ನಗರದ ಹೊರವಲಯದಲ್ಲಿರುವ ಅಲ್ಟಾಯರ್ ಕ್ರೀಡಾಂಗಣದಲ್ಲಿ ನಡೆದ ಟೂರ್ನಿಯ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಆಂಧ್ರಪ್ರದೇಶ ಬ್ಯಾಟಿಂಗ್ ಆಯ್ದುಕೊಂಡಿತು. ತಂಡದ ತಾರಾ ಆಟಗಾರ ಅಜಯಕುಮಾರ್ ರೆಡ್ಡಿ ಬೇಗ ನಿರ್ಗಮಿಸಿದರೂ, ವೆಂಕಟೇಶ್ವರ ರಾವ್ ತಂಡವನ್ನು ಆಧರಿಸಿದರು. ಕೇವಲ 65 ಎಸೆತಗಳಲ್ಲಿ 23 ಬೌಂಡರಿಗಳನ್ನು ಬಾರಿಸಿದ ಅವರು, ಮೂರನೇ ವಿಕೆಟ್ಗೆ ಟಿ. ದುರ್ಗಾರಾವ್ (47) ಅವರೊಂದಿಗೆ ತಂಡದ ಮೊತ್ತ 200ರ ಗಡಿ ದಾಟುವಂತೆ ಮಾಡಿದರು. ನಿಗದಿತ ಓವರ್ಗಳಲ್ಲಿ ಆಂಧ್ರಪ್ರದೇಶ ಮೂರು ವಿಕೆಟ್ ಕಳೆದುಕೊಂಡು 246 ರನ್ ಪೇರಿಸಿತು.