<p><strong>ಚಂದ್ರಾಸ್ವಾಮಿ ಹಾರಿಕೆ ಉತ್ತರ, ಜೈನ್ ಎಚ್ಚರಿಕೆ</strong></p>.<p><strong>ನವದೆಹಲಿ, ಅ. 9 (ಯುಎನ್ಐ)– </strong>ವಿವಾದಾತ್ಮಕ ಸಾಧು ಚಂದ್ರಾಸ್ವಾಮಿ ಅವರು ಇಂದು ಜೈನ್ ಆಯೋಗದ ಮುಂದೆ ಪಾಟೀ ಸವಾಲಿಗೆ ಹಾರಿಕೆಯ ಉತ್ತರ ನೀಡಿದಾಗ, ಆಯೋಗದ ಅಧ್ಯಕ್ಷರು ಅವರಿಗೆ ಎಚ್ಚರಿಕೆ ಹೇಳಿ ನೇರ ಉತ್ತರ ಕೊಡುವಂತೆ ಆದೇಶಿಸಿದರು.</p>.<p>‘ಇಂಗ್ಲೆಂಡಿನ ಹೈಕೋರ್ಟಿನಲ್ಲಿ ಲಕ್ಕೂಭಾಯಿ ಪಾಠಕ್ ಎಂಬುವರ ಮೇಲೆ ಮಾನನಷ್ಟ ಮೊಕದ್ದಮೆ ಹೂಡಿದ್ದಿರಾ?’ ಎಂಬ ಪ್ರಶ್ನೆಗೆ ‘ನನಗೆ ನೆನಪಿಲ್ಲ’ ಎಂದು ಉತ್ತರಿಸಿದಾಗ ಜೈನ್ ಅವರು ಹೀಗೆ ಎಚ್ಚರಿಸಿದರು.</p>.<p>‘ಸಾಧು ಆಗುವ ಮೊದಲು ಎಷ್ಟುಬಾರಿ ಜೈಲಿಗೆ ಹೋಗಿದ್ದಿರಿ?’ ಎಂದು ಪಾಟೀಸವಾಲಿನಲ್ಲಿ ಪದೇಪದೇ ಕೇಳಿದಾಗ ಸ್ವಾಮಿ ಹಾರಿಕೆಯ ಉತ್ತರ ನೀಡಿದಾಗಲೂ ಈ ಎಚ್ಚರಿಕೆ ನೀಡಿ, ‘ಸರಿಯಾಗಿ ಉತ್ತರ ಕೊಡದಿದ್ದರೆ ಸುಳ್ಳುಹೇಳುತ್ತಿದ್ದೀರಿ ಎಂಬ ತೀರ್ಮಾನಕ್ಕೆ ಬರಬೇಕಾಗುತ್ತದೆ’ ಎಂದು ನ್ಯಾಯಾಧೀಶರು ಎಚ್ಚರಿಸಿದರು.</p>.<p>ಕೆ.ಕೆ. ತಿವಾರಿ ಅವರು ಕೇಳಿದ ಇಂತಹ ಪ್ರಶ್ನೆಗಳಿಗೆ ಚಂದ್ರಾಸ್ವಾಮಿ ಉತ್ತರ ನೀಡದೆ ಸುಮ್ಮನೆ ನಿಂತಾಗ ‘ನೀವು ದೇವರ ಹತ್ತಿರ ಇದ್ದೀರಿ, ನಿಜ ಹೇಳಿ’ ಎಂದು ನ್ಯಾಯಾಧೀಶರು ಹೇಳಿದರು.</p>.<p>ಆಯೋಗದ ಅಧ್ಯಕ್ಷರು ತರಾಟೆಗೆ ತೆಗೆದುಕೊಂಡ ಮೇಲೆ, ತಾವು ಹಿಂದೆ ಎರಡು ಬಾರಿ ಜೈಲಿಗೆ ಹೋಗಿದ್ದಾಗಿ ತಿಳಿಸಿದರು.</p>.<p><strong>ರಾಜೀನಾಮೆ ಕೊಡುವುದಿಲ್ಲ: ದೇವೇಗೌಡರ ಸವಾಲು</strong></p>.<p><strong>ಮೈಸೂರು, ಅ. 9– </strong>ತಮ್ಮ ಮೇಲೆ ‘ವಿಶ್ವಾಸವಿಟ್ಟ ಜನತೆಯ ಋಣ ತೀರಿಸಿಯೇ ಹೋಗಲು’ ನಿರ್ಧರಿಸಿರುವ ಮುಖ್ಯಮಂತ್ರಿ ದೇವೇಗೌಡ ಅವರು ಪ್ರತಿಪಕ್ಷಗಳ ಒತ್ತಾಯಕ್ಕೆ ಮಣಿದು ‘ರಾಜೀನಾಮೆ ಕೊಡುವ ತಪ್ಪು ಮಾಡುವುದಿಲ್ಲ’ ಎಂಬ ತಮ್ಮ ತೀರ್ಮಾನವನ್ನು ಇಂದಿಲ್ಲಿ ಪ್ರಕಟಿಸಿದರು.