<p><strong>ಲಂಡನ್:</strong> ವಿಶ್ವಕಪ್ನಲ್ಲಿ ಬಾಂಗ್ಲಾದೇಶ ಎಂಟನೇ ಸ್ಥಾನ ಪಡೆದಿದ್ದನ್ನು ಅನುಸರಿಸಿ, ಸ್ಟೀವ್ ರೋಡ್ಸ್ ಅವರನ್ನು ಅವಧಿಗಿಂತ ಮೊದಲೇ ಮುಖ್ಯ ಕೋಚ್ ಹುದ್ದೆಯಿಂದ ಕೈಬಿಡಲು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ನಿರ್ಧರಿಸಿದೆ.</p>.<p>ವೇಗದ ಬೌಲಿಂಗ್ ಕೋಚ್ ಕೋರ್ಟ್ನಿ ವಾಲ್ಷ್ ಮತ್ತು ಸ್ಪಿನ್ ಬೌಲಿಂಗ್ ಕೋಚ್ ಸುನೀಲ್ ಜೋಶಿ ಅವರ ಗುತ್ತಿಗೆ ಅವಧಿ ಯನ್ನೂ ಮುಂದುವರಿಸದಿರಲು ತೀರ್ಮಾನಿಸಲಾಗಿದೆ. ವಿಂಡೀಸ್ ವೇಗಿ ವಾಲ್ಷ್ 2016ರ ಆಗಸ್ಟ್ನಲ್ಲಿ ನೇಮಕಗೊಂಡಿದ್ದರೆ, ಜೋಶಿ, 2017ರ ಆಗಸ್ಟ್ನಲ್ಲಿ ಜವಾಬ್ದಾರಿ ವಹಿಸಿಕೊಂಡಿದ್ದರು.</p>.<p>ಬಾಂಗ್ಲಾ,ಸೆಮಿಫೈನಲ್ ತಲು ಪದಿದ್ದರೂ, ಸ್ಫೂರ್ತಿಯುತ ಹೋರಾಟದಿಂದ ಕ್ರಿಕೆಟ್ಪ್ರಿಯರ ಹೃದಯಗೆದ್ದಿತ್ತು. ದಕ್ಷಿಣ ಆಫ್ರಿಕ, ವೆಸ್ಟ್ ಇಂಡೀಸ್ ವಿರುದ್ಧ ಸ್ಮರಣೀಯ ಗೆಲುವು ದಾಖಲಿಸಿತ್ತು.</p>.<p>‘ಪಾಕ್ ತಂಡದ ವಿರುದ್ಧದ ಪಂದ್ಯದ ನಂತರ ಮಂಡಳಿಯಿಂದ ಪರಾಮರ್ಶೆ ಸಭೆ ನಡೆದಿತ್ತು. ಆಲ್ಲಿ ಒಪ್ಪಂದ ಮುಂದುವರಿಸದಿರಲು ತೀರ್ಮಾನಿಸಲಾಯಿತು. ಪರಸ್ಪರರ ಸಮ್ಮತಿ ಮೇರೆಗೆ ಈ ನಿರ್ಧಾರಕ್ಕೆ ಬರಲಾಯಿತು. ಶ್ರೀಲಂಕಾ ವಿರುದ್ಧ ಸರಣಿಗೆ ಹೊಸ ಕೋಚ್ ತೀರ್ಮಾನ ಇನ್ನೂ ಆಗಿಲ್ಲ’ ಎಂದು ಬಿಸಿಬಿ ಸಿಇಒ ನಿಜಾಮುದ್ದೀನ್ ಚೌಧರಿ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಂಡನ್:</strong> ವಿಶ್ವಕಪ್ನಲ್ಲಿ ಬಾಂಗ್ಲಾದೇಶ ಎಂಟನೇ ಸ್ಥಾನ ಪಡೆದಿದ್ದನ್ನು ಅನುಸರಿಸಿ, ಸ್ಟೀವ್ ರೋಡ್ಸ್ ಅವರನ್ನು ಅವಧಿಗಿಂತ ಮೊದಲೇ ಮುಖ್ಯ ಕೋಚ್ ಹುದ್ದೆಯಿಂದ ಕೈಬಿಡಲು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ನಿರ್ಧರಿಸಿದೆ.</p>.<p>ವೇಗದ ಬೌಲಿಂಗ್ ಕೋಚ್ ಕೋರ್ಟ್ನಿ ವಾಲ್ಷ್ ಮತ್ತು ಸ್ಪಿನ್ ಬೌಲಿಂಗ್ ಕೋಚ್ ಸುನೀಲ್ ಜೋಶಿ ಅವರ ಗುತ್ತಿಗೆ ಅವಧಿ ಯನ್ನೂ ಮುಂದುವರಿಸದಿರಲು ತೀರ್ಮಾನಿಸಲಾಗಿದೆ. ವಿಂಡೀಸ್ ವೇಗಿ ವಾಲ್ಷ್ 2016ರ ಆಗಸ್ಟ್ನಲ್ಲಿ ನೇಮಕಗೊಂಡಿದ್ದರೆ, ಜೋಶಿ, 2017ರ ಆಗಸ್ಟ್ನಲ್ಲಿ ಜವಾಬ್ದಾರಿ ವಹಿಸಿಕೊಂಡಿದ್ದರು.</p>.<p>ಬಾಂಗ್ಲಾ,ಸೆಮಿಫೈನಲ್ ತಲು ಪದಿದ್ದರೂ, ಸ್ಫೂರ್ತಿಯುತ ಹೋರಾಟದಿಂದ ಕ್ರಿಕೆಟ್ಪ್ರಿಯರ ಹೃದಯಗೆದ್ದಿತ್ತು. ದಕ್ಷಿಣ ಆಫ್ರಿಕ, ವೆಸ್ಟ್ ಇಂಡೀಸ್ ವಿರುದ್ಧ ಸ್ಮರಣೀಯ ಗೆಲುವು ದಾಖಲಿಸಿತ್ತು.</p>.<p>‘ಪಾಕ್ ತಂಡದ ವಿರುದ್ಧದ ಪಂದ್ಯದ ನಂತರ ಮಂಡಳಿಯಿಂದ ಪರಾಮರ್ಶೆ ಸಭೆ ನಡೆದಿತ್ತು. ಆಲ್ಲಿ ಒಪ್ಪಂದ ಮುಂದುವರಿಸದಿರಲು ತೀರ್ಮಾನಿಸಲಾಯಿತು. ಪರಸ್ಪರರ ಸಮ್ಮತಿ ಮೇರೆಗೆ ಈ ನಿರ್ಧಾರಕ್ಕೆ ಬರಲಾಯಿತು. ಶ್ರೀಲಂಕಾ ವಿರುದ್ಧ ಸರಣಿಗೆ ಹೊಸ ಕೋಚ್ ತೀರ್ಮಾನ ಇನ್ನೂ ಆಗಿಲ್ಲ’ ಎಂದು ಬಿಸಿಬಿ ಸಿಇಒ ನಿಜಾಮುದ್ದೀನ್ ಚೌಧರಿ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>