<p>ಕೇಂದ್ರ ಸರ್ಕಾರದ ವಿವಿಧ ಯೋಜನೆಗಳಲ್ಲಿ ಪ್ರಧಾನ ಮಂತ್ರಿ ಕುಸುಮ್ ಯೋಜನೆಯು ಒಂದು. ಈ ಯೋಜನೆಯ ಮುಖ್ಯ ಉದ್ದೇಶ ಕೃಷಿಯಲ್ಲಿ ಸೌರ ನೀರಾವರಿ ಪಂಪ್ಸೆಂಟ್  ಅಳವಡಿಸಲು ರೈತರಿಗೆ ಸಹಾಯಧನ ನೀಡುವುದಾಗಿದೆ. </p><p>ಇಂಧನ ಸಚಿವಾಲಯ ಜಾರಿಗೊಳಿಸುವ ಈ ಯೋಜನೆಯಲ್ಲಿ ಸೌರ ಪಂಪ್ಸೆಟ್ ಆಳವಡಿಸಿಕೊಳ್ಳುವ ರೈತರಿಗೆ ಶೇ 60ರಷ್ಟು ಸಹಾಯಧನ ಸಿಗಲಿದೆ. ಒಟ್ಟು ವೆಚ್ಚದಲ್ಲಿ ಶೇ 30ರಷ್ಟನ್ನು ಸರ್ಕಾರದಿಂದ ಸಾಲವಾಗಿ ನೀಡಲಾಗುತ್ತದೆ.</p><p><strong>ಉದ್ದೇಶಗಳು:</strong></p><p>ನೈಸರ್ಗಿಕ ಶಕ್ತಿಯನ್ನು ಬಳಕೆ ಮಾಡುವುದರಿಂದ ರೈತರು ಹೆಚ್ಚು ಪರಿಣಾಮಕಾರಿ ಹಾಗೂ ಪರಿಸರ ಸ್ನೇಹಿ ನೀರಾವರಿಗೆ ಸಹಾಕಾರಿಯಾಗಿದೆ.</p><p>ಉತ್ಪಾದನೆಯಾದ ಹೆಚ್ಚುವರಿ ವಿದ್ಯುತ್ ಶಕ್ತಿಯನ್ನು ಸರ್ಕಾರಕ್ಕೆ ಮಾರಾಟ ಮಾಡಬಹುದು.</p>.ಕಿಸಾನ್ ಸಂಪದ: ₹1,920 ಕೋಟಿ ಹೆಚ್ಚುವರಿ ಹಣ.PM ಕಿಸಾನ್ ಸಮ್ಮಾನ್: 2020ರಿಂದ ಕರ್ನಾಟಕ ರೈತರಿಗೆ ₹15,127 ಕೋಟಿ ವಿತರಣೆ.<p><strong>ಕುಸುಮ್ ಯೋಜನೆ 3 ಘಟಕಗಳನ್ನು ಒಳಗೊಂಡಿದೆ</strong></p><p><strong>ಘಟಕ ಎ:</strong> 10,000 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯ ಕೇಂದ್ರವನ್ನು ಸ್ಥಾಪಿಸುವುದು.  ಈ ಘಟಕದ ಅಡಿಯಲ್ಲಿ, 500 ಕಿಲೋ ವ್ಯಾಟ್ ನಿಂದ 2 ಮೆಗಾವ್ಯಾಟ್ವರೆಗೆ ವಿದ್ಯುತ್ ಮಾರಾಟ ಮಾಡಬಹುದು.  </p><p><strong>ಕಾಂಪೊನೆಂಟ್ ಬಿ:</strong> 7.5 ಎಚ್.ಪಿ ವರೆಗಿನ ವೈಯಕ್ತಿಕ ಸಾಮರ್ಥ್ಯದ ಮತ್ತು 17.5 ಲಕ್ಷ ಮೌಲ್ಯದ ಸ್ಯಾಂಡ್-ಅಲೋನ್ ಸೌರ ಪಂಪ್ ಸ್ಥಾಪಿಸುವುದು.</p><p><strong>ಕಾಂಪೊನೆಂಟ್ ಸಿ:</strong> ತಲಾ 7.5 ಎಚ್.ಪಿ ಗೆ ಬೇಕಾಗುವ ವಿದ್ಯುತ್ ಉತ್ಪಾದನೆಗೆ ಆರ್ಥಿಕ ಬೆಂಬಲವನ್ನು ಒದಗಿಸಿ, ಹೆಚ್ಚುವರಿ ವಿದ್ಯುತ್ ಅನ್ನು ಮಾರಾಟ ಮಾಡಬಹುದಾಗಿದೆ. </p><p><strong>ಪ್ರಯೋಜನಗಳು:</strong> </p><ul><li><p>ಸರ್ಕಾರವು ಶೇ60 ರಷ್ಟು ಸಹಾಯಧನ ನೀಡುತ್ತದೆ. ಒಟ್ಟು ವೆಚ್ಚದ ಶೇ 30ರಷ್ಟು ಸಾಲ ಸಿಗಲಿದ್ದು,ಇದರಲ್ಲಿ ಶೇ10 ರಷ್ಟು ರೈತರು ಭರಿಸಬೇಕಾಗುತ್ತದೆ.</p></li><li><p>ಅತ್ಯಾಧುನಿಕ ಸೌರ ಪಂಪ್ಗಳ ಸ್ಥಾಪನೆಗೆ ಸಹಾಯಧನ ದೊರೆಯುತ್ತದೆ. ಅವು 720 ಮೆಗಾವ್ಯಾಟ್ ಸಾಮರ್ಥ್ಯವನ್ನು ಹೊಂದಿರುವುದರಿಂದ ನೀರಾವರಿಯನ್ನು ಸುಧಾರಿಸುತ್ತದೆ.</p></li><li><p>ವಿದ್ಯುತ್ ಸ್ಥಾವರಗಳಲ್ಲಿ ಉತ್ಪಾದಿಸುವ ಹೆಚ್ಚುವರಿ ವಿದ್ಯುತ್ ಅನ್ನು ನೇರವಾಗಿ ಸರ್ಕಾರಕ್ಕೆ ಮಾರಾಟ ಮಾಡುವ ಅವಕಾಶವನ್ನು ನೀಡಲಾಗಿದೆ. ಇದು ರೈತರ ಆದಾಯ ಹೆಚ್ಚು ಮಾಡುತ್ತದೆ.</p></li><li><p>ಬಂಜರು ಮತ್ತು ಸಾಗುವಳಿ ಮಾಡದ ಭೂಮಿಯನ್ನು ಬಳಸಿಕೊಂಡು ಸ್ಥಿರ ಆದಾಯ ಗಳಿಸಬಹುದು.</p></li><li><p>ಕೃಷಿಯೋಗ್ಯ ಭೂಮಿಯಲ್ಲಿ ಸೌರ ಸ್ಥಾವರಗಳನ್ನು ಎತ್ತರದಲ್ಲಿ ಸ್ಥಾಪಿಸಲಾಗುತ್ತದೆ. ಆದರ ಕೆಳಗೆ ನಿಯಮಿತವಾಗಿ ಕೃಷಿ ಮಾಡಬಹುದು.</p></li></ul><p><strong>ಯಾರು ಯೋಜನೆಯನ್ನು ಪಡೆಯಬಹುದು:</strong></p><ul><li><p>ಒಬ್ಬ ರೈತ</p></li><li><p>ರೈತರ ಗುಂಪು</p></li><li><p>ಎಫ್ಪಿಒ ಅಥವಾ ರೈತ ಉತ್ಪಾದಕ ಸಂಘಗಳು</p></li><li><p>ಪಂಚಾಯತ್ಗಳು</p></li><li><p>ಸಹಕಾರ ಸಂಘಗಳು</p></li></ul><p><strong>ಅಗತ್ಯವಿರುವ ದಾಖಲೆಗಳು:</strong></p><ul><li><p>ಆಧಾರ್ ಕಾರ್ಡ್</p></li><li><p>ಭೂ ದಾಖಲೆಗಳು</p></li><li><p>ಬ್ಯಾಂಕ್ ಖಾತೆ </p></li><li><p>ಘೋಷಣಾ ಪತ್ರ</p></li><li><p>ಮೊಬೈಲ್ ಸಂಖ್ಯೆ</p></li><li><p>ಭಾವಚಿತ್ರ</p></li></ul><p><strong>ಅರ್ಜಿ ಸಲ್ಲಿಸುವುದು ಹೇಗೆ? </strong></p><ul><li><p>ಅಧಿಕೃತ ಅಂತರ್ಜಾಲ ತಾಣವಾದ <a href="https://pmkusum.mnre.gov.in/#/landing">https://pmkusum.mnre.gov.in/#/landing</a> ಗೆ ಭೇಟಿ ನೀಡಿ. ‘ನೋಂದಣಿ’ ಮೇಲೆ ಕ್ಲಿಕ್ ಮಾಡಿ.