ವಿಶ್ವವಿದ್ಯಾಲಯಗಳಲ್ಲಿನ ಗಂಭೀರ ಸಮಸ್ಯೆಗಳನ್ನು ಕುರಿತ ‘ಪ್ರಜಾವಾಣಿ’ಯ ವರದಿಗಳು ಸಕಾಲಿಕವೂ ಅರ್ಥಪೂರ್ಣವೂ ಆಗಿವೆ. ಪ್ರಸ್ತುತ ಜಾತಿಯ ಆಲಯಗಳಾಗಿರುವ ಹಲವು ವಿಶ್ವವಿದ್ಯಾಲಯಗಳು ಜ್ಞಾನ ಉತ್ಪಾದನೆಯನ್ನು ಮರೆತಂತೆ ವರ್ತಿಸುತ್ತಿವೆ.
ಬಹುಪಾಲು ಬೋಧಕ ಮತ್ತು ಬೋಧಕೇತರ ಹುದ್ದೆಗಳ ನೇಮಕಗಳು ಹಣ, ಜಾತಿ, ಪ್ರಭಾವಗಳ ಹಿನ್ನೆಲೆಯಲ್ಲಿಯೇ ನಡೆಯುತ್ತಿವೆ. ದೇಶದ ಪ್ರಗತಿಯು ಶಿಕ್ಷಣದ ಪ್ರಗತಿಯನ್ನೂ ಆಧರಿಸಿದೆ. ಆದ್ದರಿಂದ ವಿಶ್ವವಿದ್ಯಾಲಯಗಳ ಸುಧಾರಣೆಗೆ ಸರ್ಕಾರ ಕ್ರಮ ಕೈಗೊಳ್ಳಬೇಕು.