<blockquote>ಭಾರತೀಯ ಅಂಚೆಯ ವಿವಿಧ ಯೋಜನೆಗಳಲ್ಲಿ ಸಾರ್ವಜನಿಕ ಭವಿಷ್ಯ ನಿಧಿ (PPF) ಒಂದಾಗಿದೆ. ಈ ಯೋಜನೆಯು ಹೆಚ್ಚು ಜನರಿಗೆ ಉಪಯೋಗವಾಗುವುದರೊಂದಿಗೆ ಹಣದ ಸುರಕ್ಷತೆ ಹಾಗೂ ಉತ್ತಮ ಬಡ್ಡಿಯ ದರವು ದೊರೆಯುತ್ತದೆ. ದೀರ್ಘಾವಧಿಯಲ್ಲಿ ಹಣವನ್ನು ಹೂಡಿಕೆ ಮಾಡಲು ಬಯಸಿದರೆ ಈ ಯೋಜನೆಯನ್ನು ಆಯ್ಕೆ ಮಾಡಬಹುದು.</blockquote>.<p>ಈ ಯೋಜನೆಯು ಸರ್ಕಾರದಿಂದ ಮಾನ್ಯತೆ ಪಡೆದಿದೆ. ಇದರಲ್ಲಿ ಹೂಡಿಕೆ ಮಾಡಿದ ಠೇವಣಿಗೆ ತೆರಿಗೆ ವಿನಾಯಿತಿ ಇರಲಿದೆ. ಈ ಯೋಜನೆಯ ಅವಧಿ 15 ವರ್ಷಗಳಾಗಿದೆ. ಹೂಡಿಕೆ ಮಾಡಿದ ಠೇವಣಿಯಿಂದ ಪ್ರತಿ ವರ್ಷ ಶೇ 7.1ರಷ್ಟು ಬಡ್ಡಿಯನ್ನು ಪಡೆಯಬಹುದು. ಇದರಲ್ಲಿ ₹500 ದಿಂದ ₹1.5 ಲಕ್ಷದ ವರೆಗೂ ಹೂಡಿಕೆಯನ್ನು ಮಾಡಬಹುದು. ಹೂಡಿಕೆಯನ್ನು 12 ಕಂತುಗಳಲ್ಲಿ ಅಥವಾ ವರ್ಷಕ್ಕೆ ಒಂದು ಕಂತಿನಲ್ಲಿ ಠೇವಣಿಯನ್ನು ಇಡುವ ಅವಕಾಶವಿದೆ.</p>.ದುಡಿಮೆಗಾಗಿ ವಾಹನ ಖರೀದಿಸಲು ಶೇ 75ರಷ್ಟು ಸಹಾಯಧನ: ಅರ್ಜಿ ಸಲ್ಲಿಸುವ ಬಗೆ ಹೇಗೆ?.<blockquote><strong>ಸಾರ್ವಜನಿಕ ಭವಿಷ್ಯ ನಿಧಿಯ (PPF) ಅವಧಿ</strong></blockquote>.<p>ಈ ಯೋಜನೆಯು 15 ವರ್ಷದ ಅವಧಿಯನ್ನು ಹೊಂದಿದೆ. ಈ ಅವಧಿಯು ಪೂರ್ಣಗೊಂಡ ನಂತರ 5 ವರ್ಷಗಳ ವರೆಗೆ ವಿಸ್ತರಿಸಲು ಅವಕಾಶವಿದೆ.</p>.<blockquote><strong>ಅಗತ್ಯ ಅರ್ಹತೆಗಳೇನು?</strong></blockquote>.<ul><li><p>ಭಾರತದ ಪ್ರಜೆಯಾಗಿರಬೇಕು.</p></li><li><p>18 ವರ್ಷದ ಒಳಗಿನವರ ಹೆಸರಿನಲ್ಲಿ ಖಾತೆಯನ್ನು ತೆರೆಯಬಹುದು. ಆದರೆ ಪೋಷಕರು ನಿರ್ವಹಣೆ ಮಾಡಬೇಕು.</p></li><li><p>ಅನಿವಾಸಿ ಭಾರತೀಯರು ಖಾತೆ ತೆರೆಯುವಂತಿಲ್ಲ.</p></li></ul>.ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿದೆ ಆಕರ್ಷಕ ಬಡ್ಡಿ: ಹೂಡಿಕೆ ಮಾಡುವುದು ಹೇಗೆ? .<blockquote><strong>ದೊರೆಯಲಿರುವ ಬಡ್ಡಿಯ ದರ ಎಷ್ಟು?