<p>ರಾಜ್ಯ ಸರ್ಕಾರದ ವಿವಿಧ ಯೋಜನೆಗಳಲ್ಲಿ ಕಾಯಕ ಕಿರಣ ಯೋಜನೆ ಕೂಡ ಒಂದಾಗಿದೆ. ಈ ಯೋಜನೆಯಡಿ ಸ್ವ ಉದ್ಯೋಗಕ್ಕೆ ಸಹಾಯಧನ ನೀಡಲಾಗುತ್ತದೆ. ಪ್ರವರ್ಗ 3ಬಿ ಅಡಿಯಲ್ಲಿ ಬರುವ ಕರ್ನಾಟಕ ವೀರಶೈವ ಲಿಂಗಾಯಿತ ಹಾಗೂ ಅದರ ಉಪಜಾತಿಗೆ ಸೇರಿದವರು ಈ ಯೋಜನೆಯ ಲಾಭ ಪಡೆಯಬಹುದು ಎಂದು ರಾಜ್ಯ ಸರ್ಕಾರ ತನ್ನ ಅಧಿಕೃತ ಅಂತರ್ಜಾಲ ತಾಣದಲ್ಲಿ ತಿಳಿಸಿದೆ. </p><p>ಈ ಯೋಜನೆ ಪಡೆಯಲು ಇರಬೇಕಾದ ಅರ್ಹತೆಗಳೇನು? ಯೋಜನೆಯಲ್ಲಿ ಸಿಗಲಿರುವ ಸಹಾಯಧನ ಎಷ್ಟು ಎಂಬ ಮಾಹಿತಿ ಇಲ್ಲಿದೆ. </p>.ಬಾಬು ಜಗಜೀವನ ರಾಂ ವಸತಿ ರಹಿತ ಶೆಡ್ ನಿರ್ಮಾಣ ಯೋಜನೆ; ಪಡೆಯುವುದು ಹೇಗೆ?.<h3>ಅರ್ಹತೆಗಳು:</h3><ul><li><p>ಅಭ್ಯರ್ಥಿಗಳು ಪ್ರವರ್ಗ–3ಬಿ ಗೆ ಸೇರಿದವರಾಗಿರಬೇಕು. ವೀರಶೈವ ಲಿಂಗಾಯತ ಹಾಗೂ ಉಪಜಾತಿಗೆ ಸೇರಿದವರಾಗಿರಬೇಕು.</p></li><li><p>ಅರ್ಜಿದಾರರ ವಾರ್ಷಿಕ ಆದಾಯ ಗ್ರಾಮಾಂತರ ಪ್ರದೇಶದವರಾಗಿದ್ದರೆ ₹98,000 ಹಾಗೂ ನಗರ ಪ್ರದೇಶದವರಾಗಿದ್ದರೆ ₹1.20 ಲಕ್ಷ ಮೀರಿರಬಾರದು.</p></li><li><p>ಕರ್ನಾಟಕದ ನಿವಾಸಿಯಾಗಿರಬೇಕು.</p></li><li><p>ಅರ್ಜಿದಾರರು ಕನಿಷ್ಠ 18 ವರ್ಷ ಗರಿಷ್ಠ 55 ವರ್ಷದೊಳಗೆ ಇರಬೇಕು.</p></li><li><p>ಸರ್ಕಾರದ ಇತರೆ ಯಾವುದೇ ನಿಗಮಗಳಿಂದ ಸಹಾಯಧನ ಅಥವಾ ಸಾಲ ಪಡೆದಿರಬಾರದು.</p></li><li><p>ಮಹಿಳೆಯರಿಗೆ ಶೇ 33ರಷ್ಟು ಹಾಗೂ ವಿಶೇಷಚೇತನರಿಗೆ ಶೇ 5ರಷ್ಟು ಮೀಸಲಾತಿ ಸಿಗಲಿದೆ. </p></li><li><p>ಒಂದು ಕುಟುಂಬದಲ್ಲಿ ಒಬ್ಬರು ಮಾತ್ರ ಯೋಜನೆ ಪಡೆಯಲು ಅರ್ಹರಾಗಿರುತ್ತಾರೆ. </p></li></ul><h3>ದೊರೆಯಲಿರುವ ಸಹಾಯಧನ ಎಷ್ಟು?</h3><ul><li><p>ಅರ್ಜಿದಾರರಿಗೆ ವೈಯಕ್ತಿಕ ಸಾಲ ಶೇ 15ರಷ್ಟು ಸಹಾಯಧನದೊಂದಿಗೆ ₹2 ಲಕ್ಷ ದೊರೆಯಲಿದೆ.