ಬಹುಶಃ ಯಾವ ಪ್ರಾಣಿಯೂ ತನ್ನ ಆಹಾರಕ್ಕಲ್ಲದೆ ಇನ್ನೊಂದು ಪ್ರಾಣಿಯ ಆವಾಸಸ್ಥಾನಕ್ಕೆ ನುಗ್ಗಿ ಸುಖಾಸುಮ್ಮನೆ ಬಡಿಯುವುದಿಲ್ಲ, ಹಿಂಸಿಸಿ ಖುಷಿಪಡುವುದಿಲ್ಲ. ಅಂದರೆ, ಬಡಿದು-ಕೊಂದು ತನ್ನತ್ತ ತಲೆಯೆತ್ತದಂತೆ ಮಾಡುವ ಹೊಸದೊಂದು ‘ಸನಾತನ’ ಪ್ರಾಣಿ ಸೃಷ್ಟಿಯಾಗುತ್ತಿದೆ ಎಂದಾಯಿತು. ಹಿಂಸೆಗೆ ಹಿಂಸೆಯೇ ಪ್ರತಿರೋಧ
ವಾದರೆ, ಅನಾಗರಿಕ ನಡವಳಿಕೆಯೇ ಈ ದೇಶದ ಹೊಸ ಕಾನೂನಾಗಿಬಿಡುತ್ತದೆ. ವಿದ್ಯಾರ್ಥಿಗಳು ಗೂಂಡಾಗಳಾಗಿ ಬೀದಿಬೀದಿಯಲ್ಲಿ ಇರಿದುಕೊಳ್ಳಬೇಕಾಗುತ್ತದೆ. ಕಾಲೇಜಿನ ಕ್ಯಾಂಪಸ್ಗೆ ನುಗ್ಗಿ ದಾಂದಲೆ ನಡೆಸಿದವರಿಗೆ ತಕ್ಕ ಪಾಠ ಕಲಿಸಬೇಕಾದ ತುರ್ತಿದೆ.