<p><strong>ಸೋನಿಯಾ ಗೈರುಹಾಜರಿ</strong></p>.<p><strong>ನವದೆಹಲಿ, ಡಿ. 27 </strong>(ಯುಎನ್ಐ)– ಮಾಜಿ ರಾಷ್ಟ್ರಪತಿ ಗ್ಯಾನಿ ಜೇಲ್ ಸಿಂಗ್ ಅವರ ಅಂತ್ಯಕ್ರಿಯೆ ಸಮಾರಂಭದಲ್ಲಿ ರಾಜಕೀಯ ನಾಯಕರು ಮತ್ತಿತರ ಗಣ್ಯರ ಮಹಾಪೂರವೇ ಭಾಗವಹಿಸಿದ್ದರೂ ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಅವರ ಪತ್ನಿ ಸೋನಿಯಾ ಗಾಂಧಿ ಅವರ ಗೈರುಹಾಜರಿ ಎದ್ದು ಕಾಣುತ್ತಿತ್ತು.</p>.<p>ನವೆಂಬರ್ 10, ಜನಪಥ್ನಿಂದ ಗ್ಯಾನೀಜಿ ಅವರ ನಿವಾಸಕ್ಕಾಗಲೀ ಅಂತ್ಯಕ್ರಿಯೆ ನಡೆದ ಸ್ಥಳಕ್ಕಾಗಲೀ ಯಾರೊಬ್ಬರೂ ಭೇಟಿ ನೀಡಲಿಲ್ಲ ಎಂದು ಜೇಲ್ ಸಿಂಗ್ ಅವರ ಕುಟುಂಬದ ಮೂಲಗಳು ತಿಳಿಸಿವೆ.</p>.<p>ರಾಜೀವ್ ಗಾಂಧಿ ಅವರು ಪ್ರಧಾನಿಯಾಗಿದ್ದಾಗ ಜೇಲ್ ಸಿಂಗ್ ಅವರು ರಾಷ್ಟ್ರಪತಿಯಾಗಿದ್ದರು. ಇವರಿಬ್ಬರ ಮಧ್ಯೆ ಸಂಬಂಧ ಅಷ್ಟೇನೂ ಮಧುರವಾಗಿರಲಿಲ್ಲ.</p>.<p>ಗ್ಯಾನೀಜಿ ಅವರ ಅಂತ್ಯಕ್ರಿಯೆಗೆ ಶ್ರೀಗಂಧದ ತುಂಡುಗಳು ಸೇರಿದಂತೆ ನಾಲ್ಕು ಕ್ವಿಂಟಲ್ಗಳಷ್ಟು ಕಟ್ಟಿಗೆ, ಏಳು ಡಬ್ಬ ಶುದ್ಧ ತುಪ್ಪ ಮತ್ತು 30 ಕಿ.ಗ್ರಾಂ. ಹವನ ಸಾಮಗ್ರಿಗಳನ್ನು ಬಳಸಲಾಯಿತು.</p>.<p><strong>ವೀರಪ್ಪನ್ಗೆ ಮತ್ತೆ ಸಂದೇಶ</strong></p>.<p><strong>ಕೊಯಮತ್ತೂರು, ಡಿ. 27 (ಪಿಟಿಐ)</strong>– ಕೊಯಮತ್ತೂರು ಜಿಲ್ಲಾಧಿಕಾರಿ ಸಿ.ಎ. ಶಂಕರ್ ಅವರು ಇಂದು ಕುಖ್ಯಾತ ದಂತಚೋರ ವೀರಪ್ಪನ್ನಿಗೆ ಇನ್ನೊಂದು ಸಂದೇಶ ಕಳುಹಿಸಿದ್ದಾರೆ ಎನ್ನಲಾಗಿದೆ. ಈ ಮಧ್ಯೆ ವೀರಪ್ಪನ್ನಿಂದ ಅಪಹರಣಕ್ಕೊಳಗಾಗಿರುವ ತಮಿಳುನಾಡಿನ ಡಿ.ಎಸ್.ಪಿ. ಹಾಗೂ ಅವರ ಸಂಬಂಧಿಗಳು ಕಳೆದ 24 ದಿನಗಳಿಂದ ಒತ್ತೆಯಾಳುಗಳಾಗಿಯೇ ಉಳಿದಿದ್ದಾರೆ.</p>.