<p>ಜೈನ್, ಸಿಖ್, ಮುಸ್ಲಿಂ, ಕ್ರೈಸ್ತ, ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರಲ್ಲಿ ಉದ್ಯೋಗ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ‘ವೃತ್ತಿ ಪ್ರೋತ್ಸಾಹ ಸಾಲ ಯೋಜನೆ‘ಯನ್ನು ಕರ್ನಾಟಕ ಸರ್ಕಾರ ಜಾರಿಗೆ ತಂದಿದೆ.</p><p>ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಅನುಷ್ಠಾನಗೊಳ್ಳುತ್ತಿರುವ ಈ ಯೋಜನೆ ಮೂಲಕ ಈ ಸಮುದಾಯಗಳ ಆಸಕ್ತರು -ಉದ್ಯೋಗ ಮತ್ತು ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬಹುದಾಗಿದೆ.</p><p>‘ವೃತ್ತಿ ಪ್ರೋತ್ಸಾಹ‘ ಸಾಲದಲ್ಲಿ ₹1ಲಕ್ಷ ನೀಡುತ್ತಿದ್ದು ಅದರಲ್ಲಿ ಶೇ 50 ಸಾಲದ ರೂಪದಲ್ಲಿ ಶೇ 50 ಸಬ್ಸಿಡಿಯಲ್ಲಿ ನೀಡಲಾಗುತ್ತದೆ. </p><p><strong>ಅರ್ಹತೆಗಳು</strong></p><p>ಅರ್ಜಿದಾರರು ಕರ್ನಾಟಕದವರಾಗಿದ್ದು, ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರಾಗಿರಬೇಕು.</p><p>18 ರಿಂದ 55 ವಯಸ್ಸಿನವರಾಗಿರಬೇಕು</p><p>ಕುಟುಂಬದ ವಾರ್ಷಿಕ ಆದಾಯವು ನಗರ ಪ್ರದೇಶಗಳಲ್ಲಿ ₹1ಲಕ್ಷಕ್ಕಿಂತ ಕಡಿಮೆ ಹಾಗೂ ಗ್ರಾಮೀಣ ಭಾಗದಲ್ಲಿ ₹81 ಸಾವಿರಕ್ಕಿಂತ ಕಡಿಮೆ ಇರಬೇಕು</p><p>ಅರ್ಜಿದಾರರ ಕುಟುಂಬದ ಯಾವುದೇ ಸದಸ್ಯರು ರಾಜ್ಯ– ಕೇಂದ್ರ ಸರ್ಕಾರಿ ಉದ್ಯೋಗಿಯಾಗಿರಬಾರದು.</p><p>ಕುಟುಂಬದ ಸದಸ್ಯರು ಕಳೆದ 5 ವರ್ಷಗಳಲ್ಲಿ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತ (ಕೆಎಂಡಿಸಿಎಲ್) ಅನ್ನು ಹೊರತುಪಡಿಸಿ ಬೇರೆ ಯಾವುದೇ ಯೋಜನೆಯಡಿಯಲ್ಲಿ ಪ್ರಯೋಜನಗಳನ್ನು ಪಡೆದಿರಬಾರದು.</p><p><strong>ಅರ್ಜಿ ಸಲ್ಲಿಸುವ ಪ್ರಕ್ರಿಯೆ</strong></p><p>ಹಂತ 1: ಅರ್ಜಿದಾರರು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧಿಕೃತ <a href="https://kmdconline.karnataka.gov.in/Portal/home">https://kmdconline.karnataka.gov.in/Portal/home</a> ವೆಬ್ಸೈಟ್ಗೆ ಭೇಟಿ ನೀಡಿ.</p><p>ಹಂತ 2: ಸ್ಕ್ರೀನ್ ಮೇಲೆ ಕಾಣುವ ಅರ್ಜಿ ಸಲ್ಲಿಸಿ ಎಂಬ ಗುಂಡಿನ್ನು ಒತ್ತಿ. ನಂತರ ‘ಮೊಬೈಲ್ ಸಂಖ್ಯೆ‘ ನಮೂದಿಸಿದ ಬಳಿಕ ‘ಸಲ್ಲಿಸು‘ ಎಂಬುವುದನ್ನು ಒತ್ತಿ.</p><p>ಹಂತ 3: ನಂತರ ‘ಆಧಾರ್ ಸಂಖ್ಯೆ‘ ನಮೂದಿಸಿ, ‘ಕ್ಯಾಪ್ಚಾ‘ ಅನ್ನು ಭರ್ತಿ ಮಾಡಿದ ನಂತರ "ಮುಂದೆ" ಆಯ್ಕೆಮಾಡಿ.