ಹೊಸಪೇಟೆ: ತಾಲ್ಲೂಕಿನ ಬಸವನದುರ್ಗ ಸಮೀಪದ ಧರ್ಮದಗುಡ್ಡದಲ್ಲಿ ಭಾನುವಾರ ಸಂಜೆ ಆಯುಧ ಪೂಜೆ ಶ್ರದ್ಧಾ, ಭಕ್ತಿಯ ನಡುವೆ ನೆರವೇರಿತು. ಸಂಜೆ ಬಸವನದುರ್ಗದ ಓಬಳಾಪುರ ಗುಡಿಯಲ್ಲಿ ಚನ್ನಬಸವಣ್ಣ ದೇವರಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಬಳಿಕ ಅಲ್ಲಿಂದ ಚನ್ನಬಸವಣ್ಣ ದೇವರ ಪಲ್ಲಕ್ಕಿಯನ್ನು ಹೊತ್ತು ಭಕ್ತರು ಧರ್ಮದಗುಡ್ಡದವರೆಗೆ ಹೆಜ್ಜೆ ಹಾಕಿದರು. ಈ ವೇಳೆ ಜಯಘೋಷ ಮುಗಿಲು ಮುಟ್ಟಿತ್ತು.