<p>ವೀರಪ್ಪನ್ನಿಂದ ಈ ಹಿಂದೆ ಸಂದೇಶ ತಂದಿರುವ ಬುಡಕಟ್ಟು ಜನಾಂಗದ ವ್ಯಕ್ತಿಯ ಮೂಲಕವೇ ಸಂದೇಶ ಕಳುಹಿಸಲಾಗಿದೆ. ಇಲ್ಲಿಗೆ ಮಾತುಕತೆಗಾಗಿ ಬಂದು, ಗುಂಡಿನ ಗಾಯಕ್ಕಾಗಿ ಚಿಕಿತ್ಸೆ ಪಡೆಯುತ್ತಿರುವ ವೀರಪ್ಪನ್ನ ತಮ್ಮ ಅರ್ಜುನನ್ನಿಂದಲೂ ಈ ವ್ಯಕ್ತಿ ಸಂದೇಶ ಪಡೆದುಕೊಂಡು ಹೋಗಿದ್ದಾನೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.</p>.<p><strong>ಬಿಹಾರ ಶಾಸಕರಿಗೆ ‘ಚಿನ್ನದ ಕೈಗಡಿಯಾರ’</strong></p>.<p>ಪಟ್ನಾ, ಡಿ. 27 (ಪಿಟಿಐ)– ಬಿಹಾರದಂತಹ ಬಡರಾಜ್ಯದಲ್ಲಿ ಸುಮಾರು 21 ಲಕ್ಷ ರೂ. ಮೌಲ್ಯದ ಚಿನ್ನದ ಕೈಗಡಿಯಾರಗಳನ್ನು ಶಾಸಕರಿಗೆ ಉಡುಗೊರೆಯಾಗಿ ಕೊಡಲಾಯಿತೆಂದರೆ ನಂಬುವಿರಾ!</p>.<p>ತಲಾ 7,000 ರೂ. ಬೆಲೆಯ ಕೈಗಡಿಯಾರಗಳನ್ನು ವಿಧಾನಸಭಾಧ್ಯಕ್ಷ ಘುಲಾಮ್ ಸರ್ವಾರ್ ಇತ್ತೀಚೆಗೆ ಶಾಸಕರಿಗೆ ಉಡುಗೊರೆಯಾಗಿತ್ತದ್ದು, ಈಗ ಅಲ್ಲಿ ಚರ್ಚೆಯ ವಿಷಾಯ. ಚಳಿಗಾಲದ ಅಧಿವೇಶನದ ಕೊನೆಯ ದಿನ ಈ ಮಿರುಗುವ ಗಡಿಯಾರಗಳು ಪ್ರಜಾಪ್ರತಿನಿಧಿಗಳ ಕೈಗಳನ್ನಲಂಕರಿಸಿದವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸೋನಿಯಾ ಗೈರುಹಾಜರಿ</strong></p>.<p><strong>ನವದೆಹಲಿ, ಡಿ. 27 </strong>(ಯುಎನ್ಐ)– ಮಾಜಿ ರಾಷ್ಟ್ರಪತಿ ಗ್ಯಾನಿ ಜೇಲ್ ಸಿಂಗ್ ಅವರ ಅಂತ್ಯಕ್ರಿಯೆ ಸಮಾರಂಭದಲ್ಲಿ ರಾಜಕೀಯ ನಾಯಕರು ಮತ್ತಿತರ ಗಣ್ಯರ ಮಹಾಪೂರವೇ ಭಾಗವಹಿಸಿದ್ದರೂ ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಅವರ ಪತ್ನಿ ಸೋನಿಯಾ ಗಾಂಧಿ ಅವರ ಗೈರುಹಾಜರಿ ಎದ್ದು ಕಾಣುತ್ತಿತ್ತು.</p>.<p>ನವೆಂಬರ್ 10, ಜನಪಥ್ನಿಂದ ಗ್ಯಾನೀಜಿ ಅವರ ನಿವಾಸಕ್ಕಾಗಲೀ ಅಂತ್ಯಕ್ರಿಯೆ ನಡೆದ ಸ್ಥಳಕ್ಕಾಗಲೀ ಯಾರೊಬ್ಬರೂ ಭೇಟಿ ನೀಡಲಿಲ್ಲ ಎಂದು ಜೇಲ್ ಸಿಂಗ್ ಅವರ ಕುಟುಂಬದ ಮೂಲಗಳು ತಿಳಿಸಿವೆ.</p>.<p>ರಾಜೀವ್ ಗಾಂಧಿ ಅವರು ಪ್ರಧಾನಿಯಾಗಿದ್ದಾಗ ಜೇಲ್ ಸಿಂಗ್ ಅವರು ರಾಷ್ಟ್ರಪತಿಯಾಗಿದ್ದರು. ಇವರಿಬ್ಬರ ಮಧ್ಯೆ ಸಂಬಂಧ ಅಷ್ಟೇನೂ ಮಧುರವಾಗಿರಲಿಲ್ಲ.</p>.