<p class="title"><strong>ಕೊಲಂಬೊ</strong>:ಚೀನಾದ ಏಷ್ಯನ್ ಇನ್ಫ್ರಾಸ್ಟ್ರಕ್ಚರ್ ಇನ್ವೆಸ್ಟ್ಮೆಂಟ್ ಬ್ಯಾಂಕ್ ಶ್ರೀಲಂಕಾಕ್ಕೆ ₹76 ಸಾವಿರ ಕೋಟಿತುರ್ತು ಸಹಾಯ ನೀಡಲು ಒಪ್ಪಿದೆ ಎಂದು ದೇಶದ ಹಣಕಾಸು ಸಚಿವಾಲಯ ಭಾನುವಾರ ತಿಳಿಸಿದೆ.</p>.<p class="title">ವಿದೇಶಿ ವಿನಿಮಯದ ಕೊರತೆ ಎದುರಿಸುತ್ತಿರುವಾಗ, ಸಾಲದಾತರಿಂದ ಸ್ಟೇಟ್ ಬ್ಯಾಂಕ್ಗಳಿಗೆ ವಿದೇಶಿ ವಿನಿಮಯಕ್ಕೆ ಅಗತ್ಯವಿರುವ ನಗದು ಲಭ್ಯತೆಯ ಬೆಂಬಲ ನೀಡುವಂತೆ ಶ್ರೀಲಂಕಾ ಕೋರಿತ್ತು ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ.</p>.<p>ಕೋವಿಡ್ ಸಾಂಕ್ರಾಮಿಕ, ಗಗನಕ್ಕೇರಿರುವ ತೈಲ ಬೆಲೆಗಳು ಮತ್ತು ಅಧ್ಯಕ್ಷ ಗೊಟಬಯ ರಾಜಪಕ್ಸ ಅವರ ಸರ್ಕಾರದ ಜನಪ್ರಿಯ ತೆರಿಗೆ ಕಡಿತದಿಂದಾಗಿ ದಕ್ಷಿಣ ಏಷ್ಯಾದ ದ್ವೀಪ ರಾಷ್ಟ್ರತೀವ್ರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದೆ. ಬಳಸಬಹುದಾದ ವಿದೇಶಿ ಮೀಸಲು ₹ 38 ಸಾವಿರ ಕೋಟಿಗೆ ಕುಸಿದಿದೆ ಎಂದು ಹಣಕಾಸು ಸಚಿವ ಅಲಿ ಸಬ್ರಿ ಕಳೆದ ವಾರವೇ ಹೇಳಿದ್ದರು.</p>.<p>ಆಹಾರ, ಇಂಧನ ಮತ್ತು ಔಷಧಿಗಳ ಆಮದು ಕೊರತೆಯಿಂದ ದೇಶದಲ್ಲಿ ಉದ್ಭವಿಸಿರುವ ಹಾಹಾಕಾರಕ್ಕೆ ಜನರು ಕಳೆದ ಒಂದು ತಿಂಗಳಿಂದ ಬೀದಿಗಿದು ಪ್ರತಿಭಟಿಸುತ್ತಿದ್ದಾರೆ. ಪರಿಸ್ಥಿತಿ ತಹಬದಿಗೆ ತರಲು ಅಧ್ಯಕ್ಷ ಗೊಟಬಯ ರಾಜಪಕ್ಸೆ ಅವರು ಶುಕ್ರವಾರ ಮತ್ತೆ ಎರಡನೇ ಬಾರಿಗೆ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ಕೊಲಂಬೊ</strong>:ಚೀನಾದ ಏಷ್ಯನ್ ಇನ್ಫ್ರಾಸ್ಟ್ರಕ್ಚರ್ ಇನ್ವೆಸ್ಟ್ಮೆಂಟ್ ಬ್ಯಾಂಕ್ ಶ್ರೀಲಂಕಾಕ್ಕೆ ₹76 ಸಾವಿರ ಕೋಟಿತುರ್ತು ಸಹಾಯ ನೀಡಲು ಒಪ್ಪಿದೆ ಎಂದು ದೇಶದ ಹಣಕಾಸು ಸಚಿವಾಲಯ ಭಾನುವಾರ ತಿಳಿಸಿದೆ.</p>.<p class="title">ವಿದೇಶಿ ವಿನಿಮಯದ ಕೊರತೆ ಎದುರಿಸುತ್ತಿರುವಾಗ, ಸಾಲದಾತರಿಂದ ಸ್ಟೇಟ್ ಬ್ಯಾಂಕ್ಗಳಿಗೆ ವಿದೇಶಿ ವಿನಿಮಯಕ್ಕೆ ಅಗತ್ಯವಿರುವ ನಗದು ಲಭ್ಯತೆಯ ಬೆಂಬಲ ನೀಡುವಂತೆ ಶ್ರೀಲಂಕಾ ಕೋರಿತ್ತು ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ.</p>.<p>ಕೋವಿಡ್ ಸಾಂಕ್ರಾಮಿಕ, ಗಗನಕ್ಕೇರಿರುವ ತೈಲ ಬೆಲೆಗಳು ಮತ್ತು ಅಧ್ಯಕ್ಷ ಗೊಟಬಯ ರಾಜಪಕ್ಸ ಅವರ ಸರ್ಕಾರದ ಜನಪ್ರಿಯ ತೆರಿಗೆ ಕಡಿತದಿಂದಾಗಿ ದಕ್ಷಿಣ ಏಷ್ಯಾದ ದ್ವೀಪ ರಾಷ್ಟ್ರತೀವ್ರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದೆ. ಬಳಸಬಹುದಾದ ವಿದೇಶಿ ಮೀಸಲು ₹ 38 ಸಾವಿರ ಕೋಟಿಗೆ ಕುಸಿದಿದೆ ಎಂದು ಹಣಕಾಸು ಸಚಿವ ಅಲಿ ಸಬ್ರಿ ಕಳೆದ ವಾರವೇ ಹೇಳಿದ್ದರು.</p>.<p>ಆಹಾರ, ಇಂಧನ ಮತ್ತು ಔಷಧಿಗಳ ಆಮದು ಕೊರತೆಯಿಂದ ದೇಶದಲ್ಲಿ ಉದ್ಭವಿಸಿರುವ ಹಾಹಾಕಾರಕ್ಕೆ ಜನರು ಕಳೆದ ಒಂದು ತಿಂಗಳಿಂದ ಬೀದಿಗಿದು ಪ್ರತಿಭಟಿಸುತ್ತಿದ್ದಾರೆ. ಪರಿಸ್ಥಿತಿ ತಹಬದಿಗೆ ತರಲು ಅಧ್ಯಕ್ಷ ಗೊಟಬಯ ರಾಜಪಕ್ಸೆ ಅವರು ಶುಕ್ರವಾರ ಮತ್ತೆ ಎರಡನೇ ಬಾರಿಗೆ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>