<p><strong>* ಸಂಘ ಶತಮಾನದ ಹೊಸ್ತಿಲಲ್ಲಿದೆ. ನಿಮ್ಮ ಆದ್ಯತೆ ಏನು?</strong></p>.<p>ಕೇಂದ್ರ ಸರ್ಕಾರದ ವೇತನಕ್ಕೆ ಸರಿಸಮನಾಗಿ ವೇತನ ನೀಡಬೇಕೆಂಬುದು ಬಹು ದೊಡ್ಡ ಬೇಡಿಕೆ. 20 ರಾಜ್ಯಗಳಲ್ಲಿ ಸಮಾನ<br />ವೇತನವಿದೆ. ನಮ್ಮಲ್ಲೂ ಜಾರಿಗೆ ತರುವುದಕ್ಕೆ ನನ್ನ ಆದ್ಯತೆ.</p>.<p><strong>* ನೂತನ ಪಿಂಚಣಿ ವ್ಯವಸ್ಥೆ (ಎನ್ಪಿಎಸ್) ಒಪ್ಪಿಕೊಳ್ಳುವಿರಾ?</strong></p>.<p>ಖಂಡಿತ ಇಲ್ಲ. ಪಿಂಚಣಿ ಪಡೆಯುವ ನಿವೃತ್ತರು 1.20 ಲಕ್ಷದಷ್ಟಿದ್ದಾರೆ. ಎನ್ಪಿಎಸ್ಸಿಬ್ಬಂದಿಯನ್ನು ಹಳೆಯ ಪಿಂಚಣಿ ವ್ಯವಸ್ಥೆಯೊಂದಿಗೆ ವಿಲೀನಗೊಳಿಸುವ ಪ್ರಯತ್ನ ನಡೆದಿದೆ.</p>.<p>ಸರ್ಕಾರದ ರಾಜಸ್ವ ಹೆಚ್ಚಿಸುವಂತೆ ಕೆಲಸ ಮಾಡಿ, ನಿಮ್ಮ ಬೇಡಿಕೆ ಈಡೇರಿಸುತ್ತೇವೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಭರವಸೆ ನೀಡಿದ್ದಾರೆ. ಹಳೆ ವ್ಯವಸ್ಥೆಗೆ ₹ 15 ಸಾವಿರ ಕೋಟಿಯಿಂದ 20 ಸಾವಿರ ಕೋಟಿ ಬೇಕೆಂದು ಬಿಂಬಿಸಲಾಗುತ್ತಿದೆ. ಆದರೆ ಐದಾರು ಸಾವಿರ ಕೋಟಿ ರೂಪಾಯಿ ಸಾಕು. ಎನ್ಪಿಎಸ್ರದ್ದತಿಗೆ ಸಂಘ ಕಟಿಬದ್ಧ. ಅಗತ್ಯಬಿದ್ದರೆ ಹೋರಾಟಕ್ಕೂ ಸಿದ್ಧ.</p>.<p><strong>* ಸರ್ಕಾರಿ ನೌಕರರು ಜನಸ್ನೇಹಿ ಆಗುವುದು ಯಾವಾಗ?</strong></p>.<p>ಸರ್ಕಾರಿ ಸೌಕರರಲ್ಲಿ ಶೇಕಡ ಎರಡರಷ್ಟು ಮಂದಿ ಜನಸ್ನೇಹಿ ಇರಲಾರರು ಅಷ್ಟೆ. ಅದಕ್ಕಾಗಿ ಇಡೀ ಸಮುದಾಯವನ್ನು ದೂಷಿಸುವುದು ಸರಿಯಲ್ಲ. ಅಭಿವೃದ್ಧಿ ಪಥದಲ್ಲಿ ರಾಜ್ಯವು ದೇಶದಲ್ಲಿ 3ನೇ ಸ್ಥಾನದಲ್ಲಿದೆ. ನೌಕರರ ಕೌಶಲ ವೃದ್ಧಿಸುವ ಕೆಲಸ ಮಾಡಿದರೆ ಅವರು ಇನ್ನಷ್ಟು ಜನಸ್ನೇಹಿ ಆಗಬಹುದು.</p>.<p><strong>* ಭ್ರಷ್ಟಾಚಾರ ಕಡಿಮೆ ಆಗುವುದು ಎಂದು?</strong></p>.