<p><strong>ಬೆಂಗಳೂರು:</strong> ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧವೂ 'ಟಿಕ್ ದಿ ನೋಟ್ಬುಕ್' ಸಂಭ್ರಮವನ್ನು ಆಚರಿಸಿರುವ ಲಖನೌ ಸೂಪರ್ ಜೈಂಟ್ಸ್ ತಂಡದ ಲೆಗ್ ಸ್ಪಿನ್ನರ್ ದಿಗ್ವೇಶ್ ರಾಠಿ ಆರ್ಸಿಬಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. </p><p>ನೋಟ್ಬುಕ್ ಸಂಭ್ರಮದ ಮೂಲಕ ಪರ ಹಾಗೂ ವಿರೋಧ ಅಭಿಮಾನಿಗಳನ್ನು ಕಟ್ಟಿಕೊಂಡಿರುವ ದಿಗ್ವೇಶ್ ಈಗಾಗಲೇ ತಮ್ಮ ಅಶಿಸ್ತಿನ ವರ್ತನೆಗಾಗಿ ಐಪಿಎಲ್ನಿಂದ ದಂಡನೆಗೂ ಒಳಗಾಗಿದ್ದಾರೆ. </p><p>ಪಂದ್ಯದ ನಿರ್ಣಾಯಕ ಹಂತದಲ್ಲಿ ಆರ್ಸಿಬಿ ತಂಡದ ಉಸ್ತುವಾರಿ ನಾಯಕ ಜಿತೇಶ್ ಶರ್ಮಾ 49 ರನ್ ಗಳಿಸಿದ್ದಾಗ ಅವರನ್ನು ಔಟ್ ಮಾಡುವಲ್ಲಿ ದಿಗ್ವೇಶ್ ಯಶಸ್ವಿಯಾಗಿದ್ದರು. ತಕ್ಷಣವೇ ಎಂದಿನಂತೆ ಮೈದಾನದಲ್ಲಿ ಸಹಿ ಹಾಕುವ ಮೂಲಕ ನೋಟ್ಬುಕ್ ಸಂಭ್ರಮವನ್ನು ಆಚರಿಸಿದರು. </p><p>ಆದರೆ ಆ ಎಸೆತ ನೋ ಬಾಲ್ ಆಗಿದ್ದರಿಂದ ಜಿತೇಶ್ ಜೀವದಾನ ಪಡೆದರು. ಇದರಿಂದ ದಿಗ್ವೇಶ್ ತೀವ್ರ ನಿರಾಸೆಗೆ ಒಳಗಾದರು. ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಟ್ರೋಲ್ಗೆ ಒಳಪಡಿಸಲಾಗಿದೆ. ದಿಗ್ವೇಶ್ ರಾಠಿ ಚೆಕ್ ಬೌನ್ಸ್ ಆಯಿತು ಎಂದು ಅಭಿಮಾನಿಗಳು ವ್ಯಂಗ್ಯವಾಡಿದ್ದಾರೆ. </p><p>ಆನಂತರದ ಪ್ರಕರಣದಲ್ಲಿ ಜಿತೇಶ್ ಶರ್ಮಾ ಅವರನ್ನು ದಿಗ್ವೇಶ್ ರಾಠಿಯವರು 'ನಾನ್ಸ್ಟ್ರೈಕರ್ ರನ್ಔಟ್' ಮಾಡಲು ಯತ್ನಿಸಿದರು. ಮೂರನೇ ಅಂಪೈರ್ ಮರುಪರಿಶೀಲನೆಯಲ್ಲಿ ಜಿತೇಶ್ ಅವರು ಕ್ರೀಸ್ ದಾಟುವ ಮುನ್ನ ದಿಗ್ವೇಶ್ ಹೆಜ್ಜೆ (ಸ್ಟ್ರೈಡ್) ಪೂರ್ಣಗೊಳಿಸಿದ್ದರು. ಆದ್ದರಿಂದ ಮೂರನೇ ಅಂಪೈರ್ ಕೂಡ ನಾಟ್ಔಟ್ ತೋರಿಸಿದರು. ಆದರೆ ಈ ಹೊತ್ತಿನಲ್ಲಿಯೇ ಪಂತ್ ಅವರು ಮನವಿಯನ್ನು ಹಿಂಪಡೆದರು. ಆ ಮೂಲಕ ದಿಗ್ವೇಶ್ ಮಗದೊಮ್ಮೆ ಮುಜುಗರಕ್ಕೆ ಒಳಗಾದರು. </p><p>ಒಟ್ಟಿನಲ್ಲಿ ಈ ಬಾರಿಯ ಐಪಿಎಲ್ನಲ್ಲಿ ತಾವು