<p>‘ಸರ್ಕಾರದ ಕೆಲಸ ದೇವರ ಕೆಲಸ’ ಎಂಬ ಮಂತ್ರ ಜಪಿಸುತ್ತಾ ಭಕ್ತ ಬಳಗ ಸರ್ಕಾರಿ ದೇವಸೌಧ ಪ್ರವೇಶಿಸಿತು.</p>.<p>ಒಳಗೆ ಸರ್ಕಾರಿ ದೇವರು ಈ ಸಾಲಿನ ಬಜೆಟ್ ಸಿದ್ಧತೆಯ ಧ್ಯಾನದಲ್ಲಿದ್ದರು. ಆಯ ಎಷ್ಟು ಬರಬಹುದು, ವ್ಯಯ ಎಷ್ಟು ಹೋಗಬಹುದು ಎಂಬ ಲೆಕ್ಕಾಚಾರದಲ್ಲಿ ತಲೆಕೆಡಿಸಿಕೊಂಡಿದ್ದರು. ಕೂಡಿ-ಕಳೆದು, ಗುಣಿಸಿ-ಭಾಗಿಸಿದರೂ ಲೆಕ್ಕ ಪಕ್ಕಾ ಆಗದೆ, ದೇವರ ಪಾಲಿಗೆ ಗಣಿತವು ಅಗಣಿತವಾಗಿತ್ತು.</p>.<p>ನಮಸ್ಕರಿಸಿದ ಭಕ್ತರು, ‘ದೇವ್ರೇ, ನಮ್ಮ ಕಷ್ಟ ಪರಿಹರಿಸಿ’ ಎಂದು ಕೈ ಮುಗಿದರು.</p>.<p>ಕಡತದಿಂದ ಕಣ್ತೆಗೆದು ಭಕ್ತರತ್ತ ದೃಷ್ಟಿ ಹರಿಸಿದ ದೇವರು, ‘ಕೇಳಿ, ಏನು ವರ ಬೇಕು?’ ಎಂದರು.</p>.<p>‘ವರ ಬೇಡ ದೇವ್ರೂ, ದಾನ ಮಾಡಿ, ಅನುದಾನ ನೀಡಿ...’ ಕೋರಿಕೆ ಸಲ್ಲಿಸಿದರು.</p>.<p>‘ನಿಮ್ಮ ಅನುದಾನವನ್ನು ಕೊರೊನಾ ನುಂಗಿ ನೀರು ಕುಡಿದಿದೆ, ಇನ್ನೆಲ್ಲಿ ಅನುದಾನ...?’</p>.<p>‘ಅನುದಾನವಿಲ್ಲದೆ ಬರಿ ಕೈಯಲ್ಲಿ ಕ್ಷೇತ್ರಗಳಿಗೆ ಹೋಗಿ ಪ್ರಜೆಗಳಿಗೆ ಮುಖ ತೋರಿಸಲಾಗುತ್ತಿಲ್ಲ.<br />ರಸ್ತೆಗೆ ಟಾರ್ ಇಲ್ಲ, ಕುಡಿಯಲು ನೀರಿಲ್ಲ. ಶಂಕುಸ್ಥಾಪನೆ, ಉದ್ಘಾಟನೆಗಳಿಲ್ಲ...’ ಕಷ್ಟ ಹೇಳಿಕೊಂಡರು ಭಕ್ತರು.</p>.<p>‘ಕೊರೊನಾ ಕಾಟ ಮುಗಿಯೋವರೆಗೂ ಅನುದಾನ ಕಷ್ಟ, ಅಲ್ಲಿಯವರೆಗೂ ಸಮಾಧಾನ, ವ್ಯವಧಾನ ಕಾಪಾಡಿಕೊಳ್ಳಿ’.</p>.<p>‘ಸಂಕ್ರಾಂತಿ ಹಬ್ಬದ ಕೊಡುಗೆ ಕೊಡಿ ದೇವ್ರೇ’.</p>.<p>‘ತಗೊಳ್ಳಿ ಸಂಕ್ರಾಂತಿಯ ಎಳ್ಳುಬೆಲ್ಲ, ಇದನ್ನು ತಿಂದು ಕೊರೊನಾಗೆ ಎಳ್ಳುನೀರು ಬಿಡುವ ಸಂಕಲ್ಪ ಮಾಡಿ’ ಎಂದು ಕೊಟ್ಟರು.</p>.<p>‘ಅಂದರೆ, ಕ್ಷೇತ್ರದ ಪ್ರಜೆಗಳಿಗೆ ನಾವೂ ಎಳ್ಳುಬೆಲ್ಲ ಹಂಚಬೇಕೆ ದೇವ್ರೇ?’</p>.<p>‘ಬೇಡ, ನಾವು ಕೋವಿಡ್ ಲಸಿಕೆ ವಿತರಿಸುತ್ತೇವೆ, ನೀವು ಅದರ ಸದ್ಬಳಕೆ ಮಾಡಿ<br />ಕೊಂಡು, ನಿಮ್ಮ ಕ್ಷೇತ್ರವನ್ನು ಕೊರೊನಾಮುಕ್ತ ಮಾಡಬೇಕು. ಕ್ಷೇತ್ರದ ನೆಗೆಟಿವ್ ರಿಪೋರ್ಟ್ ತಂದವರಿಗೆ ಬಹುಮಾನವಾಗಿ ಅನುದಾನ ನೀಡುತ್ತೇನೆ...’ ಎಂದು ಹೇಳಿ ದೇವರು ಕಡತಗಳ ನಡುವೆ ಮುಳುಗಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಸರ್ಕಾರದ ಕೆಲಸ ದೇವರ ಕೆಲಸ’ ಎಂಬ ಮಂತ್ರ ಜಪಿಸುತ್ತಾ ಭಕ್ತ ಬಳಗ ಸರ್ಕಾರಿ ದೇವಸೌಧ ಪ್ರವೇಶಿಸಿತು.