<p><strong>ಕಠ್ಮಂಡು</strong>: ತನ್ನ ನಾಗರಿಕರನ್ನು ರಷ್ಯಾ ಸೇನೆಗೆ ನೇಮಕ ಮಾಡಿಕೊಳ್ಳದಂತೆ ಹಾಗೂ ಉಕ್ರೇನ್ನಲ್ಲಿ ರಷ್ಯಾ ಪರ ಹೋರಾಡುತ್ತಿರುವ ತನ್ನ ಪ್ರಜೆಗಳನ್ನು ವಾಪಸ್ ಕರೆತರಲು ನೆರವಾಗುವಂತೆ ನೇಪಾಳ ಸರ್ಕಾರವು ರಷ್ಯಾಗೆ ಮನವಿ ಮಾಡಿದೆ.</p><p>ಉಕ್ರೇನ್ನಲ್ಲಿ ಆಕ್ರಮಣ ನಡೆಸುತ್ತಿರುವ ರಷ್ಯಾ ಸೇನೆಗೆ ನೇಪಾಳದ ಕನಿಷ್ಠ 200 ನಾಗರಿಕರು ಕಾನೂನುಬಾಹಿರವಾಗಿ ಸೇರ್ಪಡೆಯಾಗಿದ್ದಾರೆ. ಅದರಲ್ಲಿ 12 ಮಂದಿ ಈಗಾಗಲೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.</p><p>ಉಗಾಂಡದ ಕಂಪಾಲದಲ್ಲಿ ನಡೆಯುತ್ತಿರುವ ಆಲಿಪ್ತ ರಾಷ್ಟ್ರಗಳ ಸಮಾವೇಶದ ವೇಳೆ ರಷ್ಯಾ ವಿದೇಶಾಂಗ ಇಲಾಖೆಯ ಉಪ ಸಚಿವ ವೆರ್ಷಿನಿನ್ ಸೆರ್ಗೇ ವಸಿಲಿಯೆವಿಚ್ ಅವರೊಂದಿಗೆ ನೇಪಾಳ ವಿದೇಶಾಂಗ ಸಚಿವ ಎನ್.ಪಿ.ಸೌದ್ ಶುಕ್ರವಾರ ಮಾತುಕತೆ ನಡೆಸಿದ್ದಾರೆ. ಈ ವೇಳೆ ಸೌದ್ ಅವರು, 'ನೇಪಾಳದ ನಾಗರಿಕರನ್ನು ರಷ್ಯಾ ಸೇನೆಗೆ ನೇಮಕ ಮಾಡಿಕೊಳ್ಳದಿರಿ ಮತ್ತು ಈಗಾಗಲೇ ಸೇನೆಗೆ ಸೇರಿಕೊಂಡಿರುವವರನ್ನು ವಾಪಸ್ ಕರೆತರಲು ನೆರವು ನೀಡಿ' ಎಂದು ಕೋರಿದ್ದಾರೆ. ಸೌದ್ ಅವರ ಆಪ್ತ ಕಾರ್ಯದರ್ಶಿ ಈ ಮಾಹಿತಿ ನೀಡಿದ್ದಾರೆ.</p><p>'ಸಾಂಪ್ರಾದಾಯಿಕ ವ್ಯವಸ್ಥೆ ಹೊಂದಿರುವ ಕೆಲವು ರಾಷ್ಟ್ರಗಳನ್ನು ಹೊರತುಪಡಿಸಿ, ವಿದೇಶಿ ಸೇನೆಗಳಿಗೆ ನಮ್ಮ ನಾಗರಿಕರನ್ನು ಕಳುಹಿಸುವ ಯಾವುದೇ ನಿಯಮವನ್ನು ನೇಪಾಳ ಹೊಂದಿಲ್ಲ. ಹಾಗಾಗಿಯೇ, ನಮ್ಮ ನಾಗರಿಕರನ್ನು ನೇಮಕ ಮಾಡಿಕೊಳ್ಳದಂತೆ ರಷ್ಯಾ ಸಚಿವರಿಗೆ ತಿಳಿಸಿದ್ದೇವೆ' ಎಂದು ಸೌದ್ ಸ್ಪಷ್ಟಪಡಿಸಿದ್ದಾರೆ.