</p></li><li><p>ನಂತರ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ನಮೂನೆಯನ್ನು ಭರ್ತಿ ಮಾಡಿ.</p></li><li><p>ಬಳಿಕ ‘ಸೌರ ಕೃಷಿ ಪಂಪ್ಸೆಟ್ ಸಬ್ಸಿಡಿ ಯೋಜನೆ’ ಗಾಗಿ ‘ಲಾಗಿನ್’ ಕ್ಲಿಕ್ ಮಾಡಿ.</p></li><li><p>ಅಲ್ಲಿ ಕೇಳಲಾದ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸಿ. </p></li></ul><p>ಅರ್ಜಿ ಸಲ್ಲಿಸಿದ ನಂತರ, ರೈತರು ಸೌರ ಪಂಪ್ ಘಟಕವನ್ನು ಸ್ಥಾಪಿಸಲು ಒಟ್ಟು ವೆಚ್ಚದ ಶೇ 10ರಷ್ಟು ಇಲಾಖೆಯಲ್ಲಿ ಠೇವಣಿ ಇಡಬೇಕು. ಸಹಾಯಧನ ಮಂಜೂರಾಗಲು 90 ರಿಂದ 10 ದಿನ ತೆಗೆದುಕೊಳ್ಳಬಹುದು ಎಂದು ಇಲಾಖೆ ತಿಳಿಸಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕೇಂದ್ರ ಸರ್ಕಾರದ ವಿವಿಧ ಯೋಜನೆಗಳಲ್ಲಿ ಪ್ರಧಾನ ಮಂತ್ರಿ ಕುಸುಮ್ ಯೋಜನೆಯು ಒಂದು. ಈ ಯೋಜನೆಯ ಮುಖ್ಯ ಉದ್ದೇಶ ಕೃಷಿಯಲ್ಲಿ ಸೌರ ನೀರಾವರಿ ಪಂಪ್ಸೆಂಟ್  ಅಳವಡಿಸಲು ರೈತರಿಗೆ ಸಹಾಯಧನ ನೀಡುವುದಾಗಿದೆ. </p><p>ಇಂಧನ ಸಚಿವಾಲಯ ಜಾರಿಗೊಳಿಸುವ ಈ ಯೋಜನೆಯಲ್ಲಿ ಸೌರ ಪಂಪ್ಸೆಟ್ ಆಳವಡಿಸಿಕೊಳ್ಳುವ ರೈತರಿಗೆ ಶೇ 60ರಷ್ಟು ಸಹಾಯಧನ ಸಿಗಲಿದೆ. ಒಟ್ಟು ವೆಚ್ಚದಲ್ಲಿ ಶೇ 30ರಷ್ಟನ್ನು ಸರ್ಕಾರದಿಂದ ಸಾಲವಾಗಿ ನೀಡಲಾಗುತ್ತದೆ.</p><p><strong>ಉದ್ದೇಶಗಳು:</strong></p><p>ನೈಸರ್ಗಿಕ ಶಕ್ತಿಯನ್ನು ಬಳಕೆ ಮಾಡುವುದರಿಂದ ರೈತರು ಹೆಚ್ಚು ಪರಿಣಾಮಕಾರಿ ಹಾಗೂ ಪರಿಸರ ಸ್ನೇಹಿ ನೀರಾವರಿಗೆ ಸಹಾಕಾರಿಯಾಗಿದೆ.</p><p>ಉತ್ಪಾದನೆಯಾದ ಹೆಚ್ಚುವರಿ ವಿದ್ಯುತ್ ಶಕ್ತಿಯನ್ನು ಸರ್ಕಾರಕ್ಕೆ ಮಾರಾಟ ಮಾಡಬಹುದು.</p>.