</p></li><li><p>ಯೋಜನೆಯ ಘಟಕ ವೆಚ್ಚಕ್ಕೆ ₹50,000 ಗಳವರೆಗೆ ಶೇ 30ರಷ್ಟು ಅಂದರೆ ₹10,000 ಗಳವರೆಗೆ ಸಹಾಯಧನ ಸಿಗಲಿದೆ. ಉಳಿಕೆ ಶೇ 70ರಷ್ಟು ₹40,000 ಕ್ಕೆ ವಾರ್ಷಿಕ ಶೇ 4ರ ಬಡ್ಡಿ ದರದಲ್ಲಿ ಸಾಲ ಸಿಗಲಿದೆ.</p></li><li><p>ಯೋಜನೆಯಲ್ಲಿ ₹50,000 ದಿಂದ ₹ 1ಲಕ್ಷದ ವರೆಗಿನ ಘಟಕ ವೆಚ್ಚಕ್ಕೆ ಶೇ 20ರಷ್ಟು ಅಂದರೆ ₹20,000 ಸಹಾಯಧನ ಸಿಗಲಿದೆ. ಉಳಿಕೆ ಶೇ 80ರಷ್ಟು ₹80,000 ಕ್ಕೆ ವಾರ್ಷಿಕ ಶೇ 4ರ ಬಡ್ಡಿದರದಲ್ಲಿ ಸಾಲ ಸಿಗಲಿದೆ.</p></li><li><p>ಘಟಕ ವೆಚ್ಚಕ್ಕೆ ₹ 1ಲಕ್ಷದಿಂದ ₹ 2ಲಕ್ಷದ ವರೆಗೆ ಶೇ 15ರಷ್ಟು ಅಂದರೆ, ₹20,000 ದಿಂದ ₹30,000ಗಳ ವರೆಗೂ ಸಹಾಯಧನ ಸಿಗಲಿದೆ. ಉಳಿಕೆ ಶೇ 85ರಷ್ಟು ₹1.7 ಲಕ್ಷಕ್ಕೆ ವಾರ್ಷಿಕ ಶೇ 2ರ ಬಡ್ಡಿಯಲ್ಲಿ ಸಾಲ ಸಿಗಲಿದೆ.</p></li></ul><p><strong>ಅಗತ್ಯ ದಾಖಲೆಗಳು ಯಾವುವು?</strong></p><ul><li><p>ಪಿತ್ರಾರ್ಜಿತ ಆಸ್ತಿಯಾಗಿದ್ದರೆ ಆಸ್ತಿ ವಿಭಾಗ ಪತ್ರ, ಎಂ.ಆರ್ ಕಾಫಿ ಒದಗಿಸಬೇಕು</p></li><li><p>ಪಹಣಿ</p></li><li><p>ಕಂದಾಯ ಪಾವತಿಸಿದ ರಶೀದಿ.</p></li></ul>.<h3>ಮರುಪಾವತಿ ವಿಧಾನ </h3><ul><li><p>ಯೋಜನೆಯಲ್ಲಿ ಪಡೆದ ಸಾಲಕ್ಕೆ ವಾರ್ಷಿಕ ಶೇ 4ರ ಬಡ್ಡಿದರದಲ್ಲಿ 34 ಕಂತುಗಳಲ್ಲಿ ಮರು ಪಾವತಿ ಮಾಡಬೇಕು. </p></li></ul><p>ಯೋಜನೆ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡುವುದು. <a href="https://kvldcl.karnataka.gov.in/26/kayaka-kirana-cf/kn">ಇಲಾಖೆಯ ಅಂತರ್ಜಾಲ ತಾಣ</a>.