ಕೋವಿಡ್– 19 ಸಾಂಕ್ರಾಮಿಕದಿಂದ ಜನಸಾಮಾನ್ಯರ ಜೀವನೋಪಾಯಕ್ಕೆ ಕಂಟಕ ಬಂದೊದಗಿದೆ. ಸರ್ಕಾರಗಳ ಖಜಾನೆ ತೀವ್ರಗತಿಯಲ್ಲಿ ಖಾಲಿಯಾಗುತ್ತಿದೆ. ದೇಶವು ಇಂತಹ ಆರ್ಥಿಕ ದುಃಸ್ಥಿತಿಯಿಂದ ಚೇತರಿಸಿ ಕೊಳ್ಳಲು ದಶಕಗಳೇ ಬೇಕಾಗಿರುವುದರಿಂದ, ಭಾರತ ಸಂವಿಧಾನದ 360ನೇ ವಿಧಿ (ಹಣಕಾಸು ತುರ್ತುಪರಿಸ್ಥಿತಿಗೆ ಸಂಬಂಧಿಸಿದ ಉಪಬಂಧಗಳು) ಉಪಯೋಗಿಸಿ ಆರ್ಥಿಕ ತುರ್ತುಪರಿಸ್ಥಿತಿಯನ್ನು ಘೋಷಿಸಲು ಇದು ಸಕಾಲ. ವರ್ಲ್ಡ್ ಗೋಲ್ಡ್ ಕೌನ್ಸಿಲ್ 2017ರಲ್ಲಿ ಪ್ರಕಟಿಸಿರುವ ಅಧ್ಯಯನ ವರದಿಯ ಪ್ರಕಾರ, ‘ಸುಮಾರು 3,000ದಿಂದ 4,000 ಟನ್ಗಳಷ್ಟು ಬಂಗಾರ ನಮ್ಮ ದೇಶದ ಮಂದಿರ, ಚರ್ಚ್ ಮತ್ತು ಮಸೀದಿಗಳಲ್ಲಿ ನಿಷ್ಪ್ರಯೋಜಕವಾಗಿ ಕೊಳೆಯುತ್ತಿದೆ’.