PHOTOS: ತಮ್ಮೂರಿನತ್ತ ಹೊರಟ ಕಾರ್ಮಿಕರು, ರೈಲು ನಿಲ್ದಾಣದಲ್ಲಿ ಜನವೋ ಜನ
ಬೆಂಗಳೂರು: ರಾಜಧಾನಿಗೆ ಅನ್ನ ಅರಸಿ ಬಂದಿದ್ದ ಸಾವಿರಾರು ಮಂದಿ ಬುಧವಾರವೂ ತಮ್ಮೂರಿನತ್ತ ತಂಡೋಪ ತಂಡವಾಗಿ ಗುಳೆ ಹೋಗಿದ್ದಾರೆ.‘ಮಂಗಳವಾರ ರಾತ್ರಿಯಿಂದಲೇ ರಾಜ್ಯದಾದ್ಯಂತ ಕರ್ಫ್ಯೂ’ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಸೋಮವಾರ ಮಧ್ಯಾಹ್ನದಿಂದಲೇ ಜನರು ತಮ್ಮೂರಿನತ್ತ ಹೊರಟರು. ಬುಧವಾರವೂ ಬೆಳಿಗ್ಗೆ ನೂರಾರು ಮಂದಿ ರೈಲುಗಳಲ್ಲಿ ತಮ್ಮೂರಿನತ್ತ ಪ್ರಯಾಣ ಬೆಳೆಸಿದರು.ಇದನ್ನೂ ಓದಿ... ಬೆಂಗಳೂರಿನಿಂದ ಜನರ ವಲಸೆ: ‘ಅನ್ನ ಕಿತ್ತ ಕರ್ಫ್ಯೂ; ಊರಿಗೆ ಹೋಗದೇ ವಿಧಿಯಿಲ್ಲ’