<p>ಈ ನಿಟ್ಟಿನಲ್ಲಿ ಒಂದು ವ್ಯವಸ್ಥೆ ತಂದಾಗ ಅದು ಕ್ರಮೇಣ ಕಡಿಮೆಯಾಗುತ್ತದೆ. ಸಕಾಲ, ಪಾರದರ್ಶಕ ಟೆಂಡರ್ತಂದರು. ಭ್ರಷ್ಟಾಚಾರ ಕಡಿಮೆ ಆಯಿತು. ಜನ ಬುದ್ಧಿವಂತರಿದ್ದಾರೆ. ಕೊಡುವವರು ಇರುವಾಗ ಪಡೆದುಕೊಳ್ಳುವವರೂ ಇರುತ್ತಾರೆ. ಅಲ್ಪಸ್ವಲ್ಪ ಇರುವ ಭ್ರಷ್ಟಾಚಾರವನ್ನೂ ಶೇಕಡ ನೂರರಷ್ಟು ನಿವಾರಿಸುವ ನಿಟ್ಟಿನಲ್ಲಿ ಯೋಚನೆ ಮಾಡುತ್ತೇವೆ.</p>.<p><strong>* ಸಂಘವನ್ನುನೀವು ಸಹ ಸರ್ಕಾರಕ್ಕೆ ಅಡವು ಇಡುವುದಿಲ್ಲ ತಾನೇ?</strong></p>.<p>ಹಿಂದೆ ಸಂಘಕ್ಕೆ ಸರ್ಕಾರದ ಜತೆಗೆ ಸ್ವಲ್ಪ ‘ಹೊಂದಾಣಿಕೆ’ ಇತ್ತೇನೋ. ನಾವಂತೂ ಹಾಗೆ ಮಾಡುವುದಿಲ್ಲ. ನೌಕರರ ಹಿತಕ್ಕೆ ಪೂರಕ ಆಗಿದ್ದರೆ ಮಾತ್ರ ರಾಜಿ. ಮಾರಕವಾಗಿದ್ದರೆ ರಾಜಿ ಸಾಧ್ಯವೇ ಇಲ್ಲ. ಸರ್ಕಾರ ನಮ್ಮ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಹೋರಾಟ ನಿಶ್ಚಿತ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>* ಸಂಘ ಶತಮಾನದ ಹೊಸ್ತಿಲಲ್ಲಿದೆ. ನಿಮ್ಮ ಆದ್ಯತೆ ಏನು?</strong></p>.<p>ಕೇಂದ್ರ ಸರ್ಕಾರದ ವೇತನಕ್ಕೆ ಸರಿಸಮನಾಗಿ ವೇತನ ನೀಡಬೇಕೆಂಬುದು ಬಹು ದೊಡ್ಡ ಬೇಡಿಕೆ. 20 ರಾಜ್ಯಗಳಲ್ಲಿ ಸಮಾನ<br />ವೇತನವಿದೆ. ನಮ್ಮಲ್ಲೂ ಜಾರಿಗೆ ತರುವುದಕ್ಕೆ ನನ್ನ ಆದ್ಯತೆ.</p>.<p><strong>* ನೂತನ ಪಿಂಚಣಿ ವ್ಯವಸ್ಥೆ (ಎನ್ಪಿಎಸ್) ಒಪ್ಪಿಕೊಳ್ಳುವಿರಾ?</strong></p>.<p>ಖಂಡಿತ ಇಲ್ಲ. ಪಿಂಚಣಿ ಪಡೆಯುವ ನಿವೃತ್ತರು 1.20 ಲಕ್ಷದಷ್ಟಿದ್ದಾರೆ. ಎನ್ಪಿಎಸ್ಸಿಬ್ಬಂದಿಯನ್ನು ಹಳೆಯ ಪಿಂಚಣಿ ವ್ಯವಸ್ಥೆಯೊಂದಿಗೆ ವಿಲೀನಗೊಳಿಸುವ ಪ್ರಯತ್ನ ನಡೆದಿದೆ.</p>.