ಪಡೆಯುವ ಸಂಭಾವನೆಯಲ್ಲಿ ಬಹುಪಾಲನ್ನು ಭಾರಿ ದಂಡ ತೆರುವ ಮೂಲಕ ಕಳೆದುಕೊಂಡಿರುವ ದಿಗ್ವೇಶ್ ವರ್ತನೆ ಮೈದಾನದ ಒಳಗೆ ಹಾಗೂ ಹೊರಗಡೆ ಹೆಚ್ಚಿನ ಚರ್ಚೆಗೆ ಗ್ರಾಸವಾಯಿತು. </p><p><strong><a href="https://www.iplt20.com/video/63640/jitesh-vs-digvesh-a-rollercoaster-of-despair-drama-elation">ಈ ಎರಡೂ ಘಟನೆಗಳ ವಿಡಿಯೊವನ್ನು ಬಿಸಿಸಿಐ ಹಂಚಿಕೊಂಡಿದ್ದು, ವೀಕ್ಷಣೆಗಾಗಿ ಇಲ್ಲಿ ಕ್ಲಿಕ್ಕಿಸಿ...</a></strong></p>.ದಂಡ ಬಿದ್ದರೂ ಕ್ಯಾರೇ ಅನ್ನದ ರಾಠಿ; ಶ್ರೇಯಸ್ ಔಟ್ ಮಾಡಿ ಮತ್ತೆ ನೋಟ್ಬುಕ್ ಸಂಭ್ರಮ.ಪಂತ್ ಔಟ್ ಮನವಿ ಹಿಂಪಡೆದದ್ದು ಬೌಲರ್ಗೆ ಮಾಡಿದ ಅಪಮಾನ: ಅಶ್ವಿನ್.IPL, RCB vs PBKS |ಕ್ವಾಲಿಫೈಯರ್ ಇಂದು: ಫೈನಲ್ ಪ್ರವೇಶದತ್ತ ಬೆಂಗಳೂರು ಚಿತ್ತ.RCB Dream | ಐಪಿಎಲ್ 18ರ ಹರೆಯ, ವಿರಾಟ್ ಅದೃಷ್ಟ ಸಂಖ್ಯೆಯೂ 18; ಈ ಸಲ..?.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧವೂ 'ಟಿಕ್ ದಿ ನೋಟ್ಬುಕ್' ಸಂಭ್ರಮವನ್ನು ಆಚರಿಸಿರುವ ಲಖನೌ ಸೂಪರ್ ಜೈಂಟ್ಸ್ ತಂಡದ ಲೆಗ್ ಸ್ಪಿನ್ನರ್ ದಿಗ್ವೇಶ್ ರಾಠಿ ಆರ್ಸಿಬಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. </p><p>ನೋಟ್ಬುಕ್ ಸಂಭ್ರಮದ ಮೂಲಕ ಪರ ಹಾಗೂ ವಿರೋಧ ಅಭಿಮಾನಿಗಳನ್ನು ಕಟ್ಟಿಕೊಂಡಿರುವ ದಿಗ್ವೇಶ್ ಈಗಾಗಲೇ ತಮ್ಮ ಅಶಿಸ್ತಿನ ವರ್ತನೆಗಾಗಿ ಐಪಿಎಲ್ನಿಂದ ದಂಡನೆಗೂ ಒಳಗಾಗಿದ್ದಾರೆ. </p><p>ಪಂದ್ಯದ ನಿರ್ಣಾಯಕ ಹಂತದಲ್ಲಿ ಆರ್ಸಿಬಿ ತಂಡದ ಉಸ್ತುವಾರಿ ನಾಯಕ ಜಿತೇಶ್ ಶರ್ಮಾ 49 ರನ್ ಗಳಿಸಿದ್ದಾಗ ಅವರನ್ನು ಔಟ್ ಮಾಡುವಲ್ಲಿ ದಿಗ್ವೇಶ್ ಯಶಸ್ವಿಯಾಗಿದ್ದರು. ತಕ್ಷಣವೇ ಎಂದಿನಂತೆ ಮೈದಾನದಲ್ಲಿ ಸಹಿ ಹಾಕುವ ಮೂಲಕ ನೋಟ್ಬುಕ್ ಸಂಭ್ರಮವನ್ನು ಆಚರಿಸಿದರು. </p><p>ಆದರೆ ಆ ಎಸೆತ ನೋ ಬಾಲ್ ಆಗಿದ್ದರಿಂದ ಜಿತೇಶ್ ಜೀವದಾನ ಪಡೆದರು. ಇದರಿಂದ ದಿಗ್ವೇಶ್ ತೀವ್ರ ನಿರಾಸೆಗೆ ಒಳಗಾದರು. ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಟ್ರೋಲ್ಗೆ ಒಳಪಡಿಸಲಾಗಿದೆ. ದಿಗ್ವೇಶ್ ರಾಠಿ ಚೆಕ್ ಬೌನ್ಸ್ ಆಯಿತು ಎಂದು ಅಭಿಮಾನಿಗಳು ವ್ಯಂಗ್ಯವಾಡಿದ್ದಾರೆ. </p><p>ಆನಂತರದ ಪ್ರಕರಣದಲ್ಲಿ ಜಿತೇಶ್ ಶರ್ಮಾ ಅವರನ್ನು ದಿಗ್ವೇಶ್ ರಾಠಿಯವರು 'ನಾನ್ಸ್ಟ್ರೈಕರ್ ರನ್ಔಟ್' ಮಾಡಲು ಯತ್ನಿಸಿದರು. ಮೂರನೇ ಅಂಪೈರ್ ಮರುಪರಿಶೀಲನೆಯಲ್ಲಿ ಜಿತೇಶ್ ಅವರು ಕ್ರೀಸ್ ದಾಟುವ ಮುನ್ನ ದಿಗ್ವೇಶ್ ಹೆಜ್ಜೆ (ಸ್ಟ್ರೈಡ್) ಪೂರ್ಣಗೊಳಿಸಿದ್ದರು. ಆದ್ದರಿಂದ ಮೂರನೇ ಅಂಪೈರ್ ಕೂಡ ನಾಟ್ಔಟ್ ತೋರಿಸಿದರು. ಆದರೆ ಈ ಹೊತ್ತಿನಲ್ಲಿಯೇ ಪಂತ್ ಅವರು ಮನವಿಯನ್ನು ಹಿಂಪಡೆದರು. ಆ ಮೂಲಕ ದಿಗ್ವೇಶ್ ಮಗದೊಮ್ಮೆ ಮುಜುಗರಕ್ಕೆ ಒಳಗಾದರು. </p><p>ಒಟ್ಟಿನಲ್ಲಿ ಈ ಬಾರಿಯ ಐಪಿಎಲ್ನಲ್ಲಿ ತಾವು ಪಡೆಯುವ ಸಂಭಾವನೆಯಲ್ಲಿ ಬಹುಪಾಲನ್ನು ಭಾರಿ ದಂಡ ತೆರುವ ಮೂಲಕ ಕಳೆದುಕೊಂಡಿರುವ ದಿಗ್ವೇಶ್ ವರ್ತನೆ ಮೈದಾನದ ಒಳಗೆ ಹಾಗೂ ಹೊರಗಡೆ ಹೆಚ್ಚಿನ ಚರ್ಚೆಗೆ ಗ್ರಾಸವಾಯಿತು. </p><p><strong><a href="https://www.iplt20.com/video/63640/jitesh-vs-digvesh-a-rollercoaster-of-despair-drama-elation">ಈ ಎರಡೂ ಘಟನೆಗಳ ವಿಡಿಯೊವನ್ನು ಬಿಸಿಸಿಐ ಹಂಚಿಕೊಂಡಿದ್ದು, ವೀಕ್ಷಣೆಗಾಗಿ ಇಲ್ಲಿ ಕ್ಲಿಕ್ಕಿಸಿ...</a></strong></p>.ದಂಡ ಬಿದ್ದರೂ ಕ್ಯಾರೇ ಅನ್ನದ ರಾಠಿ; ಶ್ರೇಯಸ್ ಔಟ್ ಮಾಡಿ ಮತ್ತೆ ನೋಟ್ಬುಕ್ ಸಂಭ್ರಮ.ಪಂತ್ ಔಟ್ ಮನವಿ ಹಿಂಪಡೆದದ್ದು ಬೌಲರ್ಗೆ ಮಾಡಿದ ಅಪಮಾನ: ಅಶ್ವಿನ್.IPL, RCB vs PBKS |ಕ್ವಾಲಿಫೈಯರ್ ಇಂದು: ಫೈನಲ್ ಪ್ರವೇಶದತ್ತ ಬೆಂಗಳೂರು ಚಿತ್ತ.RCB Dream | ಐಪಿಎಲ್ 18ರ ಹರೆಯ, ವಿರಾಟ್ ಅದೃಷ್ಟ ಸಂಖ್ಯೆಯೂ 18; ಈ ಸಲ..?.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>