ಶಸ್ತ್ರ ಇಳಿಸಿದ ಪ್ರಕರಣ: ಪ್ರಧಾನಿ- ಚವಾಣ್ ಚರ್ಚೆ
ನವದೆಹಲಿ, ಡಿ. 25 (ಯುಎನ್ಐ)– ಕಳೆದ ವಾರ ಪಶ್ಚಿಮ ಬಂಗಾಳದ ಪುರುಲಿಯಾದಲ್ಲಿ ರಷ್ಯಾ ನಿರ್ಮಿತ ವಿಮಾನವೊಂದು ಶಸ್ತ್ರಾಸ್ತ್ರಗಳನ್ನು ಇಳಿಸಿರುವುದು ಮತ್ತು ಇನ್ನೊಂದು ವಿದೇಶಿ ವಿಮಾನ ನವದೆಹಲಿ ವಿಮಾನ ನಿಲ್ದಾಣದಲ್ಲಿ ನಿನ್ನೆ ಬಲವಂತವಾಗಿ ಇಳಿದ ಪ್ರಕರಣಗಳ ಹಿನ್ನೆಲೆಯಲ್ಲಿ ಮರುವಿಮರ್ಶಿಸಲು ಪ್ರಧಾನಿ ಪಿ.ವಿ.ನರಸಿಂಹರಾವ್ ಅವರು ಗೃಹ ಸಚಿವ ಎಸ್.ಬಿ. ಚವಾಣ್ ಅವರೊಂದಿಗೆ ಇಂದು ಮಾತುಕತೆ ನಡೆಸಿದರು.