</strong></blockquote>.<p>ಅಂಚೆ ಇಲಾಖೆಯು ಹೇಳಿರುವಂತೆ ಬಡ್ಡಿಯ ದರವು ವರ್ಷಕ್ಕೆ ಶೇ 7.1% ರಷ್ಟು ದೊರೆಯಲಿದೆ. ಪ್ರತಿ ಹಣಕಾಸು ವರ್ಷದ ಕೊನೆಯಲ್ಲಿ ಬಡ್ಡಿಯನ್ನು ಖಾತೆಗೆ ಜಮಾ ಮಾಡಲಾಗುತ್ತದೆ. ಈ ಯೋಜನೆಯಲ್ಲಿ ನೀಡಲಾಗುವ ಬಡ್ಡಿಯ ದರವನ್ನು ಸರ್ಕಾರವು 3 ತಿಂಗಳಿಗೊಮ್ಮೆ ಪರಿಷ್ಕರಣೆ ಮಾಡುತ್ತದೆ. </p>.<blockquote><strong>ಹೂಡಿಕೆಯನ್ನು ಹಿಂಪಡೆಯಲು ಸಾಧ್ಯವೇ?</strong></blockquote>.<ul><li><p>ಹೂಡಿಕೆ ಮಾಡಿದ 5ನೇ ವರ್ಷದಲ್ಲಿ ಆರೋಗ್ಯ ಸಮಸ್ಯೆ ಹಾಗೂ ಉನ್ನತ ಶಿಕ್ಷಣಕ್ಕಾಗಿ ಠೇವಣಿಯನ್ನು ಹಿಂಪಡೆಯಬಹುದು. </p></li><li><p>4ನೇ ವರ್ಷದ ಕೊನೆಯಲ್ಲಿ ಅಥವಾ 3ನೇ ವರ್ಷದ ಕೊನೆಯಲ್ಲಿ, ಠೇವಣಿಯ ಶೇ 50% ವರೆಗೆ ಹಿಂಪಡೆಯಬಹುದು.</p></li><li><p>ಅವಧಿಗೂ ಮುನ್ನ ಖಾತೆಯನ್ನು ಮುಚ್ಚಿದರೆ ಶೇ 1% ರಷ್ಟು ಬಡ್ಡಿಯನ್ನು ಕಡಿತಗೊಳಿಸಲಾಗುತ್ತದೆ. </p></li></ul>.<blockquote><strong>ಹೂಡಿಕೆದಾರ ಮೃತಪಟ್ಟರೇ?</strong></blockquote>.ಮಹಿಳಾ ಸಮ್ಮಾನ್ ಉಳಿತಾಯ ಯೋಜನೆ ಲಾಭಗಳೇನು? ಹೂಡಿಕೆಗೆ ಸಿಗಲಿದೆ ಅಧಿಕ ಬಡ್ಡಿದರ.. .<p>ಹೂಡಿಕೆ ಮಾಡುವ ವೇಳೆ ಯಾರ ಹೆಸರನ್ನು ನಾಮನಿರ್ದೇಶನ ಮಾಡಿರುತ್ತಾರೋ ಅವರಿಗೆ ಹಣ ದೊರೆಯಲಿದೆ. ಹೂಡಿಕೆದಾರ ಮೃತಪಟ್ಟರೆ ಖಾತೆಯನ್ನು ಮುಚ್ಚಲಾಗುತ್ತದೆ. ಸಾವಿನ ಕಾರಣದಿಂದಾಗಿ ಪಿಪಿಎಫ್ ಖಾತೆಯನ್ನು ಮುಚ್ಚುವ ಸಮಯದಲ್ಲಿ, ಖಾತೆಯನ್ನು ಮುಚ್ಚಿದ ಹಿಂದಿನ ತಿಂಗಳ ಅಂತ್ಯದವರೆಗೆ ಬಡ್ಡಿದರವನ್ನು ಪಾವತಿಸಲಾಗುತ್ತದೆ.</p>.<blockquote><strong>ಹೂಡಿಕೆಯ ಮೇಲೆ ಸಾಲ ಪಡೆಯಬಹುದೇ?</strong></blockquote>.<p>ಹೂಡಿಕೆ ಮಾಡಿದ 1 ವರ್ಷದಿಂದ 5 ವರ್ಷದ ನಡುವೆ ನಿಮ್ಮ ಠೇವಣಿಯ ಮೇಲೆ ಶೇ 25% ರಷ್ಟು ಸಾಲವನ್ನು ಪಡೆಯಬಹುದು. ಸಾಲ ಪಡೆದ 36 ತಿಂಗಳೊಳಗೆ ಮರುಪಾವತಿ ಮಾಡಿದರೆ ವಾರ್ಷಿಕ ಶೇ 1% ಬಡ್ಡಿ ಅನ್ವಯವಾಗಲಿದೆ. 