<p><strong>ಲೇಹ್–ಶ್ರೀನಗರ ಹೆದ್ದಾರಿ ಮುಕ್ತ</strong></p><p>ನವದೆಹಲಿ, ಜುಲೈ 8– ಕಾರ್ಗಿಲ್ ಕಾರ್ಯಾಚರಣೆಯಲ್ಲಿ ಅಭೂತಪೂರ್ವ ಯಶಸ್ಸು ಸಾಧಿಸಿರುವ ಭಾರತೀಯ ಸೇನೆ, ಒಂದೂವರೆ ತಿಂಗಳಿಂದ ಮುಚ್ಚಿದ್ದ ಲೇಹ್–ಶ್ರೀನಗರ ಹೆದ್ದಾರಿಯನ್ನು ಇಂದು ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಿತು.</p><p>ಪ್ರಮುಖ ಆಯಕಟ್ಟಿನ ಪ್ರದೇಶವಾದ ಟೈಗರ್ ಹಿಲ್ ಮತ್ತು ಜುಬಾರ್ ಹಿಲ್ ಪ್ರದೇಶವನ್ನು ಭಾರತೀಯ ಪಡೆ ವಶಪಡಿಸಿಕೊಂಡಿರುವುದರಿಂದ ದ್ರಾಸ್ ಹಾಗೂ ಬಟಾಲಿಕ್ ಮೂಲಕ ಹಾದುಹೋಗುವ ಈ ಹೆದ್ದಾರಿಯನ್ನು ಮುಕ್ತಗೊಳಿಸಲು ಸಾಧ್ಯವಾಯಿತು.</p><p><strong>ಸಚಿವ ನಾಣಯ್ಯ ವಿರುದ್ಧ ಹಕ್ಕುಚ್ಯುತಿ ಆರೋಪ</strong></p><p>ಬೆಂಗಳೂರು, ಜುಲೈ 8– ಭಟ್ಕಳದ ಶಾಸಕ ಡಾ.ಯು. ಚಿತ್ತರಂಜನ್ ಅವರ ಕೊಲೆಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಗನ್ನಾಥ ಶೆಟ್ಟಿ ವಿಚಾರಣಾ ಆಯೋಗ ತನ್ನ ವರದಿ ಕೊಟ್ಟು ಎರಡೂವರೆ ವರ್ಷಗಳಾದರೂ ಆ ವರದಿಯನ್ನು ಸದನದ ಮುಂದೆ ಮಂಡಿಸದೆ ಕಾನೂನು ಸಚಿವ ಎಂ.ಸಿ. ನಾಣಯ್ಯ ಅವರು ಸದನದ ಹಕ್ಕುಚ್ಯುತಿ ಮಾಡಿದ್ದಾರೆ ಎಂದು ಬಿಜೆಪಿಯ<br>ಡಾ.ಎಂ.ಪಿ. ಕರ್ಕಿ ಅವರು ಇಂದು ವಿಧಾನಸಭೆಯಲ್ಲಿ ಆರೋಪಿಸಿದರು.</p><p>ಈ ಸದನದ ಹಿಂದಿನ ಅಧಿವೇಶನದಲ್ಲಿ ಈ ವಿಷಯವನ್ನು ಪ್ರಸ್ತಾಪ ಮಾಡಿದಾಗ ಮೂರು ತಿಂಗಳಲ್ಲಿ ವರದಿ ಮಂಡಿಸಲಾಗುತ್ತದೆ ಎಂಬ ಆಶ್ವಾಸನೆಯನ್ನು ಕಾನೂನು ಸಚಿವರು ನೀಡಿದ್ದರು. ಆದರೆ ಈ ಸದನದ ಕಾರ್ಯಕಲಾಪಗಳು ನಾಳೆ ಮುಗಿಯುತ್ತವೆ. ಆದರೂ ಕಾನೂನು ಸಚಿವರು ವರದಿ ಮಂಡಿಸದೆ ಹಕ್ಕುಚ್ಯುತಿ ಮಾಡಿದ್ದಾರೆ ಎಂದು ತಮ್ಮ ವಾದವನ್ನು ಮಂಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲೇಹ್–ಶ್ರೀನಗರ ಹೆದ್ದಾರಿ ಮುಕ್ತ</strong></p><p>ನವದೆಹಲಿ, ಜುಲೈ 8– ಕಾರ್ಗಿಲ್ ಕಾರ್ಯಾಚರಣೆಯಲ್ಲಿ ಅಭೂತಪೂರ್ವ ಯಶಸ್ಸು ಸಾಧಿಸಿರುವ ಭಾರತೀಯ ಸೇನೆ, ಒಂದೂವರೆ ತಿಂಗಳಿಂದ ಮುಚ್ಚಿದ್ದ ಲೇಹ್–ಶ್ರೀನಗರ ಹೆದ್ದಾರಿಯನ್ನು ಇಂದು ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಿತು.</p><p>ಪ್ರಮುಖ ಆಯಕಟ್ಟಿನ ಪ್ರದೇಶವಾದ ಟೈಗರ್ ಹಿಲ್ ಮತ್ತು ಜುಬಾರ್ ಹಿಲ್ ಪ್ರದೇಶವನ್ನು ಭಾರತೀಯ ಪಡೆ ವಶಪಡಿಸಿಕೊಂಡಿರುವುದರಿಂದ ದ್ರಾಸ್ ಹಾಗೂ ಬಟಾಲಿಕ್ ಮೂಲಕ ಹಾದುಹೋಗುವ ಈ ಹೆದ್ದಾರಿಯನ್ನು ಮುಕ್ತಗೊಳಿಸಲು ಸಾಧ್ಯವಾಯಿತು.</p><p><strong>ಸಚಿವ ನಾಣಯ್ಯ ವಿರುದ್ಧ ಹಕ್ಕುಚ್ಯುತಿ ಆರೋಪ</strong></p><p>ಬೆಂಗಳೂರು, ಜುಲೈ 8– ಭಟ್ಕಳದ ಶಾಸಕ ಡಾ.ಯು. ಚಿತ್ತರಂಜನ್ ಅವರ ಕೊಲೆಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಗನ್ನಾಥ ಶೆಟ್ಟಿ ವಿಚಾರಣಾ ಆಯೋಗ ತನ್ನ ವರದಿ ಕೊಟ್ಟು ಎರಡೂವರೆ ವರ್ಷಗಳಾದರೂ ಆ ವರದಿಯನ್ನು ಸದನದ ಮುಂದೆ ಮಂಡಿಸದೆ ಕಾನೂನು ಸಚಿವ ಎಂ.ಸಿ. ನಾಣಯ್ಯ ಅವರು ಸದನದ ಹಕ್ಕುಚ್ಯುತಿ ಮಾಡಿದ್ದಾರೆ ಎಂದು ಬಿಜೆಪಿಯ<br>ಡಾ.ಎಂ.ಪಿ. ಕರ್ಕಿ ಅವರು ಇಂದು ವಿಧಾನಸಭೆಯಲ್ಲಿ ಆರೋಪಿಸಿದರು.</p><p>ಈ ಸದನದ ಹಿಂದಿನ ಅಧಿವೇಶನದಲ್ಲಿ ಈ ವಿಷಯವನ್ನು ಪ್ರಸ್ತಾಪ ಮಾಡಿದಾಗ ಮೂರು ತಿಂಗಳಲ್ಲಿ ವರದಿ ಮಂಡಿಸಲಾಗುತ್ತದೆ ಎಂಬ ಆಶ್ವಾಸನೆಯನ್ನು ಕಾನೂನು ಸಚಿವರು ನೀಡಿದ್ದರು. ಆದರೆ ಈ ಸದನದ ಕಾರ್ಯಕಲಾಪಗಳು ನಾಳೆ ಮುಗಿಯುತ್ತವೆ. ಆದರೂ ಕಾನೂನು ಸಚಿವರು ವರದಿ ಮಂಡಿಸದೆ ಹಕ್ಕುಚ್ಯುತಿ ಮಾಡಿದ್ದಾರೆ ಎಂದು ತಮ್ಮ ವಾದವನ್ನು ಮಂಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>