<p><strong>ವಾಷಿಂಗ್ಟನ್:</strong> ಉದ್ಯಮಿ ಗೌತಮ್ ಅದಾನಿ ಸೇರಿದಂತೆ ಅವರ ಕಂಪನಿಯ ವಿರುದ್ಧ ತನಿಖೆಗೆ ಅನುಮತಿ ನೀಡಿದ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರ ನಿರ್ಧಾರವನ್ನು ರಿಪಬ್ಲಿಕನ್ ಪಕ್ಷದ ಪ್ರಭಾವಿ ಸಂಸದ ಲಾನ್ಸ್ ಗೂಡೆನ್ ಅವರು ವಿರೋಧಿಸಿದ್ದಾರೆ. ಈ ಬಗ್ಗೆ ಅಮೆರಿಕದ ಅಟಾರ್ನಿ ಜನರಲ್ ಮೆರಿಕ್ ಬಿ. ಗಾರ್ಲೆಂಡ್ ಅವರಿಗೆ ಗೂಡೆನ್ ಅವರು ಜ.7ರಂದು ಪತ್ರ ಬರೆದಿದ್ದಾರೆ.</p>.<p>‘ಆಯ್ದ ಕೆಲವೇ ವಿದೇಶಿ ಉದ್ಯಮಿಗಳ ಮೇಲೆ ನ್ಯಾಯಾಂಗ ಇಲಾಖೆಯು ಕ್ರಮ ಕೈಗೊಳ್ಳುವುದು ಜಾಗತಿಕವಾಗಿ ದೇಶದ ಸಂಬಂಧ, ಆರ್ಥಿಕ ಬೆಳವಣಿಗೆಯನ್ನು ಹಾಳು ಮಾಡುತ್ತದೆ. ಈ ಪ್ರಕರಣದಲ್ಲಿ ಉದ್ಯಮಿ ಜಾರ್ಜ್ ಸೋರೋಸ್ ಅವರ ಕೈವಾಡವೇನಾದರೂ ಇದೆಯೇ’ ಎಂದು ನ್ಯಾಯಾಂಗ ಸಮಿತಿಯ ಸದಸ್ಯರೂ ಆಗಿರುವ ಲಾನ್ಸ್ ಗೂಡೆನ್ ಪ್ರಶ್ನಿಸಿದ್ದಾರೆ.</p>.<p>‘ಇಂಥ ನಿರ್ಧಾರಗಳಿಂದ ಭಾರತದಂಥ ಪ್ರಮುಖ ಪಾಲುದಾರ ದೇಶದೊಂದಿಗಿನ ಸಂಬಂಧ ಹಾಳಾಗುತ್ತವೆ. ನ್ಯಾಯಾಂಗ ಇಲಾಖೆಯು ಅಮೆರಿಕದ ಹಿತಾಸಕ್ತಿಗಾಗಿ ಕೆಲಸ ಮಾಡಬೇಕು. ದೇಶದೊಳಗೇ ಇರುವ ಘಾತುಕರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇದನ್ನು ಮಾಡುವ ಬದಲು ವಿದೇಶದಲ್ಲಿ ವದಂತಿಗಳನ್ನು ಹಬ್ಬಿಸಬಾರದು’ ಎಂದು ಅಭಿಪ್ರಾಯಪಟ್ಟಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಾಷಿಂಗ್ಟನ್:</strong> ಉದ್ಯಮಿ ಗೌತಮ್ ಅದಾನಿ ಸೇರಿದಂತೆ ಅವರ ಕಂಪನಿಯ ವಿರುದ್ಧ ತನಿಖೆಗೆ ಅನುಮತಿ ನೀಡಿದ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರ ನಿರ್ಧಾರವನ್ನು ರಿಪಬ್ಲಿಕನ್ ಪಕ್ಷದ ಪ್ರಭಾವಿ ಸಂಸದ ಲಾನ್ಸ್ ಗೂಡೆನ್ ಅವರು ವಿರೋಧಿಸಿದ್ದಾರೆ. ಈ ಬಗ್ಗೆ ಅಮೆರಿಕದ ಅಟಾರ್ನಿ ಜನರಲ್ ಮೆರಿಕ್ ಬಿ. ಗಾರ್ಲೆಂಡ್ ಅವರಿಗೆ ಗೂಡೆನ್ ಅವರು ಜ.7ರಂದು ಪತ್ರ ಬರೆದಿದ್ದಾರೆ.</p>.<p>‘ಆಯ್ದ ಕೆಲವೇ ವಿದೇಶಿ ಉದ್ಯಮಿಗಳ ಮೇಲೆ ನ್ಯಾಯಾಂಗ ಇಲಾಖೆಯು ಕ್ರಮ ಕೈಗೊಳ್ಳುವುದು ಜಾಗತಿಕವಾಗಿ ದೇಶದ ಸಂಬಂಧ, ಆರ್ಥಿಕ ಬೆಳವಣಿಗೆಯನ್ನು ಹಾಳು ಮಾಡುತ್ತದೆ. ಈ ಪ್ರಕರಣದಲ್ಲಿ ಉದ್ಯಮಿ ಜಾರ್ಜ್ ಸೋರೋಸ್ ಅವರ ಕೈವಾಡವೇನಾದರೂ ಇದೆಯೇ’ ಎಂದು ನ್ಯಾಯಾಂಗ ಸಮಿತಿಯ ಸದಸ್ಯರೂ ಆಗಿರುವ ಲಾನ್ಸ್ ಗೂಡೆನ್ ಪ್ರಶ್ನಿಸಿದ್ದಾರೆ.</p>.<p>‘ಇಂಥ ನಿರ್ಧಾರಗಳಿಂದ ಭಾರತದಂಥ ಪ್ರಮುಖ ಪಾಲುದಾರ ದೇಶದೊಂದಿಗಿನ ಸಂಬಂಧ ಹಾಳಾಗುತ್ತವೆ. ನ್ಯಾಯಾಂಗ ಇಲಾಖೆಯು ಅಮೆರಿಕದ ಹಿತಾಸಕ್ತಿಗಾಗಿ ಕೆಲಸ ಮಾಡಬೇಕು. ದೇಶದೊಳಗೇ ಇರುವ ಘಾತುಕರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇದನ್ನು ಮಾಡುವ ಬದಲು ವಿದೇಶದಲ್ಲಿ ವದಂತಿಗಳನ್ನು ಹಬ್ಬಿಸಬಾರದು’ ಎಂದು ಅಭಿಪ್ರಾಯಪಟ್ಟಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>