<p><strong>‘ಮೂರಕ್ಕೇ’ ನಿಲ್ಲಿಸದ ತಂದೆತಾಯಿಗಳ ಬಗ್ಗೆ ಸರ್ಕಾರದ ಆದೇಶಕ್ಕೆ ತಡೆ<br />ಬೆಂಗಳೂರು, ಜುಲೈ 17</strong>– 1970 ಜೂನ್ ತಿಂಗಳ ಒಂದರ ಸಮಯದಲ್ಲಿ ಮೂರಕ್ಕಿಂತ ಹೆಚ್ಚು ಮಕ್ಕಳಾದ ಅಥವಾ ಮೂರಕ್ಕಿಂತ ಹೆಚ್ಚಿದ್ದು, ಅಲ್ಲಿಗೇ ನಿಲ್ಲಿಸದೇ ಹೋದ ತಂದೆತಾಯಿಗಳ ಮಕ್ಕಳಿಗೆ ಶೈಕ್ಷಣಿಕ ರಿಯಾಯಿತಿಗಳನ್ನು ನಿಲ್ಲಿಸುವ 1969ರ ಆದೇಶವನ್ನು ಸರ್ಕಾರವು ತಡೆಹಿಡಿದಿದೆ.</p>.<p>ಈ ಸಂಬಂಧದಲ್ಲಿ ಶಾಲೆಗಳಿಗೆ ಪಾಲಕರು ಸಲ್ಲಿಸಬೇಕೆಂದಿರುವ ಅರ್ಜಿ ಮತ್ತು ತಿಳಿವಳಿಕೆ ಪತ್ರಗಳಿಗೆ ಶಾಲೆಗಳಲ್ಲಿ ಒತ್ತಾಯಪಡಿಸಬಾರದು ಎಂದು ಗೆಜೆಟ್ ಪ್ರಕಟಣೆ ತಿಳಿಸಿದೆ.</p>.<p><strong>ಬಂಗಾಳದಲ್ಲಿ ಕುಟುಂಬ ಹಿಡುವಳಿ ಮೇಲೆ ಮಿತಿ<br />ಕಲ್ಕತ್ತ, ಜುಲೈ 17– </strong>ಬಂಗಾಳದಲ್ಲಿ ಕುಟುಂಬದ ಜಮೀನು ಹಿಡುವಳಿ ಮೇಲೆ ಸರ್ಕಾರವು ಶಾಸನದ ಕ್ರಮ ಕೈಗೊಳ್ಳುವ ಯೋಚನೆಯಲ್ಲಿದೆ ಎಂದು ಪ್ರಧಾನಿ ಇಂದಿರಾ ಗಾಂಧಿ ಇಂದು ರಾತ್ರಿ ಇಲ್ಲಿ ಪ್ರಕಟಿಸಿದರು.</p>.<p>ಕುಟುಂಬ ಹಿಡುವಳಿ ಮಿತಿಗೆ ಶಾಸನ ರಚಿಸುವುದರಿಂದ ಅಸಮತೆ ನಿವಾರಣೆಯಾಗುವುದೇ ಅಲ್ಲದೆ ಭೂಹೀನರಿಗೆ ಹಂಚಲು ಹೆಚ್ಚಿನ ಜಮೀನು ದೊರೆಯುವುದು ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>‘ಮೂರಕ್ಕೇ’ ನಿಲ್ಲಿಸದ ತಂದೆತಾಯಿಗಳ ಬಗ್ಗೆ ಸರ್ಕಾರದ ಆದೇಶಕ್ಕೆ ತಡೆ<br />ಬೆಂಗಳೂರು, ಜುಲೈ 17</strong>– 1970 ಜೂನ್ ತಿಂಗಳ ಒಂದರ ಸಮಯದಲ್ಲಿ ಮೂರಕ್ಕಿಂತ ಹೆಚ್ಚು ಮಕ್ಕಳಾದ ಅಥವಾ ಮೂರಕ್ಕಿಂತ ಹೆಚ್ಚಿದ್ದು, ಅಲ್ಲಿಗೇ ನಿಲ್ಲಿಸದೇ ಹೋದ ತಂದೆತಾಯಿಗಳ ಮಕ್ಕಳಿಗೆ ಶೈಕ್ಷಣಿಕ ರಿಯಾಯಿತಿಗಳನ್ನು ನಿಲ್ಲಿಸುವ 1969ರ ಆದೇಶವನ್ನು ಸರ್ಕಾರವು ತಡೆಹಿಡಿದಿದೆ.</p>.<p>ಈ ಸಂಬಂಧದಲ್ಲಿ ಶಾಲೆಗಳಿಗೆ ಪಾಲಕರು ಸಲ್ಲಿಸಬೇಕೆಂದಿರುವ ಅರ್ಜಿ ಮತ್ತು ತಿಳಿವಳಿಕೆ ಪತ್ರಗಳಿಗೆ ಶಾಲೆಗಳಲ್ಲಿ ಒತ್ತಾಯಪಡಿಸಬಾರದು ಎಂದು ಗೆಜೆಟ್ ಪ್ರಕಟಣೆ ತಿಳಿಸಿದೆ.</p>.<p><strong>ಬಂಗಾಳದಲ್ಲಿ ಕುಟುಂಬ ಹಿಡುವಳಿ ಮೇಲೆ ಮಿತಿ<br />ಕಲ್ಕತ್ತ, ಜುಲೈ 17– </strong>ಬಂಗಾಳದಲ್ಲಿ ಕುಟುಂಬದ ಜಮೀನು ಹಿಡುವಳಿ ಮೇಲೆ ಸರ್ಕಾರವು ಶಾಸನದ ಕ್ರಮ ಕೈಗೊಳ್ಳುವ ಯೋಚನೆಯಲ್ಲಿದೆ ಎಂದು ಪ್ರಧಾನಿ ಇಂದಿರಾ ಗಾಂಧಿ ಇಂದು ರಾತ್ರಿ ಇಲ್ಲಿ ಪ್ರಕಟಿಸಿದರು.</p>.<p>ಕುಟುಂಬ ಹಿಡುವಳಿ ಮಿತಿಗೆ ಶಾಸನ ರಚಿಸುವುದರಿಂದ ಅಸಮತೆ ನಿವಾರಣೆಯಾಗುವುದೇ ಅಲ್ಲದೆ ಭೂಹೀನರಿಗೆ ಹಂಚಲು ಹೆಚ್ಚಿನ ಜಮೀನು ದೊರೆಯುವುದು ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>