<p><strong>ಲಿಂಗನಮಕ್ಕಿ ಅಣೆಗೆ 8 ಅಡಿಯಷ್ಟು ನೀರು: ಭರ್ಜರಿ ಮಳೆ</strong></p><p><strong>ಬೆಂಗಳೂರು, ಜುಲೈ 5–</strong> ಸುಮಾರು ಆರೇಳು ಇಂಚುಗಳ ಭರ್ಜರಿ ಮಳೆ ಪಡೆಯುತ್ತಿರುವ ಲಿಂಗನಮಕ್ಕಿ ಜಲಾನಯನ ಪ್ರದೇಶವು ಕಳೆದ 24 ಗಂಟೆಗಳ ಅವಧಿಯಲ್ಲಿ ಜಲಾಶಯ ಮಟ್ಟವನ್ನು ಎಂಟು ಅಡಿಗಳಷ್ಟು ಏರಿಸಿರುವುದರ ಜತೆಗೆ, ಇನ್ನಷ್ಟು ವಿದ್ಯುತ್ ಕಡಿತದ ಅಂಜಿಕೆಯನ್ನು ಬಹುತೇಕ ದೂರ ಮಾಡಿದೆ.</p><p>‘ನಾವು ಕಷ್ಟದಿಂದ ಪೂರ್ತಿ ಪಾರಾಗಿಲ್ಲ. ಆದರೆ ಮುಂಗಾರು ಮಳೆ ಆರಂಭವಾಗಿ ನೀರಿನ ಪ್ರವಾಹ ಹೆಚ್ಚಿರುವುದರಿಂದ ಸದ್ಯದ ಮಟ್ಟಿಗೆ ಆನಂದಪಟ್ಟುಕೊಳ್ಳಲು ಕಾರಣಗಳಿವೆ’ ಎಂದು ವಿದ್ಯುಚ್ಛಕ್ತಿ ಖಾತೆ ಮಂತ್ರಿ <br>ಎಚ್.ಎಂ. ಚನ್ನಬಸಪ್ಪ ಅವರು ತಿಳಿಸಿದರು.</p><p>***</p><p><strong>ಹೃದ್ರೋಗ ತಡೆಗೆ ಮದ್ದು ಮೊಸರು</strong></p><p><strong>ನವದೆಹಲಿ, ಜುಲೈ 5–</strong> ‘ಮೊಸರು ಆರೋಗ್ಯಕ್ಕೆ ಒಳ್ಳೆಯದು’. ಭಾರತೀಯರು ಹಿಂದಿನ ಕಾಲದಿಂದಲೂ ತಳೆದಿರುವ ನಂಬಿಕೆ ಇದು. ಹೃದಯಾಘಾತ ಸಂಭವಿಸುವುದನ್ನು ಮೊಸರು ತಡೆಯುತ್ತದೆ ಎಂದು ಈಚಿನ ವೈದ್ಯಕೀಯ ಅಧ್ಯಯನ ತಿಳಿಸಿದೆ.</p><p>‘ನ್ಯೂಯಾರ್ಕ್ ಟೈಂಸ್’ ವರದಿ ಮಾಡಿರುವಂತೆ ಆಫ್ರಿಕಾ ಮತ್ತು ಅಮೆರಿಕದ ವೈದ್ಯ ಅಧ್ಯಯನವು ಮೊಸರಿನ ಮಹಿಮೆಯನ್ನು ಸಾಬೀತುಪಡಿಸಿದೆ.