<p><strong>ಕೊಲಂಬೊ:</strong> ಹಣ ಪಾವತಿಸುವ ಬಗ್ಗೆ ಬ್ಯಾಂಕ್ ಖಾತರಿ (ಕ್ರೆಡಿಟ್ ಲೈನ್) ಆಧಾರದಲ್ಲಿ ಭಾರತದಿಂದ ಹೊಸದಾಗಿ ಪೆಟ್ರೋಲ್ ಎದುರುನೋಡುತ್ತಿರುವ ಶ್ರೀಲಂಕಾ, ಇನ್ನು ಮೂರು ದಿನಗಳಲ್ಲಿ ದೇಶಕ್ಕೆ ಮತ್ತಷ್ಟು ಪೆಟ್ರೋಲ್ ಲಭ್ಯವಾಗಲಿದೆ ಎಂದು ನಾಗರಿಕರಿಗೆ ಭರವಸೆ ನೀಡಿದೆ.</p>.<p>‘ಮಿತಿ ಮೀರಿ ಬಾಕಿ ಉಳಿಸಿಕೊಂಡಿರುವುದರಿಂದ ಪೂರೈಕೆದಾರರಿಂದ ತೈಲ ಪಡೆಯಲು ನಾವು ಹೆಣಗಾಡುತ್ತಿದ್ದೇವೆ’ ಎಂದು ವಿದ್ಯುತ್ ಮತ್ತು ಇಂಧನ ಸಚಿವ ಕಾಂಚನ ವಿಜೆಶೇಖರ ಸುದ್ದಿಗಾರರಿಗೆ ತಿಳಿಸಿದರು.</p>.<p>ತೀವ್ರ ಆರ್ಥಿಕ ಬಿಕ್ಕಟ್ಟು ಅನುಭವಿಸುತ್ತಿರುವ ಶ್ರೀಲಂಕಾ ಇಂಧನಕ್ಕೆ ಹಣ ಪಾವತಿಸಲು ಒದ್ದಾಡುತ್ತಿದೆ. ನಾಗರಿಕರು ಪೆಟ್ರೋಕ್, ಡೀಸೆಲ್ ಸಿಗದೆ ಪರಿತಪಿಸುತ್ತಿದ್ದಾರೆ. ಪೆಟ್ರೋಲ್ ಪಂಪ್ಗಳ ಎದುರು ವಾಹನಗಳು ಕಿಲೋಮೀಟರ್ಗಟ್ಟಲೆ ಸಾಲು ನಿಲ್ಲುವುದು ಶ್ರೀಲಂಕಾದಲ್ಲಿ ಸಾಮಾನ್ಯವಾಗಿದೆ.</p>.<p>ಈ ಮಧ್ಯೆ ಗುರುವಾರ, ಪೆಟ್ರೋಲ್ಗಾಗಿ ಸಾಲಿನಲ್ಲಿ ನಿಂತಿದ್ದ ಆಟೋಚಾಲಕರೊಬ್ಬರು ಹೃದಯಘಾತಕ್ಕೀಡಾಗಿ ಮೃತಪಟ್ಟಿದ್ದಾರೆ.</p>.<p>ಭಾರತವು 500 ದಶಲಕ್ಷ ಡಾಲರ್ (₹3,904 ಕೋಟಿ) ಕ್ರೆಡಿಟ್ ಲೈನ್ ಆಧಾರದಲ್ಲಿ ಈ ವರೆಗೆ ಎರಡು ಬಾರಿ ಇಂಧನ ಪೂರೈಕೆ ಮಾಡಿ ಸ್ಪಂದಿಸಿದೆ. ಭಾರತದ ಕ್ರಮವನ್ನು ಚೀನಾ ಕೂಡಾ ಕೊಂಡಾಡಿದೆ.</p>.<p><strong>ಇದನ್ನೂ ಓದಿ:</strong><a href="https://www.prajavani.net/world-news/indian-consignment-of-40000-mt-of-petrol-reaches-sri-lanka-939266.html" target="_blank">ಶ್ರೀಲಂಕಾಕ್ಕೆ 40,000 ಮೆಟ್ರಿಕ್ ಟನ್ ಪೆಟ್ರೋಲ್ ಪೂರೈಸಿ ನೆರವಾದ ಭಾರತ</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಲಂಬೊ:</strong> ಹಣ ಪಾವತಿಸುವ ಬಗ್ಗೆ ಬ್ಯಾಂಕ್ ಖಾತರಿ (ಕ್ರೆಡಿಟ್ ಲೈನ್) ಆಧಾರದಲ್ಲಿ ಭಾರತದಿಂದ ಹೊಸದಾಗಿ ಪೆಟ್ರೋಲ್ ಎದುರುನೋಡುತ್ತಿರುವ ಶ್ರೀಲಂಕಾ, ಇನ್ನು ಮೂರು ದಿನಗಳಲ್ಲಿ ದೇಶಕ್ಕೆ ಮತ್ತಷ್ಟು ಪೆಟ್ರೋಲ್ ಲಭ್ಯವಾಗಲಿದೆ ಎಂದು ನಾಗರಿಕರಿಗೆ ಭರವಸೆ ನೀಡಿದೆ.</p>.<p>‘ಮಿತಿ ಮೀರಿ ಬಾಕಿ ಉಳಿಸಿಕೊಂಡಿರುವುದರಿಂದ ಪೂರೈಕೆದಾರರಿಂದ ತೈಲ ಪಡೆಯಲು ನಾವು ಹೆಣಗಾಡುತ್ತಿದ್ದೇವೆ’ ಎಂದು ವಿದ್ಯುತ್ ಮತ್ತು ಇಂಧನ ಸಚಿವ ಕಾಂಚನ ವಿಜೆಶೇಖರ ಸುದ್ದಿಗಾರರಿಗೆ ತಿಳಿಸಿದರು.</p>.<p>ತೀವ್ರ ಆರ್ಥಿಕ ಬಿಕ್ಕಟ್ಟು ಅನುಭವಿಸುತ್ತಿರುವ ಶ್ರೀಲಂಕಾ ಇಂಧನಕ್ಕೆ ಹಣ ಪಾವತಿಸಲು ಒದ್ದಾಡುತ್ತಿದೆ. ನಾಗರಿಕರು ಪೆಟ್ರೋಕ್, ಡೀಸೆಲ್ ಸಿಗದೆ ಪರಿತಪಿಸುತ್ತಿದ್ದಾರೆ. ಪೆಟ್ರೋಲ್ ಪಂಪ್ಗಳ ಎದುರು ವಾಹನಗಳು ಕಿಲೋಮೀಟರ್ಗಟ್ಟಲೆ ಸಾಲು ನಿಲ್ಲುವುದು ಶ್ರೀಲಂಕಾದಲ್ಲಿ ಸಾಮಾನ್ಯವಾಗಿದೆ.</p>.<p>ಈ ಮಧ್ಯೆ ಗುರುವಾರ, ಪೆಟ್ರೋಲ್ಗಾಗಿ ಸಾಲಿನಲ್ಲಿ ನಿಂತಿದ್ದ ಆಟೋಚಾಲಕರೊಬ್ಬರು ಹೃದಯಘಾತಕ್ಕೀಡಾಗಿ ಮೃತಪಟ್ಟಿದ್ದಾರೆ.</p>.<p>ಭಾರತವು 500 ದಶಲಕ್ಷ ಡಾಲರ್ (₹3,904 ಕೋಟಿ) ಕ್ರೆಡಿಟ್ ಲೈನ್ ಆಧಾರದಲ್ಲಿ ಈ ವರೆಗೆ ಎರಡು ಬಾರಿ ಇಂಧನ ಪೂರೈಕೆ ಮಾಡಿ ಸ್ಪಂದಿಸಿದೆ. ಭಾರತದ ಕ್ರಮವನ್ನು ಚೀನಾ ಕೂಡಾ ಕೊಂಡಾಡಿದೆ.</p>.<p><strong>ಇದನ್ನೂ ಓದಿ:</strong><a href="https://www.prajavani.net/world-news/indian-consignment-of-40000-mt-of-petrol-reaches-sri-lanka-939266.html" target="_blank">ಶ್ರೀಲಂಕಾಕ್ಕೆ 40,000 ಮೆಟ್ರಿಕ್ ಟನ್ ಪೆಟ್ರೋಲ್ ಪೂರೈಸಿ ನೆರವಾದ ಭಾರತ</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>