</p><p>ಉಕ್ರೇನ್ನಲ್ಲಿ ಹೋರಾಡುವ ವೇಳೆ ಮೃತಪಟ್ಟ ನೇಪಾಳ ನಾಗರಿಕರ ಶವಗಳನ್ನು ಕಳುಹಿಸಿಕೊಡುವಂತೆ ಮತ್ತು ಮೃತರ ಕುಟುಂಬಗಳಿಗೆ ಸೂಕ್ತ ಪರಿಹಾರ ಒದಗಿಸುವಂತೆಯೂ ಸೆರ್ಗೇ ಅವರಿಗೆ ಹೇಳಲಾಗಿದೆ.</p><p>ಸಂತ್ರಸ್ತರ ಕುಟುಂಬದವರಿಗೆ ಪರಿಹಾರ ಕಲ್ಪಿಸಲು ರಷ್ಯಾ ಕಾನೂನಿನ ಅನುಸಾರ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ನೇಪಾಳದ ಕಳವಳ ಪರಿಹಾರಕ್ಕೆ ಒತ್ತು ನೀಡಲಾಗುವುದು ಎಂದು ಸೆರ್ಗೇ ತಿಳಿಸಿದ್ದಾರೆ.</p><p>ಇದೇ ವೇಳೆ, ಎರಡೂ ರಾಷ್ಟ್ರಗಳ ನಡುವಣ ದ್ವಿಪಕ್ಷೀಯ ಸಂಬಂಧ ವೃದ್ಧಿ ವಿಚಾರವಾಗಿ ಉಭಯ ನಾಯಕರು ಚರ್ಚಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಠ್ಮಂಡು</strong>: ತನ್ನ ನಾಗರಿಕರನ್ನು ರಷ್ಯಾ ಸೇನೆಗೆ ನೇಮಕ ಮಾಡಿಕೊಳ್ಳದಂತೆ ಹಾಗೂ ಉಕ್ರೇನ್ನಲ್ಲಿ ರಷ್ಯಾ ಪರ ಹೋರಾಡುತ್ತಿರುವ ತನ್ನ ಪ್ರಜೆಗಳನ್ನು ವಾಪಸ್ ಕರೆತರಲು ನೆರವಾಗುವಂತೆ ನೇಪಾಳ ಸರ್ಕಾರವು ರಷ್ಯಾಗೆ ಮನವಿ ಮಾಡಿದೆ.</p><p>ಉಕ್ರೇನ್ನಲ್ಲಿ ಆಕ್ರಮಣ ನಡೆಸುತ್ತಿರುವ ರಷ್ಯಾ ಸೇನೆಗೆ ನೇಪಾಳದ ಕನಿಷ್ಠ 200 ನಾಗರಿಕರು ಕಾನೂನುಬಾಹಿರವಾಗಿ ಸೇರ್ಪಡೆಯಾಗಿದ್ದಾರೆ. ಅದರಲ್ಲಿ 12 ಮಂದಿ ಈಗಾಗಲೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.</p><p>ಉಗಾಂಡದ ಕಂಪಾಲದಲ್ಲಿ ನಡೆಯುತ್ತಿರುವ ಆಲಿಪ್ತ ರಾಷ್ಟ್ರಗಳ ಸಮಾವೇಶದ ವೇಳೆ ರಷ್ಯಾ ವಿದೇಶಾಂಗ ಇಲಾಖೆಯ ಉಪ ಸಚಿವ ವೆರ್ಷಿನಿನ್ ಸೆರ್ಗೇ ವಸಿಲಿಯೆವಿಚ್ ಅವರೊಂದಿಗೆ ನೇಪಾಳ ವಿದೇಶಾಂಗ ಸಚಿವ ಎನ್.