</p><p>ಮೊಸರನ್ನು ಸೇವಿಸುವುದರಿಂದ ರಕ್ತದಲ್ಲಿ ಕೊಲೆಸ್ಟರಾಲ್ ಪ್ರಮಾಣವನ್ನು ಇಳಿಸಬಹುದು. ಇದೇ ವೈದ್ಯ ವಿಜ್ಞಾನಿಗಳ ಈಚಿನ ಶೋಧ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಿಂಗನಮಕ್ಕಿ ಅಣೆಗೆ 8 ಅಡಿಯಷ್ಟು ನೀರು: ಭರ್ಜರಿ ಮಳೆ</strong></p><p><strong>ಬೆಂಗಳೂರು, ಜುಲೈ 5–</strong> ಸುಮಾರು ಆರೇಳು ಇಂಚುಗಳ ಭರ್ಜರಿ ಮಳೆ ಪಡೆಯುತ್ತಿರುವ ಲಿಂಗನಮಕ್ಕಿ ಜಲಾನಯನ ಪ್ರದೇಶವು ಕಳೆದ 24 ಗಂಟೆಗಳ ಅವಧಿಯಲ್ಲಿ ಜಲಾಶಯ ಮಟ್ಟವನ್ನು ಎಂಟು ಅಡಿಗಳಷ್ಟು ಏರಿಸಿರುವುದರ ಜತೆಗೆ, ಇನ್ನಷ್ಟು ವಿದ್ಯುತ್ ಕಡಿತದ ಅಂಜಿಕೆಯನ್ನು ಬಹುತೇಕ ದೂರ ಮಾಡಿದೆ.</p><p>‘ನಾವು ಕಷ್ಟದಿಂದ ಪೂರ್ತಿ ಪಾರಾಗಿಲ್ಲ. ಆದರೆ ಮುಂಗಾರು ಮಳೆ ಆರಂಭವಾಗಿ ನೀರಿನ ಪ್ರವಾಹ ಹೆಚ್ಚಿರುವುದರಿಂದ ಸದ್ಯದ ಮಟ್ಟಿಗೆ ಆನಂದಪಟ್ಟುಕೊಳ್ಳಲು ಕಾರಣಗಳಿವೆ’ ಎಂದು ವಿದ್ಯುಚ್ಛಕ್ತಿ ಖಾತೆ ಮಂತ್ರಿ <br>ಎಚ್.ಎಂ. ಚನ್ನಬಸಪ್ಪ ಅವರು ತಿಳಿಸಿದರು.</p><p>***</p><p><strong>ಹೃದ್ರೋಗ ತಡೆಗೆ ಮದ್ದು ಮೊಸರು</strong></p><p><strong>ನವದೆಹಲಿ, ಜುಲೈ 5–</strong> ‘ಮೊಸರು ಆರೋಗ್ಯಕ್ಕೆ ಒಳ್ಳೆಯದು’. ಭಾರತೀಯರು ಹಿಂದಿನ ಕಾಲದಿಂದಲೂ ತಳೆದಿರುವ ನಂಬಿಕೆ ಇದು. ಹೃದಯಾಘಾತ ಸಂಭವಿಸುವುದನ್ನು ಮೊಸರು ತಡೆಯುತ್ತದೆ ಎಂದು ಈಚಿನ ವೈದ್ಯಕೀಯ ಅಧ್ಯಯನ ತಿಳಿಸಿದೆ.</p><p>‘ನ್ಯೂಯಾರ್ಕ್ ಟೈಂಸ್’ ವರದಿ ಮಾಡಿರುವಂತೆ ಆಫ್ರಿಕಾ ಮತ್ತು ಅಮೆರಿಕದ ವೈದ್ಯ ಅಧ್ಯಯನವು ಮೊಸರಿನ ಮಹಿಮೆಯನ್ನು ಸಾಬೀತುಪಡಿಸಿದೆ.</p><p>ಮೊಸರನ್ನು ಸೇವಿಸುವುದರಿಂದ ರಕ್ತದಲ್ಲಿ ಕೊಲೆಸ್ಟರಾಲ್ ಪ್ರಮಾಣವನ್ನು ಇಳಿಸಬಹುದು. ಇದೇ ವೈದ್ಯ ವಿಜ್ಞಾನಿಗಳ ಈಚಿನ ಶೋಧ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>