<p><strong>ಉಳ್ಳಾಲದಲ್ಲಿ ಅಧಿಕ ಪ್ರಮಾಣದ ವಿಕಿರಣ</strong></p>.<p><strong>ಉಳ್ಳಾಲ, ಮೇ 7 (ಪಿಟಿಐ)–</strong> ಈ ಪ್ರದೇಶದಲ್ಲಿ ಅತ್ಯಧಿಕ ಪ್ರಮಾಣದ ಸ್ವಾಭಾವಿಕ ವಿಕಿರಣವಿದೆಯೆಂದು ಮಂಗಳೂರು ವಿಶ್ವವಿದ್ಯಾಲಯದ ಸಂಶೋಧಕರು ಪತ್ತೆ ಹಚ್ಚಿದ್ದಾರೆ. ಇದರಿಂದ, 30,000 ಜನಸಂಖ್ಯೆ ಹೊಂದಿರುವ ಮೀನುಗಾರಿಕೆಗೆ ಹೆಸರಾದ ಕರಾವಳಿ ಗ್ರಾಮ ಉಳ್ಳಾಲವು ವಿಶ್ವದ ಗಮನ ಸೆಳೆದಿದೆ.</p>.<p>ಅತ್ಯಧಿಕ ಸ್ವಾಭಾವಿಕ ವಿಕಿರಣ ಹೊಂದಿರುವ ವಿಶ್ವದ ಮೂರು ಸ್ಥಳಗಳ ಜೊತೆ ಈಗ ಉಳ್ಳಾಲ ನಾಲ್ಕನೇ ಮತ್ತು ದೇಶದ ಎರಡನೇ ಪ್ರದೇಶವಾಗಿ ಸೇರಿಕೊಂಡಿದೆ. ವಿಶ್ವದ ಇಂತಹ ಇತರ ಮೂರು ಪ್ರದೇಶಗಳೆಂದರೆ, ಬ್ರೆಜಿಲ್, ಚೀನಾದ ಕರಾವಳಿ ಗ್ರಾಮ ಹಾಗೂ ಕೇರಳದ ಕೊಲ್ಲಂ ಜಿಲ್ಲೆ.</p>.<p><strong>ಸರ್ಕಾರಿ ವೈದ್ಯರಿಂದ ಖಾಸಗಿ ಆಸ್ಪತ್ರೆಗಳಲ್ಲಿ ಸೇವೆಗೆ ನಿಷೇಧ</strong></p>.<p><strong>ಬೆಂಗಳೂರು, ಮೇ 7–</strong> ನರ್ಸಿಂಗ್ ಹೋಮ್ಗಳನ್ನು ನಿಯಂತ್ರಿಸಲು ಕಾನೂನು, ಸರ್ಕಾರಿ ವೈದ್ಯರುಗಳು ಖಾಸಗಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುವುದಕ್ಕೆ ನಿಷೇಧ ಹಾಗೂ ವೈದ್ಯರು ಮತ್ತು ಅರೆವೈದ್ಯಕೀಯ ಸಿಬ್ಬಂದಿಯ ಸೇವೆಯನ್ನು ಅಗತ್ಯ ಸೇವಾ ವ್ಯಾಪ್ತಿಗೆ ತರಲು ಸರ್ಕಾರ ನಿರ್ಧರಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉಳ್ಳಾಲದಲ್ಲಿ ಅಧಿಕ ಪ್ರಮಾಣದ ವಿಕಿರಣ</strong></p>.<p><strong>ಉಳ್ಳಾಲ, ಮೇ 7 (ಪಿಟಿಐ)–</strong> ಈ ಪ್ರದೇಶದಲ್ಲಿ ಅತ್ಯಧಿಕ ಪ್ರಮಾಣದ ಸ್ವಾಭಾವಿಕ ವಿಕಿರಣವಿದೆಯೆಂದು ಮಂಗಳೂರು ವಿಶ್ವವಿದ್ಯಾಲಯದ ಸಂಶೋಧಕರು ಪತ್ತೆ ಹಚ್ಚಿದ್ದಾರೆ. ಇದರಿಂದ, 30,000 ಜನಸಂಖ್ಯೆ ಹೊಂದಿರುವ ಮೀನುಗಾರಿಕೆಗೆ ಹೆಸರಾದ ಕರಾವಳಿ ಗ್ರಾಮ ಉಳ್ಳಾಲವು ವಿಶ್ವದ ಗಮನ ಸೆಳೆದಿದೆ.</p>.<p>ಅತ್ಯಧಿಕ ಸ್ವಾಭಾವಿಕ ವಿಕಿರಣ ಹೊಂದಿರುವ ವಿಶ್ವದ ಮೂರು ಸ್ಥಳಗಳ ಜೊತೆ ಈಗ ಉಳ್ಳಾಲ ನಾಲ್ಕನೇ ಮತ್ತು ದೇಶದ ಎರಡನೇ ಪ್ರದೇಶವಾಗಿ ಸೇರಿಕೊಂಡಿದೆ. ವಿಶ್ವದ ಇಂತಹ ಇತರ ಮೂರು ಪ್ರದೇಶಗಳೆಂದರೆ, ಬ್ರೆಜಿಲ್, ಚೀನಾದ ಕರಾವಳಿ ಗ್ರಾಮ ಹಾಗೂ ಕೇರಳದ ಕೊಲ್ಲಂ ಜಿಲ್ಲೆ.</p>.<p><strong>ಸರ್ಕಾರಿ ವೈದ್ಯರಿಂದ ಖಾಸಗಿ ಆಸ್ಪತ್ರೆಗಳಲ್ಲಿ ಸೇವೆಗೆ ನಿಷೇಧ</strong></p>.<p><strong>ಬೆಂಗಳೂರು, ಮೇ 7–</strong> ನರ್ಸಿಂಗ್ ಹೋಮ್ಗಳನ್ನು ನಿಯಂತ್ರಿಸಲು ಕಾನೂನು, ಸರ್ಕಾರಿ ವೈದ್ಯರುಗಳು ಖಾಸಗಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುವುದಕ್ಕೆ ನಿಷೇಧ ಹಾಗೂ ವೈದ್ಯರು ಮತ್ತು ಅರೆವೈದ್ಯಕೀಯ ಸಿಬ್ಬಂದಿಯ ಸೇವೆಯನ್ನು ಅಗತ್ಯ ಸೇವಾ ವ್ಯಾಪ್ತಿಗೆ ತರಲು ಸರ್ಕಾರ ನಿರ್ಧರಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>