<p>ನವದೆಹಲಿ, ಮೇ 3– ಬಲಾತ್ಕಾರದ ಮೇಲೆ ರಾಜ್ಯ ವಿಧಾನಸಭೆಯ ಅಥವಾ ಸಂಸತ್ತಿನ ಸದಸ್ಯರು ರಾಜೀನಾಮೆ ಕೊಡುವುದನ್ನು<br>ತಪ್ಪಿಸುವುದಕ್ಕಾಗಿ ಸಂವಿಧಾನಕ್ಕೆ ತಿದ್ದುಪಡಿ ತರಲು ಉದ್ದೇಶಿಸಲಾಗಿದೆ.</p><p>ಈ ಬಗ್ಗೆ ಸಂವಿಧಾನ ತಿದ್ದುಪಡಿ<br>ವಿಧೇಯಕವೊಂದನ್ನು ಇಂದು ಲೋಕಸಭೆಯಲ್ಲಿ ಕೇಂದ್ರ ಕಾನೂನು ಮಂತ್ರಿ ಎಚ್.ಆರ್. ಗೋಖಲೆ ಅವರು ಮಂಡಿಸಿದರು.</p><p>ಈ ತಿದ್ದುಪಡಿ ವಿಧೇಯಕದ ಮಂಡನೆಯನ್ನು ತಪ್ಪಿಸಲು ವಿರೋಧ ಪಕ್ಷದವರು ವ್ಯರ್ಥ ಪ್ರಯತ್ನ ನಡೆಸಿದರು.</p><p>ಈ ವಿಧೇಯಕದ ಪ್ರಕಾರ, ಸದಸ್ಯರು ವೈಯಕ್ತಿಕವಾಗಿ ರಾಜೀನಾಮೆ ಕೊಟ್ಟಿಲ್ಲ ಎಂಬುದು ತನಿಖೆಯಿಂದ ವ್ಯಕ್ತಪಟ್ಟಲ್ಲಿ ಆ ರಾಜೀನಾಮೆಯನ್ನು ವಿಧಾನಸಭೆಯ ಅಥವಾ ಸಂಸತ್ತಿನ ಅಧ್ಯಕ್ಷರು ಅಂಗೀಕರಿಸುವುದಿಲ್ಲ.</p><p><strong>ಬಂದ್: ನಾನಾ ಕಡೆ ಭಾಗಶಃ ಯಶಸ್ವಿ</strong></p><p>ನವದೆಹಲಿ, ಮೇ 3– ಬೆಲೆ ಏರಿಕೆ ವಿರುದ್ಧ ಐದು ವಾಮಪಂಥೀಯ ಪಕ್ಷಗಳು ಕರೆ ಕೊಟ್ಟಿದ್ದ ಇಂದಿನ ಬಂದ್ ರಾಷ್ಟ್ರದ ನಾನಾ ಕಡೆ ಭಾಗಶಃ ಯಶಸ್ವಿಯಾಯಿತು ಹಾಗೂ ಶಾಂತಯುತವಾಗಿ ನಡೆಯಿತು.</p><p>ಬಂದ್ನಿಂದ ಮುಂಬಯಿ ಸಂಪೂರ್ಣ ಸ್ತಬ್ಧಗೊಂಡಿತು. ಅಸ್ಸಾಂ, ಕೇರಳದಲ್ಲಿ ಮಾಮೂಲಿ ಜೀವನ ಅಸ್ತವ್ಯಸ್ತಗೊಂಡಿತು.</p><p>ರಾಜಧಾನಿ ನವದೆಹಲಿ ಈ ಆರು ತಿಂಗಳಲ್ಲಿ ಎರಡನೇ ಸಲ ಕಂಡ ಬಂದ್ ವಾಣಿಜ್ಯ ಮತ್ತು ಕೈಗಾರಿಕೆ ಚಟುವಟಿಕೆಗಳನ್ನು ಸ್ತಬ್ಧಗೊಳಿಸಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನವದೆಹಲಿ, ಮೇ 