ನವದೆಹಲಿ, ಜ. 1– ಕಳೆದ ಎರಡು ವಾರಗಳಿಂದ ತೀವ್ರ ಬಿಕ್ಕಟ್ಟು ಉಂಟು ಮಾಡಿ ಕುತೂಹಲ ಕೆರಳಿಸಿರುವ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕತ್ವವನ್ನು ವಹಿಸಿಕೊಳ್ಳುವಂತೆ ಸೀತಾರಾಂ ಕೇಸರಿ ಅವರಿಗೆ ಇಂದು ರಾತ್ರಿ ನಡೆದ ಪಕ್ಷದ ಕಾರ್ಯಕಾರಿಣಿ ಸಭೆಯು ಮನವಿ ಮಾಡಿತು. ಇದರಿಂದಾಗಿ ಬಹುತೇಕ ಮಟ್ಟಿಗೆ ಕೇಸರಿ ಅವರು ಒಮ್ಮತದಿಂದ ಆಯ್ಕೆಯಾಗುವುದು ಖಚಿತವಾದಂತಾಯಿತು.ಸಭೆಯಲ್ಲಿ ಕೈಗೊಂಡ ತೀರ್ಮಾನವನ್ನು ಪಕ್ಷದ ವಕ್ತಾರ ವಿ.ಎನ್. ಗಾಡ್ಗೀಳ್ ಅವರು ವರದಿಗಾರರಿಗೆ ತಿಳಿಸಿದರು.