</p><p>ಹಂತ 4: ಅರ್ಜಿದಾರರ ಆಧಾರ್ ಲಿಂಕ್ ಮಾಡಿದ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ ನಮೂದಿಸಿ, ನಂತರ ‘ಮುಂದುವರಿಸಿ‘ ಆಯ್ಕೆಮಾಡಿ.</p><p>ಹಂತ 5: ಆಧಾರ್ ಹಾಗೂ ಒಟಿಪಿ ಪರಿಶೀಲಿಸಿದ ನಂತರ ‘ಸಲ್ಲಿಸು‘ ಎಂಬ ಗುಂಡಿಯನ್ನು ಒತ್ತಿ.</p><p>ಹಂತ 6: "ಸಿಖ್ಲಿಗರ್ ಸಮುದಾಯ ಅಭಿವೃದ್ಧಿ ಯೋಜನೆ" ಎಂಬುವುದನ್ನು ಆಯ್ಕೆ ಮಾಡಿದ ನಂತರ ಕೇಳಿದ ವಿವರಗಳನ್ನು ಭರ್ತಿ ಮಾಡಿ.</p><p>ಹಂತ 7: ‘ಮುಂದಿನದು‘ ಆಯ್ಕೆಮಾಡಿ, ವಿಳಾಸದ ವಿವರವನ್ನು ಭರ್ತಿ ಮಾಡಿ. </p><p>ಹಂತ 8: ನಂತರ ಪಾಸ್ಪೋರ್ಟ್ ಗಾತ್ರದ ಫೋಟೋ, ಶೈಕ್ಷಣಿಕ ದಾಖಲೆ, ಆದಾಯ ಪ್ರಮಾಣಪತ್ರವನ್ನು ನಮೂದಿಸಿ.</p><p>ಹಂತ 10: ‘ಮುಂದುವರಿಸಿ‘ ಎಂಬ ಗುಂಡಿನ್ನು ಒತ್ತಿ. ‘ಅರ್ಜಿ ಸಲ್ಲಿಸಿ‘ ಆಯ್ಕೆಮಾಡಿದ ಬಳಿಕ ಅರ್ಜಿ ಐಡಿ ಪಡೆಯಿರಿ.</p><p><strong>ಅಗತ್ಯವಿರುವ ದಾಖಲೆಗಳು</strong></p><p>ಅಲ್ಪಸಂಖ್ಯಾತ ಪ್ರಮಾಣಪತ್ರ </p><p>ಆದಾಯ ಪ್ರಮಾಣ ಪತ್ರ</p><p>ಆಧಾರ್ ಕಾರ್ಡ್ </p><p>ಬ್ಯಾಂಕ್ ಖಾತೆಯ ವಿವರ</p><p>ಸ್ವಯಂ ಘೋಷಣಾ ಜಾಮೀನು ಪ್ರಮಾಣ ಪತ್ರ</p><p>ಸ್ವಯಂ ಘೋಷಣಾ ಪ್ರಮಾಣ ಪತ್ರ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಜೈನ್, ಸಿಖ್, ಮುಸ್ಲಿಂ, ಕ್ರೈಸ್ತ, ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರಲ್ಲಿ ಉದ್ಯೋಗ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ‘ವೃತ್ತಿ ಪ್ರೋತ್ಸಾಹ ಸಾಲ ಯೋಜನೆ‘ಯನ್ನು ಕರ್ನಾಟಕ ಸರ್ಕಾರ ಜಾರಿಗೆ ತಂದಿದೆ.</p><p>ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಅನುಷ್ಠಾನಗೊಳ್ಳುತ್ತಿರುವ ಈ ಯೋಜನೆ ಮೂಲಕ ಈ ಸಮುದಾಯಗಳ ಆಸಕ್ತರು -ಉದ್ಯೋಗ ಮತ್ತು ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬಹುದಾಗಿದೆ.</p><p>‘ವೃತ್ತಿ ಪ್ರೋತ್ಸಾಹ‘ ಸಾಲದಲ್ಲಿ ₹1ಲಕ್ಷ ನೀಡುತ್ತಿದ್ದು ಅದರಲ್ಲಿ ಶೇ 50 ಸಾಲದ ರೂಪದಲ್ಲಿ ಶೇ 50 ಸಬ್ಸಿಡಿಯಲ್ಲಿ ನೀಡಲಾಗುತ್ತದೆ. </p><p><strong>ಅರ್ಹತೆಗಳು</strong></p><p>ಅರ್ಜಿದಾರರು ಕರ್ನಾಟಕದವರಾಗಿದ್ದು, ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರಾಗಿರಬೇಕು.</p><p>18 ರಿಂದ 55 ವಯಸ್ಸಿನವರಾಗಿರಬೇಕು</p><p>ಕುಟುಂಬದ ವಾರ್ಷಿಕ ಆದಾಯವು ನಗರ ಪ್ರದೇಶಗಳಲ್ಲಿ ₹1ಲಕ್ಷಕ್ಕಿಂತ ಕಡಿಮೆ ಹಾಗೂ ಗ್ರಾಮೀಣ ಭಾಗದಲ್ಲಿ ₹81 ಸಾವಿರಕ್ಕಿಂತ ಕಡಿಮೆ ಇರಬೇಕು</p><p>ಅರ್ಜಿದಾರರ ಕುಟುಂಬದ ಯಾವುದೇ ಸದಸ್ಯರು ರಾಜ್ಯ– ಕೇಂದ್ರ ಸರ್ಕಾರಿ ಉದ್ಯೋಗಿಯಾಗಿರಬಾರದು.