ಬಾಗಲಕೋಟೆ ವಿದ್ಯಾಗಿರಿಯ ಗೌರಿಶಂಕರ ಕಲ್ಯಾಣ ಮಂಟಪದಲ್ಲಿ ಶನಿವಾರ ಪ್ರಜಾವಾಣಿ ಆಯೋಜಿಸಿರುವ ಮಹಿಳಾ ಸಾಧಕಿಯರಿಗೆ ಸನ್ಮಾನ ಸಮಾರಂಭ ‘ಯಶಸ್ವಿನಿ’ಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ ಉದ್ಘಾಟಿಸಿದರು. ಪ್ರಜಾವಾಣಿ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ, ಉದ್ಯಮಿ ಭಾರತಿ ಬಸವರಾಜ ಗುಡ್ಲಾನೂರ, ಇಂದುಮತಿ ಸಾಲಿಮಠ ಹಾಜರಿದ್ದರು.