ಈ ತೀರ್ಮಾನ ಕೈಗೊಂಡ ಈ ಸಭೆ ಕುಮಾರ ಕೃಪಾ ಅತಿಥಿ ಗೃಹದಲ್ಲಿ ಅಂದು ಬೆಳಗಿನ ಜಾವ ಮೂರು ಗಂಟೆವರೆಗೂ ನಡೆಯಿತು. ಕೆಂಗೇರಿ, ಪದ್ಮನಾಭನಗರ ಮುಂತಾದ ಕಡೆಗಳ ಬೆಲೆಬಾಳುವ ಭೂಮಿಯ ಅಧಿಸೂಚನೆಯನ್ನು ಹಿಂತೆಗೆದುಕೊಳ್ಳಲಾಯಿತು. ಯಾವ ಸಾರ್ವಜನಿಕ ಉದ್ದೇಶದಿಂದ ಹೀಗೆ ಮಾಡಲಾಯಿತು, ಇದರಿಂದ ಪ್ರಯೋಜನ ಪಡೆದಿರುವ ಫಲಾನುಭವಿಗಳ ರಾಜಕೀಯ ಮತ್ತಿತರ ಪ್ರಭಾವ ಏನು? ಎತ್ತ ಎನ್ನುವುದನ್ನು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.