ಕಿಸಾನ್ ಸಂಪದ: ₹1,920 ಕೋಟಿ ಹೆಚ್ಚುವರಿ ಹಣ.PM ಕಿಸಾನ್ ಸಮ್ಮಾನ್: 2020ರಿಂದ ಕರ್ನಾಟಕ ರೈತರಿಗೆ ₹15,127 ಕೋಟಿ ವಿತರಣೆ.<p><strong>ಕುಸುಮ್ ಯೋಜನೆ 3 ಘಟಕಗಳನ್ನು ಒಳಗೊಂಡಿದೆ</strong></p><p><strong>ಘಟಕ ಎ:</strong> 10,000 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯ ಕೇಂದ್ರವನ್ನು ಸ್ಥಾಪಿಸುವುದು.  ಈ ಘಟಕದ ಅಡಿಯಲ್ಲಿ, 500 ಕಿಲೋ ವ್ಯಾಟ್ ನಿಂದ 2 ಮೆಗಾವ್ಯಾಟ್ವರೆಗೆ ವಿದ್ಯುತ್ ಮಾರಾಟ ಮಾಡಬಹುದು.  </p><p><strong>ಕಾಂಪೊನೆಂಟ್ ಬಿ:</strong> 7.5 ಎಚ್.ಪಿ ವರೆಗಿನ ವೈಯಕ್ತಿಕ ಸಾಮರ್ಥ್ಯದ ಮತ್ತು 17.5 ಲಕ್ಷ ಮೌಲ್ಯದ ಸ್ಯಾಂಡ್-ಅಲೋನ್ ಸೌರ ಪಂಪ್ ಸ್ಥಾಪಿಸುವುದು.</p><p><strong>ಕಾಂಪೊನೆಂಟ್ ಸಿ:</strong> ತಲಾ 7.5 ಎಚ್.ಪಿ ಗೆ ಬೇಕಾಗುವ ವಿದ್ಯುತ್ ಉತ್ಪಾದನೆಗೆ ಆರ್ಥಿಕ ಬೆಂಬಲವನ್ನು ಒದಗಿಸಿ, ಹೆಚ್ಚುವರಿ ವಿದ್ಯುತ್ ಅನ್ನು ಮಾರಾಟ ಮಾಡಬಹುದಾಗಿದೆ. </p><p><strong>ಪ್ರಯೋಜನಗಳು:</strong> </p><ul><li><p>ಸರ್ಕಾರವು ಶೇ60 ರಷ್ಟು ಸಹಾಯಧನ ನೀಡುತ್ತದೆ. ಒಟ್ಟು ವೆಚ್ಚದ ಶೇ 30ರಷ್ಟು ಸಾಲ ಸಿಗಲಿದ್ದು,ಇದರಲ್ಲಿ ಶೇ10 ರಷ್ಟು ರೈತರು ಭರಿಸಬೇಕಾಗುತ್ತದೆ.</p></li><li><p>ಅತ್ಯಾಧುನಿಕ ಸೌರ ಪಂಪ್ಗಳ ಸ್ಥಾಪನೆಗೆ ಸಹಾಯಧನ ದೊರೆಯುತ್ತದೆ. ಅವು 720 ಮೆಗಾವ್ಯಾಟ್ ಸಾಮರ್ಥ್ಯವನ್ನು ಹೊಂದಿರುವುದರಿಂದ ನೀರಾವರಿಯನ್ನು ಸುಧಾರಿಸುತ್ತದೆ.</p></li><li><p>ವಿದ್ಯುತ್ ಸ್ಥಾವರಗಳಲ್ಲಿ ಉತ್ಪಾದಿಸುವ ಹೆಚ್ಚುವರಿ ವಿದ್ಯುತ್ ಅನ್ನು ನೇರವಾಗಿ ಸರ್ಕಾರಕ್ಕೆ ಮಾರಾಟ ಮಾಡುವ ಅವಕಾಶವನ್ನು ನೀಡಲಾಗಿದೆ. ಇದು ರೈತರ ಆದಾಯ ಹೆಚ್ಚು ಮಾಡುತ್ತದೆ.</p></li><li><p>ಬಂಜರು ಮತ್ತು ಸಾಗುವಳಿ ಮಾಡದ ಭೂಮಿಯನ್ನು ಬಳಸಿಕೊಂಡು ಸ್ಥಿರ ಆದಾಯ ಗಳಿಸಬಹುದು.</p></li><li><p>ಕೃಷಿಯೋಗ್ಯ ಭೂಮಿಯಲ್ಲಿ ಸೌರ ಸ್ಥಾವರಗಳನ್ನು ಎತ್ತರದಲ್ಲಿ ಸ್ಥಾಪಿಸಲಾಗುತ್ತದೆ. ಆದರ ಕೆಳಗೆ ನಿಯಮಿತವಾಗಿ ಕೃಷಿ ಮಾಡಬಹುದು.