<p><strong>ಕೈರೊ</strong>: ಸುಡಾನ್ನ ಕೊರ್ಡೊಫಾನ್ನ ಶಿಶುವಿಹಾರ ಮತ್ತು ಇತರ ಸ್ಥಳಗಳ ಮೇಲೆ ಕಳೆದ ವಾರ ನಡೆದ ಡ್ರೋನ್ ದಾಳಿಯಲ್ಲಿ 63 ಮಕ್ಕಳು ಸೇರಿದಂತೆ 114 ಮಂದಿ ಮೃತಪಟ್ಟಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಮುಖ್ಯಸ್ಥ ಸೋಮವಾರ ತಿಳಿಸಿದ್ದಾರೆ.</p>.<p>ಕಳೆದ ಗುರುವಾರ ಕಾಗೋಲಿಯಲ್ಲಿ ಪ್ರತ್ಯೇಕ ಡ್ರೋನ್ ದಾಳಿ ನಡೆದಿದೆ. ಮೊದಲು ಶಿಶುವಿಹಾರವನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ. ಬಳಿಕ ಬದುಕುಳಿದವರ ರಕ್ಷಣೆಯಲ್ಲಿ ತೊಡಗಿದ್ದ ವೈದ್ಯರ ಮೇಲೆ ದಾಳಿ ಮಾಡಲಾಗಿದೆ. ಸಂವಹನದ ಕಡಿತದಿಂದ ಆ ವೇಳೆ ಸಾವಿನ ನಿಖರ ಸಂಖ್ಯೆ ದೊರೆತಿರಲಿಲ್ಲ ಎಂದು ಡಬ್ಲ್ಯುಎಚ್ಒ ತಿಳಿಸಿದೆ.</p>.<p>‘ನಾಗರಿಕರು ಮತ್ತು ಆರೋಗ್ಯ ಸೌಲಭ್ಯಗಳ ಮೇಲಿನ ಈ ಅರ್ಥಹೀನ ದಾಳಿಯನ್ನು ವಿಶ್ವಸಂಸ್ಥೆ ಖಂಡಿಸುತ್ತದೆ ಮತ್ತು ಹಿಂಸಾಚಾರವನ್ನು ಕೊನೆಗೊಳಿಸಲು ಕರೆ ನೀಡುವ ಜೊತೆಗೆ ಮಾನವೀಯ ನೆರವನ್ನು ಹೆಚ್ಚಿಸುತ್ತದೆ’ ಎಂದು ಡಬ್ಲ್ಯುಎಚ್ಒ ನಿರ್ದೇಶಕ ಟೆಡ್ರೋಸ್ ಅದನೊಮ್ ಗೆಬ್ರಿಯೆಸಸ್ ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ತಿಳಿಸಿದ್ದಾರೆ.</p>.<p>ನಾಗರಿಕರ ಮೇಲಿನ ದಾಳಿಗೆ ಅರೆಸೇನಾ ಪಡೆಯ ಕ್ಷಿಪ್ರ ಕಾರ್ಯಪಡೆ ಕಾರಣ ಎಂದು ವೈದ್ಯರು ಆರೋಪಿಸಿದ್ದಾರೆ. ಸುಡಾನ್ನ ಸೇನಾ ಪಡೆ ಮತ್ತು ಅರೆಸೇನಾ ಪಡೆಯ ಕ್ಷಿಪ್ರ ಕಾರ್ಯಪಡೆ ನಡುವೆ ಎರಡು ವರ್ಷಗಳಿಂದ ಆತಂರಿಕ ಸಂಘರ್ಷ ನಡೆಯುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೈರೊ</strong>: ಸುಡಾನ್ನ ಕೊರ್ಡೊಫಾನ್ನ ಶಿಶುವಿಹಾರ ಮತ್ತು ಇತರ ಸ್ಥಳಗಳ ಮೇಲೆ ಕಳೆದ ವಾರ ನಡೆದ ಡ್ರೋನ್ ದಾಳಿಯಲ್ಲಿ 63 ಮಕ್ಕಳು ಸೇರಿದಂತೆ 114 ಮಂದಿ ಮೃತಪಟ್ಟಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಮುಖ್ಯಸ್ಥ ಸೋಮವಾರ ತಿಳಿಸಿದ್ದಾರೆ.</p>.<p>ಕಳೆದ ಗುರುವಾರ ಕಾಗೋಲಿಯಲ್ಲಿ ಪ್ರತ್ಯೇಕ ಡ್ರೋನ್ ದಾಳಿ ನಡೆದಿದೆ. ಮೊದಲು ಶಿಶುವಿಹಾರವನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ. ಬಳಿಕ ಬದುಕುಳಿದವರ ರಕ್ಷಣೆಯಲ್ಲಿ ತೊಡಗಿದ್ದ ವೈದ್ಯರ ಮೇಲೆ ದಾಳಿ ಮಾಡಲಾಗಿದೆ. ಸಂವಹನದ ಕಡಿತದಿಂದ ಆ ವೇಳೆ ಸಾವಿನ ನಿಖರ ಸಂಖ್ಯೆ ದೊರೆತಿರಲಿಲ್ಲ ಎಂದು ಡಬ್ಲ್ಯುಎಚ್ಒ ತಿಳಿಸಿದೆ.</p>.<p>‘ನಾಗರಿಕರು ಮತ್ತು ಆರೋಗ್ಯ ಸೌಲಭ್ಯಗಳ ಮೇಲಿನ ಈ ಅರ್ಥಹೀನ ದಾಳಿಯನ್ನು ವಿಶ್ವಸಂಸ್ಥೆ ಖಂಡಿಸುತ್ತದೆ ಮತ್ತು ಹಿಂಸಾಚಾರವನ್ನು ಕೊನೆಗೊಳಿಸಲು ಕರೆ ನೀಡುವ ಜೊತೆಗೆ ಮಾನವೀಯ ನೆರವನ್ನು ಹೆಚ್ಚಿಸುತ್ತದೆ’ ಎಂದು ಡಬ್ಲ್ಯುಎಚ್ಒ ನಿರ್ದೇಶಕ ಟೆಡ್ರೋಸ್ ಅದನೊಮ್ ಗೆಬ್ರಿಯೆಸಸ್ ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ತಿಳಿಸಿದ್ದಾರೆ.</p>.<p>ನಾಗರಿಕರ ಮೇಲಿನ ದಾಳಿಗೆ ಅರೆಸೇನಾ ಪಡೆಯ ಕ್ಷಿಪ್ರ ಕಾರ್ಯಪಡೆ ಕಾರಣ ಎಂದು ವೈದ್ಯರು ಆರೋಪಿಸಿದ್ದಾರೆ. ಸುಡಾನ್ನ ಸೇನಾ ಪಡೆ ಮತ್ತು ಅರೆಸೇನಾ ಪಡೆಯ ಕ್ಷಿಪ್ರ ಕಾರ್ಯಪಡೆ ನಡುವೆ ಎರಡು ವರ್ಷಗಳಿಂದ ಆತಂರಿಕ ಸಂಘರ್ಷ ನಡೆಯುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>