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರಾಜ್ಯ ಸರ್ಕಾರದ ವಿವಿಧ ಯೋಜನೆಗಳಲ್ಲಿ ಕಾಯಕ ಕಿರಣ ಯೋಜನೆ ಕೂಡ ಒಂದಾಗಿದೆ. ಈ ಯೋಜನೆಯಡಿ ಸ್ವ ಉದ್ಯೋಗಕ್ಕೆ ಸಹಾಯಧನ ನೀಡಲಾಗುತ್ತದೆ. ಪ್ರವರ್ಗ 3ಬಿ ಅಡಿಯಲ್ಲಿ ಬರುವ ಕರ್ನಾಟಕ ವೀರಶೈವ ಲಿಂಗಾಯಿತ ಹಾಗೂ ಅದರ ಉಪಜಾತಿಗೆ ಸೇರಿದವರು ಈ ಯೋಜನೆಯ ಲಾಭ ಪಡೆಯಬಹುದು ಎಂದು ರಾಜ್ಯ ಸರ್ಕಾರ ತನ್ನ ಅಧಿಕೃತ ಅಂತರ್ಜಾಲ ತಾಣದಲ್ಲಿ ತಿಳಿಸಿದೆ. </p><p>ಈ ಯೋಜನೆ ಪಡೆಯಲು ಇರಬೇಕಾದ ಅರ್ಹತೆಗಳೇನು? ಯೋಜನೆಯಲ್ಲಿ ಸಿಗಲಿರುವ ಸಹಾಯಧನ ಎಷ್ಟು ಎಂಬ ಮಾಹಿತಿ ಇಲ್ಲಿದೆ. </p>.ಬಾಬು ಜಗಜೀವನ ರಾಂ ವಸತಿ ರಹಿತ ಶೆಡ್ ನಿರ್ಮಾಣ ಯೋಜನೆ; ಪಡೆಯುವುದು ಹೇಗೆ?.<h3>ಅರ್ಹತೆಗಳು:</h3><ul><li><p>ಅಭ್ಯರ್ಥಿಗಳು ಪ್ರವರ್ಗ–3ಬಿ ಗೆ ಸೇರಿದವರಾಗಿರಬೇಕು. ವೀರಶೈವ ಲಿಂಗಾಯತ ಹಾಗೂ ಉಪಜಾತಿಗೆ ಸೇರಿದವರಾಗಿರಬೇಕು.</p></li><li><p>ಅರ್ಜಿದಾರರ ವಾರ್ಷಿಕ ಆದಾಯ ಗ್ರಾಮಾಂತರ ಪ್ರದೇಶದವರಾಗಿದ್ದರೆ ₹98,000 ಹಾಗೂ ನಗರ ಪ್ರದೇಶದವರಾಗಿದ್ದರೆ ₹1.20 ಲಕ್ಷ ಮೀರಿರಬಾರದು.</p></li><li><p>ಕರ್ನಾಟಕದ ನಿವಾಸಿಯಾಗಿರಬೇಕು.</p></li><li><p>ಅರ್ಜಿದಾರರು ಕನಿಷ್ಠ 18 ವರ್ಷ ಗರಿಷ್ಠ 55 ವರ್ಷದೊಳಗೆ ಇರಬೇಕು.</p></li><li><p>ಸರ್ಕಾರದ ಇತರೆ ಯಾವುದೇ ನಿಗಮಗಳಿಂದ ಸಹಾಯಧನ ಅಥವಾ ಸಾಲ ಪಡೆದಿರಬಾರದು.</p></li><li><p>ಮಹಿಳೆಯರಿಗೆ ಶೇ 33ರಷ್ಟು ಹಾಗೂ ವಿಶೇಷಚೇತನರಿಗೆ ಶೇ 5ರಷ್ಟು ಮೀಸಲಾತಿ ಸಿಗಲಿದೆ. </p></li><li><p>ಒಂದು ಕುಟುಂಬದಲ್ಲಿ ಒಬ್ಬರು ಮಾತ್ರ ಯೋಜನೆ ಪಡೆಯಲು ಅರ್ಹರಾಗಿರುತ್ತಾರೆ. </p></li></ul><h3>ದೊರೆಯಲಿರುವ ಸಹಾಯಧನ ಎಷ್ಟು?</h3><ul><li><p>ಅರ್ಜಿದಾರರಿಗೆ ವೈಯಕ್ತಿಕ ಸಾಲ ಶೇ 15ರಷ್ಟು ಸಹಾಯಧನದೊಂದಿಗೆ ₹2 ಲಕ್ಷ ದೊರೆಯಲಿದೆ.