ನವದೆಹಲಿ, ಜ. 10– ಕರ್ನಾಟಕ ಮತ್ತು ತಮಿಳುನಾಡಿನಲ್ಲಿಯ ಕಾವೇರಿ ಜಲಾಶಯಗಳ ನೀರಿನ ಮಟ್ಟ ಮತ್ತು ಬೆಳೆ ಪರಿಸ್ಥಿತಿಯ ಅಧ್ಯಯನ ಮಾಡಲು ನೇಮಕಗೊಂಡಿದ್ದ ಡಾ. ವೈ.ಕೆ.ಅಲಘ್ ನೇತೃತ್ವದ ತಂಡವು ಇಂದು ಸಂಜೆ ಪ್ರಧಾನಿ ಪಿ.ವಿ.ನರಸಿಂಹ ರಾವ್ ಅವರನ್ನು ಭೇಟಿ ಮಾಡಿ, ವರದಿ ಸಲ್ಲಿಸಲು ಮತ್ತೆ ಒಂದೆರಡು ದಿನಗಳ ಕಾಲಾವಕಾಶ ಕೋರಿತೆಂದು ಅಧಿಕೃತವಾಗಿ ಗೊತ್ತಾಗಿದೆ.