</p>.<p>ಒಳಗೆ ಸರ್ಕಾರಿ ದೇವರು ಈ ಸಾಲಿನ ಬಜೆಟ್ ಸಿದ್ಧತೆಯ ಧ್ಯಾನದಲ್ಲಿದ್ದರು. ಆಯ ಎಷ್ಟು ಬರಬಹುದು, ವ್ಯಯ ಎಷ್ಟು ಹೋಗಬಹುದು ಎಂಬ ಲೆಕ್ಕಾಚಾರದಲ್ಲಿ ತಲೆಕೆಡಿಸಿಕೊಂಡಿದ್ದರು. ಕೂಡಿ-ಕಳೆದು, ಗುಣಿಸಿ-ಭಾಗಿಸಿದರೂ ಲೆಕ್ಕ ಪಕ್ಕಾ ಆಗದೆ, ದೇವರ ಪಾಲಿಗೆ ಗಣಿತವು ಅಗಣಿತವಾಗಿತ್ತು.</p>.<p>ನಮಸ್ಕರಿಸಿದ ಭಕ್ತರು, ‘ದೇವ್ರೇ, ನಮ್ಮ ಕಷ್ಟ ಪರಿಹರಿಸಿ’ ಎಂದು ಕೈ ಮುಗಿದರು.</p>.<p>ಕಡತದಿಂದ ಕಣ್ತೆಗೆದು ಭಕ್ತರತ್ತ ದೃಷ್ಟಿ ಹರಿಸಿದ ದೇವರು, ‘ಕೇಳಿ, ಏನು ವರ ಬೇಕು?’ ಎಂದರು.</p>.<p>‘ವರ ಬೇಡ ದೇವ್ರೂ, ದಾನ ಮಾಡಿ, ಅನುದಾನ ನೀಡಿ...’ ಕೋರಿಕೆ ಸಲ್ಲಿಸಿದರು.</p>.<p>‘ನಿಮ್ಮ ಅನುದಾನವನ್ನು ಕೊರೊನಾ ನುಂಗಿ ನೀರು ಕುಡಿದಿದೆ, ಇನ್ನೆಲ್ಲಿ ಅನುದಾನ...?’</p>.<p>‘ಅನುದಾನವಿಲ್ಲದೆ ಬರಿ ಕೈಯಲ್ಲಿ ಕ್ಷೇತ್ರಗಳಿಗೆ ಹೋಗಿ ಪ್ರಜೆಗಳಿಗೆ ಮುಖ ತೋರಿಸಲಾಗುತ್ತಿಲ್ಲ.<br />ರಸ್ತೆಗೆ ಟಾರ್ ಇಲ್ಲ, ಕುಡಿಯಲು ನೀರಿಲ್ಲ. ಶಂಕುಸ್ಥಾಪನೆ, ಉದ್ಘಾಟನೆಗಳಿಲ್ಲ...’ ಕಷ್ಟ ಹೇಳಿಕೊಂಡರು ಭಕ್ತರು.</p>.<p>‘ಕೊರೊನಾ ಕಾಟ ಮುಗಿಯೋವರೆಗೂ ಅನುದಾನ ಕಷ್ಟ, ಅಲ್ಲಿಯವರೆಗೂ ಸಮಾಧಾನ, ವ್ಯವಧಾನ ಕಾಪಾಡಿಕೊಳ್ಳಿ’.</p>.<p>‘ಸಂಕ್ರಾಂತಿ ಹಬ್ಬದ ಕೊಡುಗೆ ಕೊಡಿ ದೇವ್ರೇ’.</p>.<p>‘ತಗೊಳ್ಳಿ ಸಂಕ್ರಾಂತಿಯ ಎಳ್ಳುಬೆಲ್ಲ, ಇದನ್ನು ತಿಂದು ಕೊರೊನಾಗೆ ಎಳ್ಳುನೀರು ಬಿಡುವ ಸಂಕಲ್ಪ ಮಾಡಿ’ ಎಂದು ಕೊಟ್ಟರು.</p>.<p>‘ಅಂದರೆ, ಕ್ಷೇತ್ರದ ಪ್ರಜೆಗಳಿಗೆ ನಾವೂ ಎಳ್ಳುಬೆಲ್ಲ ಹಂಚಬೇಕೆ ದೇವ್ರೇ?’</p>.<p>‘ಬೇಡ, ನಾವು ಕೋವಿಡ್ ಲಸಿಕೆ ವಿತರಿಸುತ್ತೇವೆ, ನೀವು ಅದರ ಸದ್ಬಳಕೆ ಮಾಡಿ<br />ಕೊಂಡು, ನಿಮ್ಮ ಕ್ಷೇತ್ರವನ್ನು ಕೊರೊನಾಮುಕ್ತ ಮಾಡಬೇಕು. ಕ್ಷೇತ್ರದ ನೆಗೆಟಿವ್ ರಿಪೋರ್ಟ್ ತಂದವರಿಗೆ ಬಹುಮಾನವಾಗಿ ಅನುದಾನ ನೀಡುತ್ತೇನೆ...’ ಎಂದು ಹೇಳಿ ದೇವರು ಕಡತಗಳ ನಡುವೆ ಮುಳುಗಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>