<p>ಗ್ಯಾನೀಜಿ ಅವರ ಅಂತ್ಯಕ್ರಿಯೆಗೆ ಶ್ರೀಗಂಧದ ತುಂಡುಗಳು ಸೇರಿದಂತೆ ನಾಲ್ಕು ಕ್ವಿಂಟಲ್ಗಳಷ್ಟು ಕಟ್ಟಿಗೆ, ಏಳು ಡಬ್ಬ ಶುದ್ಧ ತುಪ್ಪ ಮತ್ತು 30 ಕಿ.ಗ್ರಾಂ. ಹವನ ಸಾಮಗ್ರಿಗಳನ್ನು ಬಳಸಲಾಯಿತು.</p>.<p><strong>ವೀರಪ್ಪನ್ಗೆ ಮತ್ತೆ ಸಂದೇಶ</strong></p>.<p><strong>ಕೊಯಮತ್ತೂರು, ಡಿ. 27 (ಪಿಟಿಐ)</strong>– ಕೊಯಮತ್ತೂರು ಜಿಲ್ಲಾಧಿಕಾರಿ ಸಿ.ಎ. ಶಂಕರ್ ಅವರು ಇಂದು ಕುಖ್ಯಾತ ದಂತಚೋರ ವೀರಪ್ಪನ್ನಿಗೆ ಇನ್ನೊಂದು ಸಂದೇಶ ಕಳುಹಿಸಿದ್ದಾರೆ ಎನ್ನಲಾಗಿದೆ. ಈ ಮಧ್ಯೆ ವೀರಪ್ಪನ್ನಿಂದ ಅಪಹರಣಕ್ಕೊಳಗಾಗಿರುವ ತಮಿಳುನಾಡಿನ ಡಿ.ಎಸ್.ಪಿ. ಹಾಗೂ ಅವರ ಸಂಬಂಧಿಗಳು ಕಳೆದ 24 ದಿನಗಳಿಂದ ಒತ್ತೆಯಾಳುಗಳಾಗಿಯೇ ಉಳಿದಿದ್ದಾರೆ.</p>.<p>ವೀರಪ್ಪನ್ನಿಂದ ಈ ಹಿಂದೆ ಸಂದೇಶ ತಂದಿರುವ ಬುಡಕಟ್ಟು ಜನಾಂಗದ ವ್ಯಕ್ತಿಯ ಮೂಲಕವೇ ಸಂದೇಶ ಕಳುಹಿಸಲಾಗಿದೆ. ಇಲ್ಲಿಗೆ ಮಾತುಕತೆಗಾಗಿ ಬಂದು, ಗುಂಡಿನ ಗಾಯಕ್ಕಾಗಿ ಚಿಕಿತ್ಸೆ ಪಡೆಯುತ್ತಿರುವ ವೀರಪ್ಪನ್ನ ತಮ್ಮ ಅರ್ಜುನನ್ನಿಂದಲೂ ಈ ವ್ಯಕ್ತಿ ಸಂದೇಶ ಪಡೆದುಕೊಂಡು ಹೋಗಿದ್ದಾನೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.</p>.<p><strong>ಬಿಹಾರ ಶಾಸಕರಿಗೆ ‘ಚಿನ್ನದ ಕೈಗಡಿಯಾರ’</strong></p>.<p>ಪಟ್ನಾ, ಡಿ. 27 (ಪಿಟಿಐ)– ಬಿಹಾರದಂತಹ ಬಡರಾಜ್ಯದಲ್ಲಿ ಸುಮಾರು 21 ಲಕ್ಷ ರೂ. ಮೌಲ್ಯದ ಚಿನ್ನದ ಕೈಗಡಿಯಾರಗಳನ್ನು ಶಾಸಕರಿಗೆ ಉಡುಗೊರೆಯಾಗಿ ಕೊಡಲಾಯಿತೆಂದರೆ ನಂಬುವಿರಾ!</p>.<p>ತಲಾ 7,000 ರೂ. ಬೆಲೆಯ ಕೈಗಡಿಯಾರಗಳನ್ನು ವಿಧಾನಸಭಾಧ್ಯಕ್ಷ ಘುಲಾಮ್ ಸರ್ವಾರ್ ಇತ್ತೀಚೆಗೆ ಶಾಸಕರಿಗೆ ಉಡುಗೊರೆಯಾಗಿತ್ತದ್ದು, ಈಗ ಅಲ್ಲಿ ಚರ್ಚೆಯ ವಿಷಾಯ. ಚಳಿಗಾಲದ ಅಧಿವೇಶನದ ಕೊನೆಯ ದಿನ ಈ ಮಿರುಗುವ ಗಡಿಯಾರಗಳು ಪ್ರಜಾಪ್ರತಿನಿಧಿಗಳ ಕೈಗಳನ್ನಲಂಕರಿಸಿದವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>