3– ಬಲಾತ್ಕಾರದ ಮೇಲೆ ರಾಜ್ಯ ವಿಧಾನಸಭೆಯ ಅಥವಾ ಸಂಸತ್ತಿನ ಸದಸ್ಯರು ರಾಜೀನಾಮೆ ಕೊಡುವುದನ್ನು<br>ತಪ್ಪಿಸುವುದಕ್ಕಾಗಿ ಸಂವಿಧಾನಕ್ಕೆ ತಿದ್ದುಪಡಿ ತರಲು ಉದ್ದೇಶಿಸಲಾಗಿದೆ.</p><p>ಈ ಬಗ್ಗೆ ಸಂವಿಧಾನ ತಿದ್ದುಪಡಿ<br>ವಿಧೇಯಕವೊಂದನ್ನು ಇಂದು ಲೋಕಸಭೆಯಲ್ಲಿ ಕೇಂದ್ರ ಕಾನೂನು ಮಂತ್ರಿ ಎಚ್.ಆರ್. ಗೋಖಲೆ ಅವರು ಮಂಡಿಸಿದರು.</p><p>ಈ ತಿದ್ದುಪಡಿ ವಿಧೇಯಕದ ಮಂಡನೆಯನ್ನು ತಪ್ಪಿಸಲು ವಿರೋಧ ಪಕ್ಷದವರು ವ್ಯರ್ಥ ಪ್ರಯತ್ನ ನಡೆಸಿದರು.</p><p>ಈ ವಿಧೇಯಕದ ಪ್ರಕಾರ, ಸದಸ್ಯರು ವೈಯಕ್ತಿಕವಾಗಿ ರಾಜೀನಾಮೆ ಕೊಟ್ಟಿಲ್ಲ ಎಂಬುದು ತನಿಖೆಯಿಂದ ವ್ಯಕ್ತಪಟ್ಟಲ್ಲಿ ಆ ರಾಜೀನಾಮೆಯನ್ನು ವಿಧಾನಸಭೆಯ ಅಥವಾ ಸಂಸತ್ತಿನ ಅಧ್ಯಕ್ಷರು ಅಂಗೀಕರಿಸುವುದಿಲ್ಲ.</p><p><strong>ಬಂದ್: ನಾನಾ ಕಡೆ ಭಾಗಶಃ ಯಶಸ್ವಿ</strong></p><p>ನವದೆಹಲಿ, ಮೇ 3– ಬೆಲೆ ಏರಿಕೆ ವಿರುದ್ಧ ಐದು ವಾಮಪಂಥೀಯ ಪಕ್ಷಗಳು ಕರೆ ಕೊಟ್ಟಿದ್ದ ಇಂದಿನ ಬಂದ್ ರಾಷ್ಟ್ರದ ನಾನಾ ಕಡೆ ಭಾಗಶಃ ಯಶಸ್ವಿಯಾಯಿತು ಹಾಗೂ ಶಾಂತಯುತವಾಗಿ ನಡೆಯಿತು.</p><p>ಬಂದ್ನಿಂದ ಮುಂಬಯಿ ಸಂಪೂರ್ಣ ಸ್ತಬ್ಧಗೊಂಡಿತು. ಅಸ್ಸಾಂ, ಕೇರಳದಲ್ಲಿ ಮಾಮೂಲಿ ಜೀವನ ಅಸ್ತವ್ಯಸ್ತಗೊಂಡಿತು.</p><p>ರಾಜಧಾನಿ ನವದೆಹಲಿ ಈ ಆರು ತಿಂಗಳಲ್ಲಿ ಎರಡನೇ ಸಲ ಕಂಡ ಬಂದ್ ವಾಣಿಜ್ಯ ಮತ್ತು ಕೈಗಾರಿಕೆ ಚಟುವಟಿಕೆಗಳನ್ನು ಸ್ತಬ್ಧಗೊಳಿಸಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>