</p><p>ಕುಟುಂಬದ ಸದಸ್ಯರು ಕಳೆದ 5 ವರ್ಷಗಳಲ್ಲಿ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತ (ಕೆಎಂಡಿಸಿಎಲ್) ಅನ್ನು ಹೊರತುಪಡಿಸಿ ಬೇರೆ ಯಾವುದೇ ಯೋಜನೆಯಡಿಯಲ್ಲಿ ಪ್ರಯೋಜನಗಳನ್ನು ಪಡೆದಿರಬಾರದು.</p><p><strong>ಅರ್ಜಿ ಸಲ್ಲಿಸುವ ಪ್ರಕ್ರಿಯೆ</strong></p><p>ಹಂತ 1: ಅರ್ಜಿದಾರರು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧಿಕೃತ <a href="https://kmdconline.karnataka.gov.in/Portal/home">https://kmdconline.karnataka.gov.in/Portal/home</a> ವೆಬ್ಸೈಟ್ಗೆ ಭೇಟಿ ನೀಡಿ.</p><p>ಹಂತ 2: ಸ್ಕ್ರೀನ್ ಮೇಲೆ ಕಾಣುವ ಅರ್ಜಿ ಸಲ್ಲಿಸಿ ಎಂಬ ಗುಂಡಿನ್ನು ಒತ್ತಿ. ನಂತರ ‘ಮೊಬೈಲ್ ಸಂಖ್ಯೆ‘ ನಮೂದಿಸಿದ ಬಳಿಕ ‘ಸಲ್ಲಿಸು‘ ಎಂಬುವುದನ್ನು ಒತ್ತಿ.</p><p>ಹಂತ 3: ನಂತರ ‘ಆಧಾರ್ ಸಂಖ್ಯೆ‘ ನಮೂದಿಸಿ, ‘ಕ್ಯಾಪ್ಚಾ‘ ಅನ್ನು ಭರ್ತಿ ಮಾಡಿದ ನಂತರ "ಮುಂದೆ" ಆಯ್ಕೆಮಾಡಿ.</p><p>ಹಂತ 4: ಅರ್ಜಿದಾರರ ಆಧಾರ್ ಲಿಂಕ್ ಮಾಡಿದ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ ನಮೂದಿಸಿ, ನಂತರ ‘ಮುಂದುವರಿಸಿ‘ ಆಯ್ಕೆಮಾಡಿ.</p><p>ಹಂತ 5: ಆಧಾರ್ ಹಾಗೂ ಒಟಿಪಿ ಪರಿಶೀಲಿಸಿದ ನಂತರ ‘ಸಲ್ಲಿಸು‘ ಎಂಬ ಗುಂಡಿಯನ್ನು ಒತ್ತಿ.</p><p>ಹಂತ 6: "ಸಿಖ್ಲಿಗರ್ ಸಮುದಾಯ ಅಭಿವೃದ್ಧಿ ಯೋಜನೆ" ಎಂಬುವುದನ್ನು ಆಯ್ಕೆ ಮಾಡಿದ ನಂತರ ಕೇಳಿದ ವಿವರಗಳನ್ನು ಭರ್ತಿ ಮಾಡಿ.</p><p>ಹಂತ 7: ‘ಮುಂದಿನದು‘ ಆಯ್ಕೆಮಾಡಿ, ವಿಳಾಸದ ವಿವರವನ್ನು ಭರ್ತಿ ಮಾಡಿ. </p><p>ಹಂತ 8: ನಂತರ ಪಾಸ್ಪೋರ್ಟ್ ಗಾತ್ರದ ಫೋಟೋ, ಶೈಕ್ಷಣಿಕ ದಾಖಲೆ, ಆದಾಯ ಪ್ರಮಾಣಪತ್ರವನ್ನು ನಮೂದಿಸಿ.</p><p>ಹಂತ 10: ‘ಮುಂದುವರಿಸಿ‘ ಎಂಬ ಗುಂಡಿನ್ನು ಒತ್ತಿ. ‘ಅರ್ಜಿ ಸಲ್ಲಿಸಿ‘ ಆಯ್ಕೆಮಾಡಿದ ಬಳಿಕ ಅರ್ಜಿ ಐಡಿ ಪಡೆಯಿರಿ.</p><p><strong>ಅಗತ್ಯವಿರುವ ದಾಖಲೆಗಳು</strong></p><p>ಅಲ್ಪಸಂಖ್ಯಾತ ಪ್ರಮಾಣಪತ್ರ </p><p>ಆದಾಯ ಪ್ರಮಾಣ ಪತ್ರ</p><p>ಆಧಾರ್ ಕಾರ್ಡ್ </p><p>ಬ್ಯಾಂಕ್ ಖಾತೆಯ ವಿವರ</p><p>ಸ್ವಯಂ ಘೋಷಣಾ ಜಾಮೀನು ಪ್ರಮಾಣ ಪತ್ರ</p><p>ಸ್ವಯಂ ಘೋಷಣಾ ಪ್ರಮಾಣ ಪತ್ರ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>