<p>ಸರ್ಕಾರದ ರಾಜಸ್ವ ಹೆಚ್ಚಿಸುವಂತೆ ಕೆಲಸ ಮಾಡಿ, ನಿಮ್ಮ ಬೇಡಿಕೆ ಈಡೇರಿಸುತ್ತೇವೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಭರವಸೆ ನೀಡಿದ್ದಾರೆ. ಹಳೆ ವ್ಯವಸ್ಥೆಗೆ ₹ 15 ಸಾವಿರ ಕೋಟಿಯಿಂದ 20 ಸಾವಿರ ಕೋಟಿ ಬೇಕೆಂದು ಬಿಂಬಿಸಲಾಗುತ್ತಿದೆ. ಆದರೆ ಐದಾರು ಸಾವಿರ ಕೋಟಿ ರೂಪಾಯಿ ಸಾಕು. ಎನ್ಪಿಎಸ್ರದ್ದತಿಗೆ ಸಂಘ ಕಟಿಬದ್ಧ. ಅಗತ್ಯಬಿದ್ದರೆ ಹೋರಾಟಕ್ಕೂ ಸಿದ್ಧ.</p>.<p><strong>* ಸರ್ಕಾರಿ ನೌಕರರು ಜನಸ್ನೇಹಿ ಆಗುವುದು ಯಾವಾಗ?</strong></p>.<p>ಸರ್ಕಾರಿ ಸೌಕರರಲ್ಲಿ ಶೇಕಡ ಎರಡರಷ್ಟು ಮಂದಿ ಜನಸ್ನೇಹಿ ಇರಲಾರರು ಅಷ್ಟೆ. ಅದಕ್ಕಾಗಿ ಇಡೀ ಸಮುದಾಯವನ್ನು ದೂಷಿಸುವುದು ಸರಿಯಲ್ಲ. ಅಭಿವೃದ್ಧಿ ಪಥದಲ್ಲಿ ರಾಜ್ಯವು ದೇಶದಲ್ಲಿ 3ನೇ ಸ್ಥಾನದಲ್ಲಿದೆ. ನೌಕರರ ಕೌಶಲ ವೃದ್ಧಿಸುವ ಕೆಲಸ ಮಾಡಿದರೆ ಅವರು ಇನ್ನಷ್ಟು ಜನಸ್ನೇಹಿ ಆಗಬಹುದು.</p>.<p><strong>* ಭ್ರಷ್ಟಾಚಾರ ಕಡಿಮೆ ಆಗುವುದು ಎಂದು?</strong></p>.<p>ಈ ನಿಟ್ಟಿನಲ್ಲಿ ಒಂದು ವ್ಯವಸ್ಥೆ ತಂದಾಗ ಅದು ಕ್ರಮೇಣ ಕಡಿಮೆಯಾಗುತ್ತದೆ. ಸಕಾಲ, ಪಾರದರ್ಶಕ ಟೆಂಡರ್ತಂದರು. ಭ್ರಷ್ಟಾಚಾರ ಕಡಿಮೆ ಆಯಿತು. ಜನ ಬುದ್ಧಿವಂತರಿದ್ದಾರೆ. ಕೊಡುವವರು ಇರುವಾಗ ಪಡೆದುಕೊಳ್ಳುವವರೂ ಇರುತ್ತಾರೆ. ಅಲ್ಪಸ್ವಲ್ಪ ಇರುವ ಭ್ರಷ್ಟಾಚಾರವನ್ನೂ ಶೇಕಡ ನೂರರಷ್ಟು ನಿವಾರಿಸುವ ನಿಟ್ಟಿನಲ್ಲಿ ಯೋಚನೆ ಮಾಡುತ್ತೇವೆ.</p>.<p><strong>* ಸಂಘವನ್ನುನೀವು ಸಹ ಸರ್ಕಾರಕ್ಕೆ ಅಡವು ಇಡುವುದಿಲ್ಲ ತಾನೇ?</strong></p>.<p>ಹಿಂದೆ ಸಂಘಕ್ಕೆ ಸರ್ಕಾರದ ಜತೆಗೆ ಸ್ವಲ್ಪ ‘ಹೊಂದಾಣಿಕೆ’ ಇತ್ತೇನೋ. ನಾವಂತೂ ಹಾಗೆ ಮಾಡುವುದಿಲ್ಲ. ನೌಕರರ ಹಿತಕ್ಕೆ ಪೂರಕ ಆಗಿದ್ದರೆ ಮಾತ್ರ ರಾಜಿ. ಮಾರಕವಾಗಿದ್ದರೆ ರಾಜಿ ಸಾಧ್ಯವೇ ಇಲ್ಲ. ಸರ್ಕಾರ ನಮ್ಮ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಹೋರಾಟ ನಿಶ್ಚಿತ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>