</p>.<p>ಇಲ್ಲಿನ ಪುರಭವನದ ಮೈದಾನದಲ್ಲಿ ಹದಿನೈದು ಸಾವಿರಕ್ಕೂ ಮಿಕ್ಕಿ ಜನರು ಭಾಗವಹಿಸಿದ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ, ಭಾರತೀಯ ಜನತಾ ಪಕ್ಷ, ಕಾಂಗ್ರೆಸ್, ರೈತ ಸಂಘ ಮತ್ತು ಕನ್ನಡ ಚಳವಳಿ ಪಕ್ಷಗಳು ತಮ್ಮ ರಾಜೀನಾಮೆಗೆ ಒತ್ತಾಯಿಸುತ್ತಿರುವುದನ್ನು ಪ್ರಸ್ತಾಪಿಸಿ, ಈ ಪ್ರಶ್ನೆಗೆ ಉತ್ತರ ಕೇಳಲು ತಾವು ‘ಜನತಾ ನ್ಯಾಯಾಲಯ’ಕ್ಕೆ ಬಂದಿರುವುದಾಗಿ ತಿಳಿಸಿದರು.</p>.<p>‘ನಾನು ರಾಜೀನಾಮೆ ಕೊಡಬೇಕೋ ಬೇಡವೋ ಎಂಬುದನ್ನು ನೀವೇ ಹೇಳಿ?’ ಎಂದು ಸಭಿಕರಿಗೆ ಪ್ರಶ್ನೆ ಹಾಕಿದ ಮುಖ್ಯಮಂತ್ರಿ ಉತ್ತರಕ್ಕಾಗಿ ಕಾದರು. ‘ಬೇಡ, ಬೇಡ’ ಎಂದು ಸಭಿಕರು ಹೇಳಿ ದಾಗ ಅವರಿಂದ ಕೈ ಎತ್ತಿಸಿ ತಮ್ಮ ಬೆಂಬಲ ವನ್ನು ಖಚಿತಪಡಿಸಿಕೊಂಡು ಕೂತರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಂದ್ರಾಸ್ವಾಮಿ ಹಾರಿಕೆ ಉತ್ತರ, ಜೈನ್ ಎಚ್ಚರಿಕೆ</strong></p>.<p><strong>ನವದೆಹಲಿ, ಅ. 9 (ಯುಎನ್ಐ)– </strong>ವಿವಾದಾತ್ಮಕ ಸಾಧು ಚಂದ್ರಾಸ್ವಾಮಿ ಅವರು ಇಂದು ಜೈನ್ ಆಯೋಗದ ಮುಂದೆ ಪಾಟೀ ಸವಾಲಿಗೆ ಹಾರಿಕೆಯ ಉತ್ತರ ನೀಡಿದಾಗ, ಆಯೋಗದ ಅಧ್ಯಕ್ಷರು ಅವರಿಗೆ ಎಚ್ಚರಿಕೆ ಹೇಳಿ ನೇರ ಉತ್ತರ ಕೊಡುವಂತೆ ಆದೇಶಿಸಿದರು.</p>.<p>‘ಇಂಗ್ಲೆಂಡಿನ ಹೈಕೋರ್ಟಿನಲ್ಲಿ ಲಕ್ಕೂಭಾಯಿ ಪಾಠಕ್ ಎಂಬುವರ ಮೇಲೆ ಮಾನನಷ್ಟ ಮೊಕದ್ದಮೆ ಹೂಡಿದ್ದಿರಾ?’ ಎಂಬ ಪ್ರಶ್ನೆಗೆ ‘ನನಗೆ ನೆನಪಿಲ್ಲ’ ಎಂದು ಉತ್ತರಿಸಿದಾಗ ಜೈನ್ ಅವರು ಹೀಗೆ ಎಚ್ಚರಿಸಿದರು.</p>.<p>‘ಸಾಧು ಆಗುವ ಮೊದಲು ಎಷ್ಟುಬಾರಿ ಜೈಲಿಗೆ ಹೋಗಿದ್ದಿರಿ?’ ಎಂದು ಪಾಟೀಸವಾಲಿನಲ್ಲಿ ಪದೇಪದೇ ಕೇಳಿದಾಗ ಸ್ವಾಮಿ ಹಾರಿಕೆಯ ಉತ್ತರ ನೀಡಿದಾಗಲೂ ಈ ಎಚ್ಚರಿಕೆ ನೀಡಿ, ‘ಸರಿಯಾಗಿ ಉತ್ತರ ಕೊಡದಿದ್ದರೆ ಸುಳ್ಳುಹೇಳುತ್ತಿದ್ದೀರಿ ಎಂಬ ತೀರ್ಮಾನಕ್ಕೆ ಬರಬೇಕಾಗುತ್ತದೆ’ ಎಂದು ನ್ಯಾಯಾಧೀಶರು ಎಚ್ಚರಿಸಿದರು.