ಈ ರಾಜಕೀಯ ನಾಯಕರು ಮುಂದಿನ ಪೀಳಿಗೆಗೆ ಏನು ಸಂದೇಶ ಕೊಡಲು ಹೊರಟಿದ್ದಾರೆ ಎಂಬುದನ್ನು ನೆನೆದರೆ ಆತಂಕ ಆಗುತ್ತದೆ. ಶಶಿಕಲಾ ಭ್ರಷ್ಟಾಚಾರ ಮತ್ತು ಆದಾಯ ಮೀರಿ ಆಸ್ತಿ ಗಳಿಕೆಯ ಆರೋಪ ಸಾಬೀತಾಗಿ ಜೈಲು ವಾಸ ಅನುಭವಿಸಿದವರು. ಅವರೇನೂ ಜನರಿಗಾಗಿ, ನ್ಯಾಯಕ್ಕಾಗಿ ಅಥವಾ ದೇಶಕ್ಕಾಗಿ ಹೋರಾಟ ಮಾಡಿ ಜೈಲು ಶಿಕ್ಷೆ ಅನುಭವಿಸಿದವರಲ್ಲ. ಅಂತಹ ವ್ಯಕ್ತಿಯನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳುತ್ತಿರುವ ಈ ಜನನಾಯಕರು, ತಾವು ಎಂತಹ ಮತಿಹೀನರು ಎಂಬುದನ್ನು ಸಾಬೀತು ಮಾಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಜೈಲಿನಿಂದ ಬಿಡುಗಡೆ ಆಗುವವರನ್ನು ಅದ್ಧೂರಿಯಾಗಿ ಸ್ವಾಗತಿಸುವ ಪರಿಪಾಟ ಹೆಚ್ಚುತ್ತಿದೆ. ಇದನ್ನು ತಡೆಗಟ್ಟುವ ಕೆಲಸ ನ್ಯಾಯಾಂಗದ ವತಿಯಿಂದ ಆಗಬೇಕಿದೆ.