ರಾಜ್ಯ ಸಾರಿಗೆ ಸಂಸ್ಥೆಯ19 ಸಹಸ್ರ ನೌಕರರಿಗೆವೇತನ ಭತ್ಯೆ ಏರಿಕೆ
ಬೆಂಗಳೂರು, ಜುಲೈ 7– ಮೈಸೂರು ರಾಜ್ಯ ಸಾರಿಗೆ ಸಂಸ್ಥೆಯ 3ನೇ ಮತ್ತು 4ನೇ ದರ್ಜೆಯ ಹತ್ತೊಂಬತ್ತು ಸಾವಿರ ಮಂದಿ ನೌಕರರು ತಮ್ಮ ಸೇವಾ ಅವಧಿಗೆ ಅನುಗುಣವಾಗಿ ವೇತನ ಬಡ್ತಿ ಪಡೆಯುವರು.
ವೇತನ ಭತ್ಯೆ ಮುಂತಾದವುಗಳ ಏರಿಕೆಯ ರೂಪದಲ್ಲಿ ಈ ನೌಕರರು ವರ್ಷಕ್ಕೆ 95.7 ಲಕ್ಷ ರೂಪಾಯಿಗಳನ್ನು ಪಡೆಯುವರು.
ಮತ್ತೆ ಮುಗಿಲತ್ತ ಕಾತರದ ದೃಷ್ಟಿ
ಬೆಂಗಳೂರು, ಜುಲೈ 7– ನಿರೀಕ್ಷೆಗಿಂತ ಮೊದಲೇ ಬಂದು ರೈತರಲ್ಲಿ ವರ್ಷದ ಬೆಳೆಯ ಭರವಸೆ ಮೂಡಿಸಿದ ಮುಂಗಾರು ಕ್ರಮೇಣ ಕಡಿಮೆಯಾಗಿ ಕೆಲ ಮಟ್ಟಿನ ಕಾತರವನ್ನುಂಟು ಮಾಡಲಾರಂಭಿಸಿದೆ.
ಮಳೆಯನ್ನು ನಂಬಿ ಎಂದಿನ ತೀವ್ರ ಅಭಾವದ ಪ್ರದೇಶಗಳಲ್ಲಿ ಪರಿಹಾರ ಕಾಮಗಾರಿಗಳನ್ನು ನಿಲ್ಲಿಸದೆ ಮುಂದುವರಿಸಿಕೊಂಡು ಹೋಗಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸರ್ಕಾರ ಈಗಾಗಲೇ ಸೂಚನೆ ನೀಡಿದೆ.