<p>ಈಗಿರುವ ವ್ಯವಸ್ಥೆಯಲ್ಲಿ ಸೆಸ್ ಮತ್ತು ಸರ್ಚಾರ್ಜ್ಗಳಿಂದ ಬರುವ ರೆವಿನ್ಯೂವನ್ನು ಒಕ್ಕೂಟ ಸರ್ಕಾರ ಸಂಪೂರ್ಣ ವಾಗಿ ಅನುಭವಿಸುತ್ತಿದೆ. ಈ ತೆರಿಗೆಗಳಿಂದ ಬರುವ ರೆವಿನ್ಯೂ 2011-12ರಲ್ಲಿ ₹ 49,628 ಕೋಟಿಯಷ್ಟಿದ್ದುದು 2020-21ರಲ್ಲಿ ₹ 3,74,471 ಕೋಟಿಯಾಗಿದೆ. ಒಕ್ಕೂಟ ಸರ್ಕಾರದ ಹಂಚಿಕೊಳ್ಳಬಹುದಾದ ತೆರಿಗೆ ರಾಶಿಯಲ್ಲಿ ಇದರ ಪಾಲು 2011-12ರಲ್ಲಿ ಶೇ 10ರಷ್ಟಿದ್ದುದು 2020-21ರಲ್ಲಿ ಶೇ 20ರಷ್ಟಾಗಿದೆ.</p>.<p>ಈ ರೆವಿನ್ಯೂವನ್ನು 15ನೆಯ ಹಣಕಾಸು ಆಯೋಗದ ಸೂತ್ರದ ಪ್ರಕಾರ (ಶೇ 41) ರಾಜ್ಯಗಳಿಗೆ ಹಂಚಿದ್ದರೆ ಅವುಗಳಿಗೆ ₹ 1,53,533 ಕೋಟಿಯಷ್ಟು ದೊರೆಯುತ್ತಿತ್ತು. ನಮ್ಮ ದೇಶದ 14 ಮತ್ತು 15ನೆಯ ಹಣಕಾಸು ಆಯೋಗಗಳು ಈ ತೆರಿಗೆಗಳನ್ನು ‘ಹಂಚಿಕೊಳ್ಳುವ ತೆರಿಗೆ ರಾಶಿ’ಯ ಭಾಗವನ್ನಾಗಿ ಮಾಡಬೇಕೆಂದು ಶಿಫಾರಸು ಮಾಡಿವೆ. ಆದ್ದರಿಂದ ಬರುವ ಫೆಬ್ರುವರಿ 1ರಂದು ಮಂಡನೆಯಾಗುವ 2022-23ರ ಬಜೆಟ್ಟಿನಲ್ಲಿ ಸೆಸ್ ಮತ್ತು ಸರ್ ಚಾರ್ಜ್ಗಳ ರೆವಿನ್ಯೂವನ್ನು ರಾಜ್ಯಗಳ ಜೊತೆ ಹಂಚಿಕೊಳ್ಳುವುದಕ್ಕೆ ಕ್ರಮ ತೆಗೆದುಕೊಳ್ಳಬೇಕು. ಇದರಿಂದ ನಮ್ಮ ಸಂವಿಧಾನಾತ್ಮಕ ಒಕ್ಕೂಟ ವ್ಯವಸ್ಥೆಗೆ ಒಂದು ಅರ್ಥ ಬರುತ್ತದೆ ಮತ್ತು ಅದರ ಮಹತ್ವ ಹೆಚ್ಚುತ್ತದೆ.</p>.<p><strong>- ಟಿ.ಆರ್.ಚಂದ್ರಶೇಖರ,ಬೆಂಗಳೂರು</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಈಗಿರುವ ವ್ಯವಸ್ಥೆಯಲ್ಲಿ ಸೆಸ್ ಮತ್ತು ಸರ್ಚಾರ್ಜ್ಗಳಿಂದ ಬರುವ ರೆವಿನ್ಯೂವನ್ನು ಒಕ್ಕೂಟ ಸರ್ಕಾರ ಸಂಪೂರ್ಣ ವಾಗಿ ಅನುಭವಿಸುತ್ತಿದೆ. ಈ ತೆರಿಗೆಗಳಿಂದ ಬರುವ ರೆವಿನ್ಯೂ 2011-12ರಲ್ಲಿ ₹ 49,628 ಕೋಟಿಯಷ್ಟಿದ್ದುದು 2020-21ರಲ್ಲಿ ₹ 3,74,471 ಕೋಟಿಯಾಗಿದೆ. ಒಕ್ಕೂಟ ಸರ್ಕಾರದ ಹಂಚಿಕೊಳ್ಳಬಹುದಾದ ತೆರಿಗೆ ರಾಶಿಯಲ್ಲಿ ಇದರ ಪಾಲು 2011-12ರಲ್ಲಿ ಶೇ 10ರಷ್ಟಿದ್ದುದು 2020-21ರಲ್ಲಿ ಶೇ 20ರಷ್ಟಾಗಿದೆ.</p>.<p>ಈ ರೆವಿನ್ಯೂವನ್ನು 15ನೆಯ ಹಣಕಾಸು ಆಯೋಗದ ಸೂತ್ರದ ಪ್ರಕಾರ (ಶೇ 41) ರಾಜ್ಯಗಳಿಗೆ ಹಂಚಿದ್ದರೆ ಅವುಗಳಿಗೆ ₹ 1,53,533 ಕೋಟಿಯಷ್ಟು ದೊರೆಯುತ್ತಿತ್ತು. ನಮ್ಮ ದೇಶದ 14 ಮತ್ತು 15ನೆಯ ಹಣಕಾಸು ಆಯೋಗಗಳು ಈ ತೆರಿಗೆಗಳನ್ನು ‘ಹಂಚಿಕೊಳ್ಳುವ ತೆರಿಗೆ ರಾಶಿ’ಯ ಭಾಗವನ್ನಾಗಿ ಮಾಡಬೇಕೆಂದು ಶಿಫಾರಸು ಮಾಡಿವೆ. ಆದ್ದರಿಂದ ಬರುವ ಫೆಬ್ರುವರಿ 1ರಂದು ಮಂಡನೆಯಾಗುವ 2022-23ರ ಬಜೆಟ್ಟಿನಲ್ಲಿ ಸೆಸ್ ಮತ್ತು ಸರ್ ಚಾರ್ಜ್ಗಳ ರೆವಿನ್ಯೂವನ್ನು ರಾಜ್ಯಗಳ ಜೊತೆ ಹಂಚಿಕೊಳ್ಳುವುದಕ್ಕೆ ಕ್ರಮ ತೆಗೆದುಕೊಳ್ಳಬೇಕು. ಇದರಿಂದ ನಮ್ಮ ಸಂವಿಧಾನಾತ್ಮಕ ಒಕ್ಕೂಟ ವ್ಯವಸ್ಥೆಗೆ ಒಂದು ಅರ್ಥ ಬರುತ್ತದೆ ಮತ್ತು ಅದರ ಮಹತ್ವ ಹೆಚ್ಚುತ್ತದೆ.</p>.<p><strong>- ಟಿ.ಆರ್.ಚಂದ್ರಶೇಖರ,ಬೆಂಗಳೂರು</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>