36 ತಿಂಗಳ ನಂತರ ಪಾವತಿ ಮಾಡಿದರೆ ವಾರ್ಷಿಕ ಶೇ 6% ರ ಬಡ್ಡಿದರ ಅನ್ವಯವಾಗುತ್ತದೆ. ಸಾಲವನ್ನು ಮರುಪಾವತಿ ಮಾಡಿದ ನಂತರ ಪುನಃ ಸಾಲ ಪಡೆಯಬಹುದು. ಒಂದು ಹಣಕಾಸಿನ ವರ್ಷದಲ್ಲಿ ಒಂದು ಸಾಲ ಮಾತ್ರ ಪಡೆಯಲು ಅವಕಾಶವಿದೆ. </p>.<blockquote><strong>ಈ ಯೋಜನೆಯ ಪ್ರಯೋಜನವೇನು?</strong></blockquote>.<ul><li><p>ಹೂಡಿಕೆ ಮಾಡಿದ ಹಣವು ಹೆಚ್ಚು ಸುರಕ್ಷಿತವಾಗಿರುತ್ತದೆ.</p></li><li><p>ಬೇರೆ ಉಳಿತಾಯ ಯೋಜನೆಗಳಿಗೆ ಹೋಲಿಸಿದರೆ ಹೆಚ್ಚಿನ ಬಡ್ಡಿ ದೊರೆಯುತ್ತದೆ.</p></li><li><p>ಈ ಯೋಜನೆಯಲ್ಲಿ ಹೂಡಿಕೆ ಮಾಡಿದ ಠೇವಣಿಗೆ ಸರ್ಕಾರದ ತೆರಿಗೆ ನೀತಿ ಅನ್ವಯವಾಗುವುದಿಲ್ಲ. ಆದ್ದರಿಂದ ಬೇರೆಲ್ಲಾ ಯೋಜನೆಗಳಿಗಿಂತ ಈ ಯೋಜನೆಯು ಹೆಚ್ಚು ಅನುಕೂಲವಾಗಲಿದೆ.</p></li></ul>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<blockquote>ಭಾರತೀಯ ಅಂಚೆಯ ವಿವಿಧ ಯೋಜನೆಗಳಲ್ಲಿ ಸಾರ್ವಜನಿಕ ಭವಿಷ್ಯ ನಿಧಿ (PPF) ಒಂದಾಗಿದೆ. ಈ ಯೋಜನೆಯು ಹೆಚ್ಚು ಜನರಿಗೆ ಉಪಯೋಗವಾಗುವುದರೊಂದಿಗೆ ಹಣದ ಸುರಕ್ಷತೆ ಹಾಗೂ ಉತ್ತಮ ಬಡ್ಡಿಯ ದರವು ದೊರೆಯುತ್ತದೆ. ದೀರ್ಘಾವಧಿಯಲ್ಲಿ ಹಣವನ್ನು ಹೂಡಿಕೆ ಮಾಡಲು ಬಯಸಿದರೆ ಈ ಯೋಜನೆಯನ್ನು ಆಯ್ಕೆ ಮಾಡಬಹುದು.</blockquote>.<p>ಈ ಯೋಜನೆಯು ಸರ್ಕಾರದಿಂದ ಮಾನ್ಯತೆ ಪಡೆದಿದೆ. ಇದರಲ್ಲಿ ಹೂಡಿಕೆ ಮಾಡಿದ ಠೇವಣಿಗೆ ತೆರಿಗೆ ವಿನಾಯಿತಿ ಇರಲಿದೆ. ಈ ಯೋಜನೆಯ ಅವಧಿ 15 ವರ್ಷಗಳಾಗಿದೆ. ಹೂಡಿಕೆ ಮಾಡಿದ ಠೇವಣಿಯಿಂದ ಪ್ರತಿ ವರ್ಷ ಶೇ 7.1ರಷ್ಟು ಬಡ್ಡಿಯನ್ನು ಪಡೆಯಬಹುದು. ಇದರಲ್ಲಿ ₹500 ದಿಂದ ₹1.5 ಲಕ್ಷದ ವರೆಗೂ ಹೂಡಿಕೆಯನ್ನು ಮಾಡಬಹುದು. ಹೂಡಿಕೆಯನ್ನು 12 ಕಂತುಗಳಲ್ಲಿ ಅಥವಾ ವರ್ಷಕ್ಕೆ ಒಂದು ಕಂತಿನಲ್ಲಿ ಠೇವಣಿಯನ್ನು ಇಡುವ ಅವಕಾಶವಿದೆ.</p>.