‘ಊಹೂಂ... ಮಳಿ ಲೆಕ್ಕಾಚಾರ ಹಾಕೂದು ಪ್ರವಾಹದಾಗ ಮನಿ ಕಳಕೊಂಡೋರು, ಬೆಳೆ ನಾಶವಾದ ರೈತರು. ಮಣ್ಣಿನ ಮಗ ದೇವೇಗೌಡಜ್ಜ ಅದನ್ಯಾಕ ಲೆಕ್ಕಾ ಹಾಕ್ತಾನ. ಆವಾಗ ಬಿಜೆಪಿ ಜತಿಗಿದ್ದಾಗ ಕುಮಾರಣ್ಣ ಕಣ್ಣೀರು ಮಾಪಕ ಕೇಂದ್ರದಾಗ ಆರುಸಾವಿರ ಮಿಲಿಮೀಟರ್ ಕಣ್ಣೀರು ದಾಖಲಾಗಿತ್ತು, ಈ ಸಲ ಕಾಂಗಿಗಳ ಜೊತಿಗಿದ್ದಾಗ ಹತ್ತು ಸಾವಿರ, ಅವ್ರಿಗಿಂತ ಇವ್ರ ಜೊತಿಗಿ ಸಂಸಾರ ಮಾಡೂಮುಂದ ಮಗ ಭಾಳ ಕಣ್ಣೀರು ಸುರಿಸ್ಯಾನ ಅಂತ ಗೌಡಜ್ಜ ಮುಸುಮುಸು ಮಾಡಾಕಹತ್ತಿದ್ದ...’