<p>‘ನಮ್ಮೂರ ಶಾಲೆ’ ಎಂಬ ಸರ್ಕಾರದ ಫಲಕಗಳಿಗೆ ಜೀವ ತುಂಬುವ ಕೆಲಸಗಳು ಕೆಲವೊಮ್ಮೆ ಶಿಕ್ಷಣ ಕ್ಷೇತ್ರದಲ್ಲಿ ಆಶಾದಾಯಕ ಮತ್ತು ನಿರೀಕ್ಷೆಗೂ ಮೀರಿದ ಬೆಳವಣಿಗೆಯ ಭರವಸೆಯನ್ನು ಮೂಡಿಸುತ್ತವೆ. ಈ ದಿಸೆಯಲ್ಲಿ ತಾವು ವರ್ಗಾವಣೆಗೊಂಡ ಕುಗ್ರಾಮಗಳಲ್ಲಿನ ಶಾಲೆಗಳಲ್ಲಿ ಶೈಕ್ಷಣಿಕ ಅಭಿವೃದ್ಧಿಯನ್ನೇ ಗುರಿಯಾಗಿಸಿಕೊಂಡು ಕಾಯಕ ಮಾಡುತ್ತಿರುವ ಶಿರಸಿಯ ಶಿಕ್ಷಕ ನಾಗರಾಜ ವಿ. ನಿಲೇಕಣಿಯವರಂಥ ‘ಸಮಾಜಮುಖಿ’ ಮನಸ್ಸಿನವರು ಮೆಚ್ಚುಗೆಗೆ ಅರ್ಹರು (ಪ್ರ.ವಾ., ಸೆ.5). ಊರಿನ ಜನರೂ ಶಿಕ್ಷಕರ ಆಲೋಚನೆಗೆ ಪೂರಕವಾಗಿ ಸಹಕರಿಸಿದ್ದು ವಿಶೇಷ.</p>.<p>ಇಂತಲ್ಲಿಗೆ ವರ್ಗಾವಣೆಗೊಂಡರೆ ಅನುಕೂಲಕರವೆಂದೋ ಅಥವಾ ಅಧಿಕಾರಿಗಳು ಹೇಳಿದ ಕಡೆ ಹೋಗಿ ಕರ್ತವ್ಯ ನಿರ್ವಹಿಸಬೇಕಾದ ಅನಿವಾರ್ಯಕ್ಕೋ ಶಿಕ್ಷಕರು ಸಿಲುಕುವುದು ಸಾಮಾನ್ಯ. ಇದಕ್ಕೆ ವಿರುದ್ಧವಾಗಿಕುಗ್ರಾಮಗಳನ್ನೇ ಆಯ್ಕೆ ಮಾಡಿಕೊಂಡು ವರ್ಗಾವಣೆಗೊಂಡು ಅದೂ ‘ನಮ್ಮೂರ ಶಾಲೆ’ ಎಂಬಂತೆಕಾರ್ಯನಿರ್ವಹಿಸುವ ಆಲೋಚನೆ ನಿಜಕ್ಕೂ ಮಾದರಿ ನಡೆ.</p>.<p>ಮಕ್ಕಳಿಗೆ ಉತ್ತಮ ಭವಿಷ್ಯವನ್ನು ರೂಪಿಸುವ ಜವಾಬ್ದಾರಿಯೇ ತಮಗೆ ಸಿಗುವ ನಿಜವಾದ ಪ್ರಶಸ್ತಿ ಎಂಬ ಅವರ ಮಾತು ಕೂಡ, ಶಿಕ್ಷಕ ಸಮುದಾಯದ ನಿಸ್ವಾರ್ಥ ಭಾವನೆಯ ಪ್ರತೀಕ.</p>.<p><strong>-ಡಾ. ಜಿ.ಬೈರೇಗೌಡ,ಬೆಂಗಳೂರು</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ನಮ್ಮೂರ ಶಾಲೆ’ ಎಂಬ ಸರ್ಕಾರದ ಫಲಕಗಳಿಗೆ ಜೀವ ತುಂಬುವ ಕೆಲಸಗಳು ಕೆಲವೊಮ್ಮೆ ಶಿಕ್ಷಣ ಕ್ಷೇತ್ರದಲ್ಲಿ ಆಶಾದಾಯಕ ಮತ್ತು ನಿರೀಕ್ಷೆಗೂ ಮೀರಿದ ಬೆಳವಣಿಗೆಯ ಭರವಸೆಯನ್ನು ಮೂಡಿಸುತ್ತವೆ. ಈ ದಿಸೆಯಲ್ಲಿ ತಾವು ವರ್ಗಾವಣೆಗೊಂಡ ಕುಗ್ರಾಮಗಳಲ್ಲಿನ ಶಾಲೆಗಳಲ್ಲಿ ಶೈಕ್ಷಣಿಕ ಅಭಿವೃದ್ಧಿಯನ್ನೇ ಗುರಿಯಾಗಿಸಿಕೊಂಡು ಕಾಯಕ ಮಾಡುತ್ತಿರುವ ಶಿರಸಿಯ ಶಿಕ್ಷಕ ನಾಗರಾಜ ವಿ. ನಿಲೇಕಣಿಯವರಂಥ ‘ಸಮಾಜಮುಖಿ’ ಮನಸ್ಸಿನವರು ಮೆಚ್ಚುಗೆಗೆ ಅರ್ಹರು (ಪ್ರ.ವಾ., ಸೆ.5). ಊರಿನ ಜನರೂ ಶಿಕ್ಷಕರ ಆಲೋಚನೆಗೆ ಪೂರಕವಾಗಿ ಸಹಕರಿಸಿದ್ದು ವಿಶೇಷ.</p>.<p>ಇಂತಲ್ಲಿಗೆ ವರ್ಗಾವಣೆಗೊಂಡರೆ ಅನುಕೂಲಕರವೆಂದೋ ಅಥವಾ ಅಧಿಕಾರಿಗಳು ಹೇಳಿದ ಕಡೆ ಹೋಗಿ ಕರ್ತವ್ಯ ನಿರ್ವಹಿಸಬೇಕಾದ ಅನಿವಾರ್ಯಕ್ಕೋ ಶಿಕ್ಷಕರು ಸಿಲುಕುವುದು ಸಾಮಾನ್ಯ. ಇದಕ್ಕೆ ವಿರುದ್ಧವಾಗಿಕುಗ್ರಾಮಗಳನ್ನೇ ಆಯ್ಕೆ ಮಾಡಿಕೊಂಡು ವರ್ಗಾವಣೆಗೊಂಡು ಅದೂ ‘ನಮ್ಮೂರ ಶಾಲೆ’ ಎಂಬಂತೆಕಾರ್ಯನಿರ್ವಹಿಸುವ ಆಲೋಚನೆ ನಿಜಕ್ಕೂ ಮಾದರಿ ನಡೆ.</p>.<p>ಮಕ್ಕಳಿಗೆ ಉತ್ತಮ ಭವಿಷ್ಯವನ್ನು ರೂಪಿಸುವ ಜವಾಬ್ದಾರಿಯೇ ತಮಗೆ ಸಿಗುವ ನಿಜವಾದ ಪ್ರಶಸ್ತಿ ಎಂಬ ಅವರ ಮಾತು ಕೂಡ, ಶಿಕ್ಷಕ ಸಮುದಾಯದ ನಿಸ್ವಾರ್ಥ ಭಾವನೆಯ ಪ್ರತೀಕ.</p>.<p><strong>-ಡಾ. ಜಿ.ಬೈರೇಗೌಡ,ಬೆಂಗಳೂರು</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>