‘ನಮ್ಮೂರ ಶಾಲೆ’ ಎಂಬ ಸರ್ಕಾರದ ಫಲಕಗಳಿಗೆ ಜೀವ ತುಂಬುವ ಕೆಲಸಗಳು ಕೆಲವೊಮ್ಮೆ ಶಿಕ್ಷಣ ಕ್ಷೇತ್ರದಲ್ಲಿ ಆಶಾದಾಯಕ ಮತ್ತು ನಿರೀಕ್ಷೆಗೂ ಮೀರಿದ ಬೆಳವಣಿಗೆಯ ಭರವಸೆಯನ್ನು ಮೂಡಿಸುತ್ತವೆ. ಈ ದಿಸೆಯಲ್ಲಿ ತಾವು ವರ್ಗಾವಣೆಗೊಂಡ ಕುಗ್ರಾಮಗಳಲ್ಲಿನ ಶಾಲೆಗಳಲ್ಲಿ ಶೈಕ್ಷಣಿಕ ಅಭಿವೃದ್ಧಿಯನ್ನೇ ಗುರಿಯಾಗಿಸಿಕೊಂಡು ಕಾಯಕ ಮಾಡುತ್ತಿರುವ ಶಿರಸಿಯ ಶಿಕ್ಷಕ ನಾಗರಾಜ ವಿ. ನಿಲೇಕಣಿಯವರಂಥ ‘ಸಮಾಜಮುಖಿ’ ಮನಸ್ಸಿನವರು ಮೆಚ್ಚುಗೆಗೆ ಅರ್ಹರು (ಪ್ರ.ವಾ., ಸೆ.5). ಊರಿನ ಜನರೂ ಶಿಕ್ಷಕರ ಆಲೋಚನೆಗೆ ಪೂರಕವಾಗಿ ಸಹಕರಿಸಿದ್ದು ವಿಶೇಷ.