ಪಿ.ಸೌದ್ ಶುಕ್ರವಾರ ಮಾತುಕತೆ ನಡೆಸಿದ್ದಾರೆ. ಈ ವೇಳೆ ಸೌದ್ ಅವರು, 'ನೇಪಾಳದ ನಾಗರಿಕರನ್ನು ರಷ್ಯಾ ಸೇನೆಗೆ ನೇಮಕ ಮಾಡಿಕೊಳ್ಳದಿರಿ ಮತ್ತು ಈಗಾಗಲೇ ಸೇನೆಗೆ ಸೇರಿಕೊಂಡಿರುವವರನ್ನು ವಾಪಸ್ ಕರೆತರಲು ನೆರವು ನೀಡಿ' ಎಂದು ಕೋರಿದ್ದಾರೆ. ಸೌದ್ ಅವರ ಆಪ್ತ ಕಾರ್ಯದರ್ಶಿ ಈ ಮಾಹಿತಿ ನೀಡಿದ್ದಾರೆ.</p><p>'ಸಾಂಪ್ರಾದಾಯಿಕ ವ್ಯವಸ್ಥೆ ಹೊಂದಿರುವ ಕೆಲವು ರಾಷ್ಟ್ರಗಳನ್ನು ಹೊರತುಪಡಿಸಿ, ವಿದೇಶಿ ಸೇನೆಗಳಿಗೆ ನಮ್ಮ ನಾಗರಿಕರನ್ನು ಕಳುಹಿಸುವ ಯಾವುದೇ ನಿಯಮವನ್ನು ನೇಪಾಳ ಹೊಂದಿಲ್ಲ. ಹಾಗಾಗಿಯೇ, ನಮ್ಮ ನಾಗರಿಕರನ್ನು ನೇಮಕ ಮಾಡಿಕೊಳ್ಳದಂತೆ ರಷ್ಯಾ ಸಚಿವರಿಗೆ ತಿಳಿಸಿದ್ದೇವೆ' ಎಂದು ಸೌದ್ ಸ್ಪಷ್ಟಪಡಿಸಿದ್ದಾರೆ.</p><p>ಉಕ್ರೇನ್ನಲ್ಲಿ ಹೋರಾಡುವ ವೇಳೆ ಮೃತಪಟ್ಟ ನೇಪಾಳ ನಾಗರಿಕರ ಶವಗಳನ್ನು ಕಳುಹಿಸಿಕೊಡುವಂತೆ ಮತ್ತು ಮೃತರ ಕುಟುಂಬಗಳಿಗೆ ಸೂಕ್ತ ಪರಿಹಾರ ಒದಗಿಸುವಂತೆಯೂ ಸೆರ್ಗೇ ಅವರಿಗೆ ಹೇಳಲಾಗಿದೆ.</p><p>ಸಂತ್ರಸ್ತರ ಕುಟುಂಬದವರಿಗೆ ಪರಿಹಾರ ಕಲ್ಪಿಸಲು ರಷ್ಯಾ ಕಾನೂನಿನ ಅನುಸಾರ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ನೇಪಾಳದ ಕಳವಳ ಪರಿಹಾರಕ್ಕೆ ಒತ್ತು ನೀಡಲಾಗುವುದು ಎಂದು ಸೆರ್ಗೇ ತಿಳಿಸಿದ್ದಾರೆ.</p><p>ಇದೇ ವೇಳೆ, ಎರಡೂ ರಾಷ್ಟ್ರಗಳ ನಡುವಣ ದ್ವಿಪಕ್ಷೀಯ ಸಂಬಂಧ ವೃದ್ಧಿ ವಿಚಾರವಾಗಿ ಉಭಯ ನಾಯಕರು ಚರ್ಚಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>