</p>.<p>ಕೆ.ಕೆ. ತಿವಾರಿ ಅವರು ಕೇಳಿದ ಇಂತಹ ಪ್ರಶ್ನೆಗಳಿಗೆ ಚಂದ್ರಾಸ್ವಾಮಿ ಉತ್ತರ ನೀಡದೆ ಸುಮ್ಮನೆ ನಿಂತಾಗ ‘ನೀವು ದೇವರ ಹತ್ತಿರ ಇದ್ದೀರಿ, ನಿಜ ಹೇಳಿ’ ಎಂದು ನ್ಯಾಯಾಧೀಶರು ಹೇಳಿದರು.</p>.<p>ಆಯೋಗದ ಅಧ್ಯಕ್ಷರು ತರಾಟೆಗೆ ತೆಗೆದುಕೊಂಡ ಮೇಲೆ, ತಾವು ಹಿಂದೆ ಎರಡು ಬಾರಿ ಜೈಲಿಗೆ ಹೋಗಿದ್ದಾಗಿ ತಿಳಿಸಿದರು.</p>.<p><strong>ರಾಜೀನಾಮೆ ಕೊಡುವುದಿಲ್ಲ: ದೇವೇಗೌಡರ ಸವಾಲು</strong></p>.<p><strong>ಮೈಸೂರು, ಅ. 9– </strong>ತಮ್ಮ ಮೇಲೆ ‘ವಿಶ್ವಾಸವಿಟ್ಟ ಜನತೆಯ ಋಣ ತೀರಿಸಿಯೇ ಹೋಗಲು’ ನಿರ್ಧರಿಸಿರುವ ಮುಖ್ಯಮಂತ್ರಿ ದೇವೇಗೌಡ ಅವರು ಪ್ರತಿಪಕ್ಷಗಳ ಒತ್ತಾಯಕ್ಕೆ ಮಣಿದು ‘ರಾಜೀನಾಮೆ ಕೊಡುವ ತಪ್ಪು ಮಾಡುವುದಿಲ್ಲ’ ಎಂಬ ತಮ್ಮ ತೀರ್ಮಾನವನ್ನು ಇಂದಿಲ್ಲಿ ಪ್ರಕಟಿಸಿದರು.</p>.<p>ಇಲ್ಲಿನ ಪುರಭವನದ ಮೈದಾನದಲ್ಲಿ ಹದಿನೈದು ಸಾವಿರಕ್ಕೂ ಮಿಕ್ಕಿ ಜನರು ಭಾಗವಹಿಸಿದ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ, ಭಾರತೀಯ ಜನತಾ ಪಕ್ಷ, ಕಾಂಗ್ರೆಸ್, ರೈತ ಸಂಘ ಮತ್ತು ಕನ್ನಡ ಚಳವಳಿ ಪಕ್ಷಗಳು ತಮ್ಮ ರಾಜೀನಾಮೆಗೆ ಒತ್ತಾಯಿಸುತ್ತಿರುವುದನ್ನು ಪ್ರಸ್ತಾಪಿಸಿ, ಈ ಪ್ರಶ್ನೆಗೆ ಉತ್ತರ ಕೇಳಲು ತಾವು ‘ಜನತಾ ನ್ಯಾಯಾಲಯ’ಕ್ಕೆ ಬಂದಿರುವುದಾಗಿ ತಿಳಿಸಿದರು.</p>.<p>‘ನಾನು ರಾಜೀನಾಮೆ ಕೊಡಬೇಕೋ ಬೇಡವೋ ಎಂಬುದನ್ನು ನೀವೇ ಹೇಳಿ?’ ಎಂದು ಸಭಿಕರಿಗೆ ಪ್ರಶ್ನೆ ಹಾಕಿದ ಮುಖ್ಯಮಂತ್ರಿ ಉತ್ತರಕ್ಕಾಗಿ ಕಾದರು. ‘ಬೇಡ, ಬೇಡ’ ಎಂದು ಸಭಿಕರು ಹೇಳಿ ದಾಗ ಅವರಿಂದ ಕೈ ಎತ್ತಿಸಿ ತಮ್ಮ ಬೆಂಬಲ ವನ್ನು ಖಚಿತಪಡಿಸಿಕೊಂಡು ಕೂತರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>