ಪಕ್ಷಾಂತರ ಮಾಡಿ ತಪ್ಪೆಸಗಿದೆ ಎಂದು ಸಚಿವ ಎಂ.ಟಿ.ಬಿ. ನಾಗರಾಜ್ ಪಶ್ಚಾತ್ತಾಪ ವ್ಯಕ್ತಪಡಿಸಿದ್ದಾರೆ (ಪ್ರ.ವಾ., ಮೇ 1). ಸಚಿವರಿಗೆ ಇಂಥ ಅಧಿಕಾರ ವೈರಾಗ್ಯ ಯಾಕೆ ಎಂಬುದು ತಿಳಿಯದಾಗಿದೆ. ‘ರಾಜಕೀಯದಲ್ಲಿ ನಾನು ಹಣ ಮಾಡಬೇಕೆಂದೇನೂ ಇಲ್ಲ’ ಎಂದೂ ಹೇಳಿದ್ದಾರೆ. ರಾಜಕೀಯದ ಮೂಲಕ ಹಣ ಮಾಡುವುದೂ ಒಂದು ಮಾರ್ಗ ಎಂದು ಈ ಮೂಲಕ ಅವರು ಸೂಚ್ಯವಾಗಿ ಹೇಳಿದ್ದಾರೆ. ಎಂ.ಟಿ.ಬಿ. ಸಹಿತ 18 ಮಂದಿ ಶಾಸಕರು ರಾಜೀನಾಮೆ ನೀಡಿ ಚುನಾವಣೆಗೆ ಬಿಜೆಪಿಯಿಂದ ಸ್ಪರ್ಧಿಸಿ, ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರಲು ಕಾರಣರಾದರು. ಅವರ ಈ ತ್ಯಾಗಕ್ಕೆ ಪ್ರತಿಫಲವಾಗಿ ಸಚಿವ ಸ್ಥಾನ ನೀಡಲಾಗಿದೆ.