ಶುಕ್ರವಾರ ಇಲ್ಲಿ ಮೊದಲ ಸಭೆ ಸೇರಿದ ರಾಜ್ಯ ಚುನಾವಣಾ ಸಮಿತಿ ಬಹುತೇಕ ಕ್ಷೇತ್ರಗಳಲ್ಲಿ ಹಾಲಿ ಸದಸ್ಯರಿಗೇ ಟಿಕೆಟ್ ನೀಡಬೇಕು ಎನ್ನುವ ಸೂತ್ರವನ್ನು ಒಪ್ಪಿ, ಆ ಪಟ್ಟಿಯನ್ನು ಪರಿಶೀಲನಾ ಸಮಿತಿಯ (ಸ್ಕ್ರೀನಿಂಗ್ ಕಮಿಟಿ) ಅಂತಿಮ ತೀರ್ಮಾನಕ್ಕೆ ಕಳಿಸಿರುವುದು ಕಾಂಗೈ ಹೈಕಮಾಂಡಿನ ತಂತ್ರಗಳಲ್ಲಿ ಒಂದು ಎಂದೇ ಇಲ್ಲಿ ಭಾವಿಸಲಾಗಿದೆ. ಈ ಪಟ್ಟಿಯನ್ನು ಪರಿಶೀಲನಾ ಸಮಿತಿ ನೋಡಿ ಪಕ್ಕಕ್ಕೆ ಇಡುತ್ತದೆ, ಎಐಸಿಸಿ ಅಧ್ಯಕ್ಷರ ಸೂಚನೆಯಂತೆ ಹೊಸ ಯಾದಿಯೇ ಸಿದ್ಧವಾಗಿ ಪ್ರಕಟವಾಗಲಿದೆ ನೋಡಿ ಎಂದು ಹಿರಿಯ ಕಾಂಗೈ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ವಿವರಿಸಿದರು.