<p class="Briefhead">ಯಾರು ಬೇಕಾದರೂ ಯಾವುದೇ ಸಂಘಟನೆ- ಸಂಘದ ಹೆಸರಿನಲ್ಲಿ, ಇನ್ನೊಬ್ಬರಿಗೆ ಗಾಸಿ ಮಾಡದೆ ಸಕಾರಣವಾಗಿ ಪ್ರತಿಭಟಿಸುವ ಹಕ್ಕು ಸಂವಿಧಾನದತ್ತ ವರವಾಗಿದೆ. ಆದರೂ ಜವಾಹರಲಾಲ್ ನೆಹರೂ<br />ವಿಶ್ವವಿದ್ಯಾಲಯದ (ಜೆಎನ್ಯು) ಆವರಣದಲ್ಲಿ ವಿವಿಧ ಕಾರಣಗಳನ್ನು ಮುಂದಿಟ್ಟು ವಿದ್ಯಾರ್ಥಿಗಳು ದನಿ ಎತ್ತಿದ್ದಾರೆ. ಇಂಥ ವೇಳೆ, ಸಿನಿಮೀಯ ರೀತಿಯಲ್ಲಿ ಕ್ಯಾಂಪಸ್ಗೆ ನುಗ್ಗಿ ಅವರನ್ನು ಬಡಿಯುವುದು ನಾಗರಿಕ ವರ್ತನೆಯಲ್ಲ.</p>.<p>ಬಹುಶಃ ಯಾವ ಪ್ರಾಣಿಯೂ ತನ್ನ ಆಹಾರಕ್ಕಲ್ಲದೆ ಇನ್ನೊಂದು ಪ್ರಾಣಿಯ ಆವಾಸಸ್ಥಾನಕ್ಕೆ ನುಗ್ಗಿ ಸುಖಾಸುಮ್ಮನೆ ಬಡಿಯುವುದಿಲ್ಲ, ಹಿಂಸಿಸಿ ಖುಷಿಪಡುವುದಿಲ್ಲ. ಅಂದರೆ, ಬಡಿದು-ಕೊಂದು ತನ್ನತ್ತ ತಲೆಯೆತ್ತದಂತೆ ಮಾಡುವ ಹೊಸದೊಂದು ‘ಸನಾತನ’ ಪ್ರಾಣಿ ಸೃಷ್ಟಿಯಾಗುತ್ತಿದೆ ಎಂದಾಯಿತು. ಹಿಂಸೆಗೆ ಹಿಂಸೆಯೇ ಪ್ರತಿರೋಧ<br />ವಾದರೆ, ಅನಾಗರಿಕ ನಡವಳಿಕೆಯೇ ಈ ದೇಶದ ಹೊಸ ಕಾನೂನಾಗಿಬಿಡುತ್ತದೆ. ವಿದ್ಯಾರ್ಥಿಗಳು ಗೂಂಡಾಗಳಾಗಿ ಬೀದಿಬೀದಿಯಲ್ಲಿ ಇರಿದುಕೊಳ್ಳಬೇಕಾಗುತ್ತದೆ. ಕಾಲೇಜಿನ ಕ್ಯಾಂಪಸ್ಗೆ ನುಗ್ಗಿ ದಾಂದಲೆ ನಡೆಸಿದವರಿಗೆ ತಕ್ಕ ಪಾಠ ಕಲಿಸಬೇಕಾದ ತುರ್ತಿದೆ.</p>.<p><strong>-ಡಾ. ಶಾಂತರಾಜು ಎಸ್.,<span class="Designate"> ಬೆಂಗಳೂರು</span></strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="Briefhead">ಯಾರು ಬೇಕಾದರೂ ಯಾವುದೇ ಸಂಘಟನೆ- ಸಂಘದ ಹೆಸರಿನಲ್ಲಿ, ಇನ್ನೊಬ್ಬರಿಗೆ ಗಾಸಿ ಮಾಡದೆ ಸಕಾರಣವಾಗಿ ಪ್ರತಿಭಟಿಸುವ ಹಕ್ಕು ಸಂವಿಧಾನದತ್ತ ವರವಾಗಿದೆ. ಆದರೂ ಜವಾಹರಲಾಲ್ ನೆಹರೂ<br />ವಿಶ್ವವಿದ್ಯಾಲಯದ (ಜೆಎನ್ಯು) ಆವರಣದಲ್ಲಿ ವಿವಿಧ ಕಾರಣಗಳನ್ನು ಮುಂದಿಟ್ಟು ವಿದ್ಯಾರ್ಥಿಗಳು ದನಿ ಎತ್ತಿದ್ದಾರೆ. ಇಂಥ ವೇಳೆ, ಸಿನಿಮೀಯ ರೀತಿಯಲ್ಲಿ ಕ್ಯಾಂಪಸ್ಗೆ ನುಗ್ಗಿ ಅವರನ್ನು ಬಡಿಯುವುದು ನಾಗರಿಕ ವರ್ತನೆಯಲ್ಲ.</p>.<p>ಬಹುಶಃ ಯಾವ ಪ್ರಾಣಿಯೂ ತನ್ನ ಆಹಾರಕ್ಕಲ್ಲದೆ ಇನ್ನೊಂದು ಪ್ರಾಣಿಯ ಆವಾಸಸ್ಥಾನಕ್ಕೆ ನುಗ್ಗಿ ಸುಖಾಸುಮ್ಮನೆ ಬಡಿಯುವುದಿಲ್ಲ, ಹಿಂಸಿಸಿ ಖುಷಿಪಡುವುದಿಲ್ಲ. ಅಂದರೆ, ಬಡಿದು-ಕೊಂದು ತನ್ನತ್ತ ತಲೆಯೆತ್ತದಂತೆ ಮಾಡುವ ಹೊಸದೊಂದು ‘ಸನಾತನ’ ಪ್ರಾಣಿ ಸೃಷ್ಟಿಯಾಗುತ್ತಿದೆ ಎಂದಾಯಿತು. ಹಿಂಸೆಗೆ ಹಿಂಸೆಯೇ ಪ್ರತಿರೋಧ<br />ವಾದರೆ, ಅನಾಗರಿಕ ನಡವಳಿಕೆಯೇ ಈ ದೇಶದ ಹೊಸ ಕಾನೂನಾಗಿಬಿಡುತ್ತದೆ. ವಿದ್ಯಾರ್ಥಿಗಳು ಗೂಂಡಾಗಳಾಗಿ ಬೀದಿಬೀದಿಯಲ್ಲಿ ಇರಿದುಕೊಳ್ಳಬೇಕಾಗುತ್ತದೆ. ಕಾಲೇಜಿನ ಕ್ಯಾಂಪಸ್ಗೆ ನುಗ್ಗಿ ದಾಂದಲೆ ನಡೆಸಿದವರಿಗೆ ತಕ್ಕ ಪಾಠ ಕಲಿಸಬೇಕಾದ ತುರ್ತಿದೆ.</p>.<p><strong>-ಡಾ. ಶಾಂತರಾಜು ಎಸ್.,<span class="Designate"> ಬೆಂಗಳೂರು</span></strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>