<p><strong>‘ಕೆಪಿಎಸ್ಸಿ ಭ್ರಷ್ಟಾಚಾರದ ಗಂಗೋತ್ರಿ’</strong></p>.<p>ಬೆಂಗಳೂರು, ನ. 21– ಕರ್ನಾಟಕ ಲೋಕಸೇವಾ ಆಯೋಗದಲ್ಲಿ (ಕೆಪಿಎಸ್ಸಿ) ಮಿತಿ ಮೀರಿರುವ ಭ್ರಷ್ಟಾಚಾರವನ್ನು ಕವಿ ಸಿದ್ಧಲಿಂಗಯ್ಯ, ತಮ್ಮದೇ ಆದ ವಿಶಿಷ್ಟ ಧಾಟಿಯಲ್ಲಿ ಸ್ವಂತ ಅನುಭವದ ಮೂಲಕ ಇಂದು ವಿಧಾನಪರಿಷತ್ತಿನಲ್ಲಿ ಬಿಚ್ಚಿಟ್ಟರು.</p>.<p>‘ನನಗೆ ಕೆಲವು ದಿನಗಳ ಹಿಂದೆ ಮೌಲ್ಯಮಾಪನಕ್ಕಾಗಿ ಉತ್ತರಪತ್ರಿಕೆಗಳ ಒಂದು ಬಂಡಲ್ (ಕಟ್ಟು) ಬಂತು. ಎಲ್ಲಿದ್ದರೊ ಆ ಜನಗಳು, ಬಂದ್ರು ನೋಡಿ ಬಂಡಲ್ನ ಹಿಂದೆಯೇ’ ಎಂದು ಹೇಳಿದ ಸಿದ್ಧಲಿಂಗಯ್ಯ, ತಮಗೆ ಅಭ್ಯರ್ಥಿಗಳು ಒಡ್ಡಿದ ಆಮಿಷವನ್ನು ವಿಷಾದದಿಂದ ಪ್ರಸ್ತಾಪಿಸಿದರು.</p>.<p>‘ನಿಮಗೆ ನನ್ನ ಬಳಿ ಈ ಬಂಡಲ್ ಬಂದಿರುವುದು ಹೇಗೆ ಗೊತ್ತಾಯ್ತು?’ ಎಂದು ಕೇಳಿದರೆ, ನಮಗೆಲ್ಲ ಗೊತ್ತಾಗುತ್ತದೆ– ಎಂಬ ಉತ್ತರ ಬಂತು. ನಾನು ತಡಮಾಡದೇ ಸ್ವಂತ ಖರ್ಚಿನಲ್ಲಿ ಆಟೊರಿಕ್ಷಾದಲ್ಲಿ ಆ ಬಂಡಲ್ ಹಾಕಿಕೊಂಡು ಲೋಕಸೇವಾ ಆಯೋಗಕ್ಕೆ ಹೋಗಿ, ಅವನ್ನು ವಾಪಸ್ ಕೊಟ್ಟು, ಆದದ್ದನ್ನು ವಿವರಿಸಿ ಪತ್ರ ಕೊಟ್ಟು ಬಂದೆ’ ಎಂದರು. </p>.<p><strong>ದಲಿತ ಮಹಿಳೆಗೆ ಅರೆ ಬೆತ್ತಲೆ ಶಿಕ್ಷೆ</strong></p>.<p>ಚಿತ್ರದುರ್ಗ, ನ. 21– ಹೊಳಲ್ಕೆರೆ ತಾಲ್ಲೂಕು ಉಪ್ಪರಿಗೇನಹಳ್ಳಿಯಲ್ಲಿ<br>ದಲಿತ ಮಹಿಳೆಯನ್ನು ಅರೆ ಬೆತ್ತಲೆಯಾಗಿ ಗ್ರಾಮದ ದೇವಸ್ಥಾನದ ಮುಂದೆ ನಿಲ್ಲಿಸಿದ ಅಮಾನುಷ ಪ್ರಕರಣ ನಡೆದಿದೆ. ಪ್ರಮುಖ ಆರೋಪಿ ಶಾಲಾ ಶಿಕ್ಷಕ ತಿಪ್ಪೇಸ್ವಾಮಿ ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>‘ಕೆಪಿಎಸ್ಸಿ ಭ್ರಷ್ಟಾಚಾರದ ಗಂಗೋತ್ರಿ’</strong></p>.