</p></li></ul><p><strong>ಯಾರು ಯೋಜನೆಯನ್ನು ಪಡೆಯಬಹುದು:</strong></p><ul><li><p>ಒಬ್ಬ ರೈತ</p></li><li><p>ರೈತರ ಗುಂಪು</p></li><li><p>ಎಫ್ಪಿಒ ಅಥವಾ ರೈತ ಉತ್ಪಾದಕ ಸಂಘಗಳು</p></li><li><p>ಪಂಚಾಯತ್ಗಳು</p></li><li><p>ಸಹಕಾರ ಸಂಘಗಳು</p></li></ul><p><strong>ಅಗತ್ಯವಿರುವ ದಾಖಲೆಗಳು:</strong></p><ul><li><p>ಆಧಾರ್ ಕಾರ್ಡ್</p></li><li><p>ಭೂ ದಾಖಲೆಗಳು</p></li><li><p>ಬ್ಯಾಂಕ್ ಖಾತೆ </p></li><li><p>ಘೋಷಣಾ ಪತ್ರ</p></li><li><p>ಮೊಬೈಲ್ ಸಂಖ್ಯೆ</p></li><li><p>ಭಾವಚಿತ್ರ</p></li></ul><p><strong>ಅರ್ಜಿ ಸಲ್ಲಿಸುವುದು ಹೇಗೆ? </strong></p><ul><li><p>ಅಧಿಕೃತ ಅಂತರ್ಜಾಲ ತಾಣವಾದ <a href="https://pmkusum.mnre.gov.in/#/landing">https://pmkusum.mnre.gov.in/#/landing</a> ಗೆ ಭೇಟಿ ನೀಡಿ. ‘ನೋಂದಣಿ’ ಮೇಲೆ ಕ್ಲಿಕ್ ಮಾಡಿ.</p></li><li><p>ನಂತರ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ನಮೂನೆಯನ್ನು ಭರ್ತಿ ಮಾಡಿ.</p></li><li><p>ಬಳಿಕ ‘ಸೌರ ಕೃಷಿ ಪಂಪ್ಸೆಟ್ ಸಬ್ಸಿಡಿ ಯೋಜನೆ’ ಗಾಗಿ ‘ಲಾಗಿನ್’ ಕ್ಲಿಕ್ ಮಾಡಿ.</p></li><li><p>ಅಲ್ಲಿ ಕೇಳಲಾದ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸಿ. </p></li></ul><p>ಅರ್ಜಿ ಸಲ್ಲಿಸಿದ ನಂತರ, ರೈತರು ಸೌರ ಪಂಪ್ ಘಟಕವನ್ನು ಸ್ಥಾಪಿಸಲು ಒಟ್ಟು ವೆಚ್ಚದ ಶೇ 10ರಷ್ಟು ಇಲಾಖೆಯಲ್ಲಿ ಠೇವಣಿ ಇಡಬೇಕು. ಸಹಾಯಧನ ಮಂಜೂರಾಗಲು 90 ರಿಂದ 10 ದಿನ ತೆಗೆದುಕೊಳ್ಳಬಹುದು ಎಂದು ಇಲಾಖೆ ತಿಳಿಸಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>