೆಬನಾನ್ ಅಧಿಕಾರಿಯೊಬ್ಬರು ಹೇಳಿದ್ದಾರೆ.</p><p>ಇಸ್ರೇಲ್ ಗಡಿಯಲ್ಲಿರುವ ಹಿಜ್ಬುಲ್ಲಾ ಮಿಲಿಟರಿ ಮೂಲಸೌಕರ್ಯಗಳನ್ನು ನಾಶಮಾಡುತ್ತಿರುವುದಾಗಿ ಲೆಬನಾನ್ ಅಧಿಕಾರಿಗಳು ಹೇಳಿಕೊಂಡಿದ್ದಾರೆ.</p><p>ನವೆಂಬರ್ನಲ್ಲಿ ಮಾಡಿಕೊಂಡಿರುವ ಕದನ ವಿರಾಮ ಒಪ್ಪಂದದ ಹೊರತಾಗಿಯೂ ಇಸ್ರೇಲ್ ಪಡೆಗಳು, ಹಿಜ್ಬುಲ್ಲಾ ನೆಲೆಗಳನ್ನು ಗುರಿಯಾಗಿಸಿ ಲೆಬನಾನ್ ಮೇಲೆ ದಾಳಿ ಮುಂದುವರಿಸಿವೆ. ಉಗ್ರ ಸಂಘಟನೆಯನ್ನು ನಿಶ್ಯಸ್ತ್ರಗೊಳಿಸುವ ಕೆಲಸವನ್ನು ಲೆಬನಾನ್ ಸೂಕ್ತ ರೀತಿಯಲ್ಲಿ ಮಾಡುತ್ತಿಲ್ಲ ಎಂದು ಇಸ್ರೇಲ್ ಆರೋಪಿಸಿದೆ.</p><p>ಕದನ ವಿರಾಮ ಒಪ್ಪಂದದ ಪ್ರಕಾರ, ಹಿಜ್ಬುಲ್ಲಾ ತನ್ನ ಹೋರಾಟಗಾರರನ್ನು ದೇಶದ ಗಡಿಯಿಂದ ಸುಮಾರು 30 ಕಿ.ಮೀ. ದೂರದಲ್ಲಿರುವ ಲಿಟಾನಿ ನದಿಯ ಉತ್ತರ ಭಾಗಕ್ಕೆ ಕರೆದೊಯ್ಯಬೇಕು ಎಂದು ಇಸ್ರೇಲ್ ಷರತ್ತುಹಾಕಿದೆ.</p><p>ಅದೇ ರೀತಿ ಇಸ್ರೇಲ್ ಕೂಡ ತನ್ನ ಪಡೆಗಳು ಲೆಬನಾನ್ನಿಂದ ಹಿಂಪಡೆಯಬೇಕಿತ್ತು. ಆದರೆ, ಕಾರ್ಯತಂತ್ರದ ಭಾಗವೆಂದು ಐದು ಹಂತಗಳಲ್ಲಿ ಯೋಧರನ್ನು ನಿಯೋಜಿಸಿದೆ.</p>.Texas Floods | ದಿಢೀರ್ ಪ್ರವಾಹ; ಸಾವಿನ ಸಂಖ್ಯೆ 50ಕ್ಕೆ ಏರಿಕೆ.ಇಸ್ರೇಲ್ ವಿರುದ್ಧದ ಯುದ್ಧ ಬಳಿಕ ಮೊದಲ ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡ ಖಮೇನಿ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>