<p>ಬೆಂಗಳೂರು, ನ. 21– ಕರ್ನಾಟಕ ಲೋಕಸೇವಾ ಆಯೋಗದಲ್ಲಿ (ಕೆಪಿಎಸ್ಸಿ) ಮಿತಿ ಮೀರಿರುವ ಭ್ರಷ್ಟಾಚಾರವನ್ನು ಕವಿ ಸಿದ್ಧಲಿಂಗಯ್ಯ, ತಮ್ಮದೇ ಆದ ವಿಶಿಷ್ಟ ಧಾಟಿಯಲ್ಲಿ ಸ್ವಂತ ಅನುಭವದ ಮೂಲಕ ಇಂದು ವಿಧಾನಪರಿಷತ್ತಿನಲ್ಲಿ ಬಿಚ್ಚಿಟ್ಟರು.</p>.<p>‘ನನಗೆ ಕೆಲವು ದಿನಗಳ ಹಿಂದೆ ಮೌಲ್ಯಮಾಪನಕ್ಕಾಗಿ ಉತ್ತರಪತ್ರಿಕೆಗಳ ಒಂದು ಬಂಡಲ್ (ಕಟ್ಟು) ಬಂತು. ಎಲ್ಲಿದ್ದರೊ ಆ ಜನಗಳು, ಬಂದ್ರು ನೋಡಿ ಬಂಡಲ್ನ ಹಿಂದೆಯೇ’ ಎಂದು ಹೇಳಿದ ಸಿದ್ಧಲಿಂಗಯ್ಯ, ತಮಗೆ ಅಭ್ಯರ್ಥಿಗಳು ಒಡ್ಡಿದ ಆಮಿಷವನ್ನು ವಿಷಾದದಿಂದ ಪ್ರಸ್ತಾಪಿಸಿದರು.</p>.<p>‘ನಿಮಗೆ ನನ್ನ ಬಳಿ ಈ ಬಂಡಲ್ ಬಂದಿರುವುದು ಹೇಗೆ ಗೊತ್ತಾಯ್ತು?’ ಎಂದು ಕೇಳಿದರೆ, ನಮಗೆಲ್ಲ ಗೊತ್ತಾಗುತ್ತದೆ– ಎಂಬ ಉತ್ತರ ಬಂತು. ನಾನು ತಡಮಾಡದೇ ಸ್ವಂತ ಖರ್ಚಿನಲ್ಲಿ ಆಟೊರಿಕ್ಷಾದಲ್ಲಿ ಆ ಬಂಡಲ್ ಹಾಕಿಕೊಂಡು ಲೋಕಸೇವಾ ಆಯೋಗಕ್ಕೆ ಹೋಗಿ, ಅವನ್ನು ವಾಪಸ್ ಕೊಟ್ಟು, ಆದದ್ದನ್ನು ವಿವರಿಸಿ ಪತ್ರ ಕೊಟ್ಟು ಬಂದೆ’ ಎಂದರು. </p>.<p><strong>ದಲಿತ ಮಹಿಳೆಗೆ ಅರೆ ಬೆತ್ತಲೆ ಶಿಕ್ಷೆ</strong></p>.<p>ಚಿತ್ರದುರ್ಗ, ನ. 21– ಹೊಳಲ್ಕೆರೆ ತಾಲ್ಲೂಕು ಉಪ್ಪರಿಗೇನಹಳ್ಳಿಯಲ್ಲಿ<br>ದಲಿತ ಮಹಿಳೆಯನ್ನು ಅರೆ ಬೆತ್ತಲೆಯಾಗಿ ಗ್ರಾಮದ ದೇವಸ್ಥಾನದ ಮುಂದೆ ನಿಲ್ಲಿಸಿದ ಅಮಾನುಷ ಪ್ರಕರಣ ನಡೆದಿದೆ. ಪ್ರಮುಖ ಆರೋಪಿ ಶಾಲಾ ಶಿಕ್ಷಕ ತಿಪ್ಪೇಸ್ವಾಮಿ ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>