ದುಡಿಮೆಗಾಗಿ ವಾಹನ ಖರೀದಿಸಲು ಶೇ 75ರಷ್ಟು ಸಹಾಯಧನ: ಅರ್ಜಿ ಸಲ್ಲಿಸುವ ಬಗೆ ಹೇಗೆ?.<blockquote><strong>ಸಾರ್ವಜನಿಕ ಭವಿಷ್ಯ ನಿಧಿಯ (PPF) ಅವಧಿ</strong></blockquote>.<p>ಈ ಯೋಜನೆಯು 15 ವರ್ಷದ ಅವಧಿಯನ್ನು ಹೊಂದಿದೆ. ಈ ಅವಧಿಯು ಪೂರ್ಣಗೊಂಡ ನಂತರ 5 ವರ್ಷಗಳ ವರೆಗೆ ವಿಸ್ತರಿಸಲು ಅವಕಾಶವಿದೆ.</p>.<blockquote><strong>ಅಗತ್ಯ ಅರ್ಹತೆಗಳೇನು?</strong></blockquote>.<ul><li><p>ಭಾರತದ ಪ್ರಜೆಯಾಗಿರಬೇಕು.</p></li><li><p>18 ವರ್ಷದ ಒಳಗಿನವರ ಹೆಸರಿನಲ್ಲಿ ಖಾತೆಯನ್ನು ತೆರೆಯಬಹುದು. ಆದರೆ ಪೋಷಕರು ನಿರ್ವಹಣೆ ಮಾಡಬೇಕು.</p></li><li><p>ಅನಿವಾಸಿ ಭಾರತೀಯರು ಖಾತೆ ತೆರೆಯುವಂತಿಲ್ಲ.</p></li></ul>.ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿದೆ ಆಕರ್ಷಕ ಬಡ್ಡಿ: ಹೂಡಿಕೆ ಮಾಡುವುದು ಹೇಗೆ? .<blockquote><strong>ದೊರೆಯಲಿರುವ ಬಡ್ಡಿಯ ದರ ಎಷ್ಟು?</strong></blockquote>.<p>ಅಂಚೆ ಇಲಾಖೆಯು ಹೇಳಿರುವಂತೆ ಬಡ್ಡಿಯ ದರವು ವರ್ಷಕ್ಕೆ ಶೇ 7.1% ರಷ್ಟು ದೊರೆಯಲಿದೆ. ಪ್ರತಿ ಹಣಕಾಸು ವರ್ಷದ ಕೊನೆಯಲ್ಲಿ ಬಡ್ಡಿಯನ್ನು ಖಾತೆಗೆ ಜಮಾ ಮಾಡಲಾಗುತ್ತದೆ. ಈ ಯೋಜನೆಯಲ್ಲಿ ನೀಡಲಾಗುವ ಬಡ್ಡಿಯ ದರವನ್ನು ಸರ್ಕಾರವು 3 ತಿಂಗಳಿಗೊಮ್ಮೆ ಪರಿಷ್ಕರಣೆ ಮಾಡುತ್ತದೆ. </p>.<blockquote><strong>ಹೂಡಿಕೆಯನ್ನು ಹಿಂಪಡೆಯಲು ಸಾಧ್ಯವೇ?</strong></blockquote>.<ul><li><p>ಹೂಡಿಕೆ ಮಾಡಿದ 5ನೇ ವರ್ಷದಲ್ಲಿ ಆರೋಗ್ಯ ಸಮಸ್ಯೆ ಹಾಗೂ ಉನ್ನತ ಶಿಕ್ಷಣಕ್ಕಾಗಿ ಠೇವಣಿಯನ್ನು ಹಿಂಪಡೆಯಬಹುದು. </p></li><li><p>4ನೇ ವರ್ಷದ ಕೊನೆಯಲ್ಲಿ ಅಥವಾ 3ನೇ ವರ್ಷದ ಕೊನೆಯಲ್ಲಿ, ಠೇವಣಿಯ ಶೇ 50% ವರೆಗೆ ಹಿಂಪಡೆಯಬಹುದು.</p></li><li><p>ಅವಧಿಗೂ ಮುನ್ನ ಖಾತೆಯನ್ನು ಮುಚ್ಚಿದರೆ ಶೇ 1% ರಷ್ಟು ಬಡ್ಡಿಯನ್ನು ಕಡಿತಗೊಳಿಸಲಾಗುತ್ತದೆ. </p></li></ul>.