<div><p><strong>ದೆಹಲಿಯಲ್ಲಿ ಮತ್ತೊಬ್ಬ ಪಾಕ್ ನೌಕರನಿಂದ ನಿಷ್ಠೆ ಬದಲಾವಣೆ<br />ನವದೆಹಲಿ, ಸೆ. 3–</strong> ಇಲ್ಲಿನ ಪಾಕಿಸ್ತಾನಿ ಹೈಕಮಿಷನ್ ನೌಕರವರ್ಗದ ಬಂಗಾಳಿ ಸದಸ್ಯ, ಎಲೆಕ್ಟ್ರಿಷಿಯನ್ ಅಮ್ಜದ್ ಆಲೀ ಅವರು ಇಂದು ಪತ್ನಿ ಮತ್ತು ಮೂರು ತಿಂಗಳ ಪುತ್ರಿ ಸಮೇತ ಹೈಕಮಿಷನ್ ಕಚೇರಿ ಆವರಣದಿಂದ ಪರಾರಿಯಾದರಲ್ಲದೆ ಭಾರತದಲ್ಲಿ ಆಶ್ರಯ ಕೋರಿದರು.</p><p>ಬಾಂಗ್ಲಾ ದೇಶಕ್ಕೆ ತಮ್ಮ ನಿಷ್ಠೆ ಬದಲಾಯಿಸಿದ ಪಾಕ್ ಹೈಕಮಿಷನ್ ನೌಕರರ ಸಂಖ್ಯೆಯು ಇದರಿಂದ ಐದಕ್ಕೆ ಏರಿತು.</p><p>ಬಂಗಾಳಿ ನೌಕರರು ಕಚೇರಿ ಆವರಣ ಬಿಟ್ಟು ಹೊರಗಡೆ ಹೋಗುವುದಕ್ಕೆ ಇದುವರೆ ವಿಗೂ ಅವಕಾಶಗಳಿರಲಿಲ್ಲ. ಆದರೆ ಪತ್ನಿ–ಪುತ್ರಿ ಜತೆ ಫೋಟೊ ತೆಗೆಸಿಕೊಳ್ಳುವ ನೆಪ ಒಡ್ಡಿದರು ಅಮ್ಮದ್ ಆಲೀ. ಭದ್ರತಾ ಅಧಿಕಾರಿಗಳು ದಂಪತಿಯನ್ನು ಹಿಂಬಾಲಿಸಿದರು.</p><p><strong>ಸವಾಲು ಎದುರಿಸಲು ಸತತ ಸಜ್ಜು: ವಿಮಾನ ಪಡೆಗೆ ಇಂದಿರಾ ಕರೆ<br />ನವದೆಹಲಿ, ಸೆ. 3–</strong> ಆತಂರಿಕವಾದ ಕೆಲವು ಸಮಸ್ಯೆಗಳು ಮತ್ತು ವಿದೇಶಿ ಬೆದರಿಕೆಯೂ ಸೇರಿದಂತೆ ರಾಷ್ಟ್ರವು ಈಗ ತೀವ್ರ ರೀತಿಯ ಸವಾಲುಗಳನ್ನು ಎದುರಿಸುತ್ತಿರುವುದೆಂದು ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಅವರು ಇಂದು ಇಲ್ಲಿ ವಾಯುಪಡೆ ಕಮಾಂಡರುಗಳಿಗೆ ತಿಳಿಸಿದರು.</p><p>‘ಈ ಸವಾಲುಗಳು ಹೆಚ್ಚು ಎಚ್ಚರಿಕೆಯಿಂದಿರಬೇಕೆಂಬ ಮುನ್ಸೂಚನೆ ನೀಡಿವೆ’ ಎಂದು ಅವರು ದ್ವೈವಾರ್ಷಿಕ ಸಮ್ಮೇಳನದಲ್ಲಿ ಕಮಾಂಡರುಗಳನ್ನು ಉದ್ದೇಶಿಸಿ ಭಾಷಣ ಮಾಡುತ್ತಾ ತಿಳಿಸಿದರು.