</p></li><li><p>ಯೋಜನೆಯ ಘಟಕ ವೆಚ್ಚಕ್ಕೆ ₹50,000 ಗಳವರೆಗೆ ಶೇ 30ರಷ್ಟು ಅಂದರೆ ₹10,000 ಗಳವರೆಗೆ ಸಹಾಯಧನ ಸಿಗಲಿದೆ. ಉಳಿಕೆ ಶೇ 70ರಷ್ಟು ₹40,000 ಕ್ಕೆ ವಾರ್ಷಿಕ ಶೇ 4ರ ಬಡ್ಡಿ ದರದಲ್ಲಿ ಸಾಲ ಸಿಗಲಿದೆ.</p></li><li><p>ಯೋಜನೆಯಲ್ಲಿ ₹50,000 ದಿಂದ ₹ 1ಲಕ್ಷದ ವರೆಗಿನ ಘಟಕ ವೆಚ್ಚಕ್ಕೆ ಶೇ 20ರಷ್ಟು ಅಂದರೆ ₹20,000 ಸಹಾಯಧನ ಸಿಗಲಿದೆ. ಉಳಿಕೆ ಶೇ 80ರಷ್ಟು ₹80,000 ಕ್ಕೆ ವಾರ್ಷಿಕ ಶೇ 4ರ ಬಡ್ಡಿದರದಲ್ಲಿ ಸಾಲ ಸಿಗಲಿದೆ.</p></li><li><p>ಘಟಕ ವೆಚ್ಚಕ್ಕೆ ₹ 1ಲಕ್ಷದಿಂದ ₹ 2ಲಕ್ಷದ ವರೆಗೆ ಶೇ 15ರಷ್ಟು ಅಂದರೆ, ₹20,000 ದಿಂದ ₹30,000ಗಳ ವರೆಗೂ ಸಹಾಯಧನ ಸಿಗಲಿದೆ. ಉಳಿಕೆ ಶೇ 85ರಷ್ಟು ₹1.7 ಲಕ್ಷಕ್ಕೆ ವಾರ್ಷಿಕ ಶೇ 2ರ ಬಡ್ಡಿಯಲ್ಲಿ ಸಾಲ ಸಿಗಲಿದೆ.</p></li></ul><p><strong>ಅಗತ್ಯ ದಾಖಲೆಗಳು ಯಾವುವು?</strong></p><ul><li><p>ಪಿತ್ರಾರ್ಜಿತ ಆಸ್ತಿಯಾಗಿದ್ದರೆ ಆಸ್ತಿ ವಿಭಾಗ ಪತ್ರ, ಎಂ.ಆರ್ ಕಾಫಿ ಒದಗಿಸಬೇಕು</p></li><li><p>ಪಹಣಿ</p></li><li><p>ಕಂದಾಯ ಪಾವತಿಸಿದ ರಶೀದಿ.</p></li></ul>.<h3>ಮರುಪಾವತಿ ವಿಧಾನ </h3><ul><li><p>ಯೋಜನೆಯಲ್ಲಿ ಪಡೆದ ಸಾಲಕ್ಕೆ ವಾರ್ಷಿಕ ಶೇ 4ರ ಬಡ್ಡಿದರದಲ್ಲಿ 34 ಕಂತುಗಳಲ್ಲಿ ಮರು ಪಾವತಿ ಮಾಡಬೇಕು. </p></li></ul><p>ಯೋಜನೆ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡುವುದು. <a href="https://kvldcl.karnataka.gov.in/26/kayaka-kirana-cf/kn">ಇಲಾಖೆಯ ಅಂತರ್ಜಾಲ ತಾಣ</a>.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>