<blockquote><strong>ಹೂಡಿಕೆದಾರ ಮೃತಪಟ್ಟರೇ?</strong></blockquote>.ಮಹಿಳಾ ಸಮ್ಮಾನ್ ಉಳಿತಾಯ ಯೋಜನೆ ಲಾಭಗಳೇನು? ಹೂಡಿಕೆಗೆ ಸಿಗಲಿದೆ ಅಧಿಕ ಬಡ್ಡಿದರ.. .<p>ಹೂಡಿಕೆ ಮಾಡುವ ವೇಳೆ ಯಾರ ಹೆಸರನ್ನು ನಾಮನಿರ್ದೇಶನ ಮಾಡಿರುತ್ತಾರೋ ಅವರಿಗೆ ಹಣ ದೊರೆಯಲಿದೆ. ಹೂಡಿಕೆದಾರ ಮೃತಪಟ್ಟರೆ ಖಾತೆಯನ್ನು ಮುಚ್ಚಲಾಗುತ್ತದೆ. ಸಾವಿನ ಕಾರಣದಿಂದಾಗಿ ಪಿಪಿಎಫ್ ಖಾತೆಯನ್ನು ಮುಚ್ಚುವ ಸಮಯದಲ್ಲಿ, ಖಾತೆಯನ್ನು ಮುಚ್ಚಿದ ಹಿಂದಿನ ತಿಂಗಳ ಅಂತ್ಯದವರೆಗೆ ಬಡ್ಡಿದರವನ್ನು ಪಾವತಿಸಲಾಗುತ್ತದೆ.</p>.<blockquote><strong>ಹೂಡಿಕೆಯ ಮೇಲೆ ಸಾಲ ಪಡೆಯಬಹುದೇ?</strong></blockquote>.<p>ಹೂಡಿಕೆ ಮಾಡಿದ 1 ವರ್ಷದಿಂದ 5 ವರ್ಷದ ನಡುವೆ ನಿಮ್ಮ ಠೇವಣಿಯ ಮೇಲೆ ಶೇ 25% ರಷ್ಟು ಸಾಲವನ್ನು ಪಡೆಯಬಹುದು. ಸಾಲ ಪಡೆದ 36 ತಿಂಗಳೊಳಗೆ ಮರುಪಾವತಿ ಮಾಡಿದರೆ ವಾರ್ಷಿಕ ಶೇ 1% ಬಡ್ಡಿ ಅನ್ವಯವಾಗಲಿದೆ. 36 ತಿಂಗಳ ನಂತರ ಪಾವತಿ ಮಾಡಿದರೆ ವಾರ್ಷಿಕ ಶೇ 6% ರ ಬಡ್ಡಿದರ ಅನ್ವಯವಾಗುತ್ತದೆ. ಸಾಲವನ್ನು ಮರುಪಾವತಿ ಮಾಡಿದ ನಂತರ ಪುನಃ ಸಾಲ ಪಡೆಯಬಹುದು. ಒಂದು ಹಣಕಾಸಿನ ವರ್ಷದಲ್ಲಿ ಒಂದು ಸಾಲ ಮಾತ್ರ ಪಡೆಯಲು ಅವಕಾಶವಿದೆ. </p>.<blockquote><strong>ಈ ಯೋಜನೆಯ ಪ್ರಯೋಜನವೇನು?</strong></blockquote>.<ul><li><p>ಹೂಡಿಕೆ ಮಾಡಿದ ಹಣವು ಹೆಚ್ಚು ಸುರಕ್ಷಿತವಾಗಿರುತ್ತದೆ.</p></li><li><p>ಬೇರೆ ಉಳಿತಾಯ ಯೋಜನೆಗಳಿಗೆ ಹೋಲಿಸಿದರೆ ಹೆಚ್ಚಿನ ಬಡ್ಡಿ ದೊರೆಯುತ್ತದೆ.</p></li><li><p>ಈ ಯೋಜನೆಯಲ್ಲಿ ಹೂಡಿಕೆ ಮಾಡಿದ ಠೇವಣಿಗೆ ಸರ್ಕಾರದ ತೆರಿಗೆ ನೀತಿ ಅನ್ವಯವಾಗುವುದಿಲ್ಲ. ಆದ್ದರಿಂದ ಬೇರೆಲ್ಲಾ ಯೋಜನೆಗಳಿಗಿಂತ ಈ ಯೋಜನೆಯು ಹೆಚ್ಚು ಅನುಕೂಲವಾಗಲಿದೆ.</p></li></ul>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>