</p></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<div><p><strong>ದೆಹಲಿಯಲ್ಲಿ ಮತ್ತೊಬ್ಬ ಪಾಕ್ ನೌಕರನಿಂದ ನಿಷ್ಠೆ ಬದಲಾವಣೆ<br />ನವದೆಹಲಿ, ಸೆ. 3–</strong> ಇಲ್ಲಿನ ಪಾಕಿಸ್ತಾನಿ ಹೈಕಮಿಷನ್ ನೌಕರವರ್ಗದ ಬಂಗಾಳಿ ಸದಸ್ಯ, ಎಲೆಕ್ಟ್ರಿಷಿಯನ್ ಅಮ್ಜದ್ ಆಲೀ ಅವರು ಇಂದು ಪತ್ನಿ ಮತ್ತು ಮೂರು ತಿಂಗಳ ಪುತ್ರಿ ಸಮೇತ ಹೈಕಮಿಷನ್ ಕಚೇರಿ ಆವರಣದಿಂದ ಪರಾರಿಯಾದರಲ್ಲದೆ ಭಾರತದಲ್ಲಿ ಆಶ್ರಯ ಕೋರಿದರು.</p><p>ಬಾಂಗ್ಲಾ ದೇಶಕ್ಕೆ ತಮ್ಮ ನಿಷ್ಠೆ ಬದಲಾಯಿಸಿದ ಪಾಕ್ ಹೈಕಮಿಷನ್ ನೌಕರರ ಸಂಖ್ಯೆಯು ಇದರಿಂದ ಐದಕ್ಕೆ ಏರಿತು.</p><p>ಬಂಗಾಳಿ ನೌಕರರು ಕಚೇರಿ ಆವರಣ ಬಿಟ್ಟು ಹೊರಗಡೆ ಹೋಗುವುದಕ್ಕೆ ಇದುವರೆ ವಿಗೂ ಅವಕಾಶಗಳಿರಲಿಲ್ಲ. ಆದರೆ ಪತ್ನಿ–ಪುತ್ರಿ ಜತೆ ಫೋಟೊ ತೆಗೆಸಿಕೊಳ್ಳುವ ನೆಪ ಒಡ್ಡಿದರು ಅಮ್ಮದ್ ಆಲೀ. ಭದ್ರತಾ ಅಧಿಕಾರಿಗಳು ದಂಪತಿಯನ್ನು ಹಿಂಬಾಲಿಸಿದರು.</p><p><strong>ಸವಾಲು ಎದುರಿಸಲು ಸತತ ಸಜ್ಜು: ವಿಮಾನ ಪಡೆಗೆ ಇಂದಿರಾ ಕರೆ<br />ನವದೆಹಲಿ, ಸೆ. 3–</strong> ಆತಂರಿಕವಾದ ಕೆಲವು ಸಮಸ್ಯೆಗಳು ಮತ್ತು ವಿದೇಶಿ ಬೆದರಿಕೆಯೂ ಸೇರಿದಂತೆ ರಾಷ್ಟ್ರವು ಈಗ ತೀವ್ರ ರೀತಿಯ ಸವಾಲುಗಳನ್ನು ಎದುರಿಸುತ್ತಿರುವುದೆಂದು ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಅವರು ಇಂದು ಇಲ್ಲಿ ವಾಯುಪಡೆ ಕಮಾಂಡರುಗಳಿಗೆ ತಿಳಿಸಿದರು.</p><p>‘ಈ ಸವಾಲುಗಳು ಹೆಚ್ಚು ಎಚ್ಚರಿಕೆಯಿಂದಿರಬೇಕೆಂಬ ಮುನ್ಸೂಚನೆ ನೀಡಿವೆ’ ಎಂದು ಅವರು ದ್ವೈವಾರ್ಷಿಕ ಸಮ್ಮೇಳನದಲ್ಲಿ ಕಮಾಂಡರುಗಳನ್ನು ಉದ್ದೇಶಿಸಿ ಭಾಷಣ ಮಾಡುತ್ತಾ ತಿಳಿಸಿದರು.</p></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>