ಎಂಆರ್ಪಿಎಲ್ ಕೊಳವೆ ಮಾರ್ಗ ಸಮಸ್ಯೆ ಇತ್ಯರ್ಥ
ಬೆಂಗಳೂರು, ಡಿ. 24– ಮಂಗಳೂರು ತೈಲಾಗಾರವು ಸಮುದ್ರಕ್ಕೆ ತ್ಯಾಜ್ಯ ವಸ್ತು ಬಿಡಲು ಕೊಳವೆ ಅಳವಡಿಸುತ್ತಿರುವುದರ ವಿರುದ್ಧ ಚಳವಳಿ ನಡೆಸುತ್ತಿರುವ ಮೀನುಗಾರರ ಮುಖಂಡರು, ದಕ್ಷಿಣ ಕನ್ನಡ ಜಿಲ್ಲೆಯ ಶಾಸಕರು, ಸಂಸತ್ ಸದಸ್ಯರು, ಕಂಪನಿಯ ಪ್ರತಿನಿಧಿಗಳು ಹಾಗೂ ಪರಿಸರವಾದಿಗಳ ಜತೆಗೆ ಇಂದು ಮುಖ್ಯಮಂತ್ರಿ ಎಚ್.ಡಿ.ದೇವೇಗೌಡ ಅವರ ಸಮ್ಮುಖದಲ್ಲಿ ಇಲ್ಲಿ ನಡೆಸಿದ ಮಾತುಕತೆಯಿಂದ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲಾಗಿದೆ ಎಂದು ತಿಳಿದುಬಂದಿದೆ.