<p>ಪಕ್ಷಾಂತರ ಮಾಡಿ ತಪ್ಪೆಸಗಿದೆ ಎಂದು ಸಚಿವ ಎಂ.ಟಿ.ಬಿ. ನಾಗರಾಜ್ ಪಶ್ಚಾತ್ತಾಪ ವ್ಯಕ್ತಪಡಿಸಿದ್ದಾರೆ (ಪ್ರ.ವಾ., ಮೇ 1). ಸಚಿವರಿಗೆ ಇಂಥ ಅಧಿಕಾರ ವೈರಾಗ್ಯ ಯಾಕೆ ಎಂಬುದು ತಿಳಿಯದಾಗಿದೆ. ‘ರಾಜಕೀಯದಲ್ಲಿ ನಾನು ಹಣ ಮಾಡಬೇಕೆಂದೇನೂ ಇಲ್ಲ’ ಎಂದೂ ಹೇಳಿದ್ದಾರೆ. ರಾಜಕೀಯದ ಮೂಲಕ ಹಣ ಮಾಡುವುದೂ ಒಂದು ಮಾರ್ಗ ಎಂದು ಈ ಮೂಲಕ ಅವರು ಸೂಚ್ಯವಾಗಿ ಹೇಳಿದ್ದಾರೆ. ಎಂ.ಟಿ.ಬಿ. ಸಹಿತ 18 ಮಂದಿ ಶಾಸಕರು ರಾಜೀನಾಮೆ ನೀಡಿ ಚುನಾವಣೆಗೆ ಬಿಜೆಪಿಯಿಂದ ಸ್ಪರ್ಧಿಸಿ, ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರಲು ಕಾರಣರಾದರು. ಅವರ ಈ ತ್ಯಾಗಕ್ಕೆ ಪ್ರತಿಫಲವಾಗಿ ಸಚಿವ ಸ್ಥಾನ ನೀಡಲಾಗಿದೆ.</p>.<p>ಬಹುತೇಕ ಆಯ್ಕೆಯಾದ ಶಾಸಕರಿಗೆ ಸಚಿವರಾಗಬೇಕು ಎಂಬ ಬಲವಾದ ಆಕಾಂಕ್ಷೆ ಇದ್ದೇ ಇರುತ್ತದೆ. ರಾಜಕಾರಣವು ಸೇವೆಯ ಒಂದು ಭಾಗ ಎಂದು ಯಾವ ರಾಜಕಾರಣಿಯೂ ತಿಳಿದಿಲ್ಲ. ಇಂಥ ಮನೋಭಾವ ಹೊಂದಿದ್ದರೆ ಇವತ್ತು ಗುತ್ತಿಗೆ ಕಾಮಗಾರಿಯಲ್ಲಿ ಶೇ 40 ಕಮಿಷನ್ ಸುದ್ದಿ ಮಾಡುತ್ತಿರಲಿಲ್ಲ. ಎಂ.ಟಿ.ಬಿ. ಅವರಿಗೆ ಖಾತೆಯ ಮೇಲೆ ಮುನಿಸೋ, ಸರ್ಕಾರದ ನಡೆಯ ಬಗ್ಗೆ ಅತೃಪ್ತಿಯೋ? ಅಂತೂ ಸಚಿವರಿಗೆ ಅಧಿಕಾರ ವೈರಾಗ್ಯವೇಕೆ ಎಂಬುದು ಪ್ರಶ್ನಾರ್ಹವಾಗಿದೆ.</p>.<p>- ಗಣಪತಿ ಶಿರಳಗಿ,ಸಾಗರ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಪಕ್ಷಾಂತರ ಮಾಡಿ ತಪ್ಪೆಸಗಿದೆ ಎಂದು ಸಚಿವ ಎಂ.ಟಿ.ಬಿ. ನಾಗರಾಜ್ ಪಶ್ಚಾತ್ತಾಪ ವ್ಯಕ್ತಪಡಿಸಿದ್ದಾರೆ (ಪ್ರ.ವಾ., ಮೇ 1). ಸಚಿವರಿಗೆ ಇಂಥ ಅಧಿಕಾರ ವೈರಾಗ್ಯ ಯಾಕೆ ಎಂಬುದು ತಿಳಿಯದಾಗಿದೆ. ‘ರಾಜಕೀಯದಲ್ಲಿ ನಾನು ಹಣ ಮಾಡಬೇಕೆಂದೇನೂ ಇಲ್ಲ’ ಎಂದೂ ಹೇಳಿದ್ದಾರೆ. ರಾಜಕೀಯದ ಮೂಲಕ ಹಣ ಮಾಡುವುದೂ ಒಂದು ಮಾರ್ಗ ಎಂದು ಈ ಮೂಲಕ ಅವರು ಸೂಚ್ಯವಾಗಿ ಹೇಳಿದ್ದಾರೆ. ಎಂ.ಟಿ.ಬಿ. ಸಹಿತ 18 ಮಂದಿ ಶಾಸಕರು ರಾಜೀನಾಮೆ ನೀಡಿ ಚುನಾವಣೆಗೆ ಬಿಜೆಪಿಯಿಂದ ಸ್ಪರ್ಧಿಸಿ, ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರಲು ಕಾರಣರಾದರು. ಅವರ ಈ ತ್ಯಾಗಕ್ಕೆ ಪ್ರತಿಫಲವಾಗಿ ಸಚಿವ ಸ್ಥಾನ ನೀಡಲಾಗಿದೆ.</p>.<p>ಬಹುತೇಕ ಆಯ್ಕೆಯಾದ ಶಾಸಕರಿಗೆ ಸಚಿವರಾಗಬೇಕು ಎಂಬ ಬಲವಾದ ಆಕಾಂಕ್ಷೆ ಇದ್ದೇ ಇರುತ್ತದೆ. ರಾಜಕಾರಣವು ಸೇವೆಯ ಒಂದು ಭಾಗ ಎಂದು ಯಾವ ರಾಜಕಾರಣಿಯೂ ತಿಳಿದಿಲ್ಲ. ಇಂಥ ಮನೋಭಾವ ಹೊಂದಿದ್ದರೆ ಇವತ್ತು ಗುತ್ತಿಗೆ ಕಾಮಗಾರಿಯಲ್ಲಿ ಶೇ 40 ಕಮಿಷನ್ ಸುದ್ದಿ ಮಾಡುತ್ತಿರಲಿಲ್ಲ. ಎಂ.ಟಿ.ಬಿ. ಅವರಿಗೆ ಖಾತೆಯ ಮೇಲೆ ಮುನಿಸೋ, ಸರ್ಕಾರದ ನಡೆಯ ಬಗ್ಗೆ ಅತೃಪ್ತಿಯೋ? ಅಂತೂ ಸಚಿವರಿಗೆ ಅಧಿಕಾರ ವೈರಾಗ್ಯವೇಕೆ ಎಂಬುದು ಪ್ರಶ್ನಾರ್ಹವಾಗಿದೆ.</p>.<p>- ಗಣಪತಿ ಶಿರಳಗಿ,ಸಾಗರ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>