<p><strong>ಕೋಲ್ಕತ್ತ:</strong> ತರಬೇತಿ ಶಿಬಿರಗಳು ಆರಂಭವಾದ ಬಳಿಕ ಸೀನಿಯರ್ ಹಾಗೂ 23 ವರ್ಷದೊಳಗಿನವರ ತಂಡಗಳ ಆಟಗಾರರನ್ನು ಕಡ್ಡಾಯವಾಗಿ ನೇತ್ರ ತಪಾಸಣೆಗೆ ಒಳಪಡಿಸಲು ಬಂಗಾಳ ಕ್ರಿಕೆಟ್ ಸಂಸ್ಥೆಯು (ಸಿಎಬಿ) ನಿರ್ಧರಿಸಿದೆ.</p>.<p>ಸಿಎಬಿ ಅಧಿಕಾರಿಗಳು ಹಾಗೂ ಕೋಚ್ಗಳ ನಡುವೆ ಮಂಗಳವಾರ ನಡೆದ ಚರ್ಚೆಯ ವೇಳೆ ಮುಖ್ಯ ಕೋಚ್ ಅರುಣ್ ಲಾಲ್ ಅವರು ಈ ವಿಷಯ ಪ್ರಸ್ತಾಪಿಸಿದರು. ಇದಕ್ಕೆ ಎಲ್ಲರೂ ಸಮ್ಮತಿ ಸೂಚಿಸಿದ್ದಾರೆ.</p>.<p>‘ಲಾಕ್ಡೌನ್ನಿಂದಾಗಿ ಆಟಗಾರರು ಸುಮಾರು ಎರಡೂವರೆ ತಿಂಗಳುಗಳಿಂದಲೂ ಮನೆಯಲ್ಲೇ ಇದ್ದಾರೆ. ಅವರು ತರಬೇತಿಗೆ ಮರಳಿದ ಬಳಿಕ ದೃಷ್ಟಿಯ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿಯೇ ಎಲ್ಲರಿಗೂ ಕಡ್ಡಾಯವಾಗಿ ಕಣ್ಣಿನ ಪರೀಕ್ಷೆ ನಡೆಸಲು ತೀರ್ಮಾನಿಸಿದ್ದೇವೆ’ ಎಂದು ಸಿಎಬಿ ಅಧ್ಯಕ್ಷ ಅಭಿಷೇಕ್ ದಾಲ್ಮಿಯಾ ತಿಳಿಸಿದ್ದಾರೆ.</p>.<p>‘ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಮಾರ್ಗಸೂಚಿಗಳನ್ನು ಎದುರು ನೋಡುತ್ತಿದ್ದೇವೆ. ಆಟಗಾರರು ಹಾಗೂ ನೆರವು ಸಿಬ್ಬಂದಿಯ ಸುರಕ್ಷತೆ ನಮ್ಮ ಆದ್ಯತೆಯಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ನಾವು ಕೂಡ ಮಾರ್ಗಸೂಚಿ ಸಿದ್ಧಪಡಿಸುತ್ತಿದ್ದೇವೆ’ ಎಂದೂ ಅವರು ಹೇಳಿದ್ದಾರೆ.</p>.<p>‘ಕ್ರಿಕೆಟ್ನಲ್ಲಿ ಕೈ ಮತ್ತು ಕಣ್ಣಿನ ಸಮನ್ವಯ ಬಹಳ ಅಗತ್ಯ. ದೃಷ್ಟಿ ದೋಷವಿದ್ದರೆ ಚೆಂಡನ್ನು ಗುರುತಿಸುವುದು ಕಷ್ಟವಾಗಲಿದೆ.ಹೀಗಾಗಿ ಎಲ್ಲರೂ ಕಣ್ಣಿನ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ. ಇದು ಸ್ವಾಗತಾರ್ಹ ನಿರ್ಧಾರ’ ಎಂದು ಹಿರಿಯ ಕ್ರಿಕೆಟಿಗ ದೀಪ್ದಾಸ್ ಗುಪ್ತಾ ನುಡಿದಿದ್ದಾರೆ.</p>.<p>‘ಪಂದ್ಯದ ವೇಳೆ ಆಟಗಾರರು ಸುಲಭವಾಗಿ ಕ್ಯಾಚ್ಗಳನ್ನು ಕೈಚೆಲ್ಲುತ್ತಾರೆ. ತಮ್ಮತ್ತ ಸಾಗಿಬಂದ ಚೆಂಡನ್ನು ಬೇಗನೆ ಗುರುತಿಸುವಲ್ಲಿ ಎಡವುತ್ತಾರೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದಲೇ ನೇತ್ರ ತಪಾಸಣೆಯನ್ನು ಕಡ್ಡಾಯ ಮಾಡಿದ್ದೇವೆ’ ಎಂದು ಸಿಎಬಿಯ ಕ್ರಿಕೆಟ್ ಆಪರೇಷನ್ಸ್ ವಿಭಾಗದ ಮ್ಯಾನೇಜರ್ ಜಾಯ್ದೀಪ್ ಮುಖರ್ಜಿ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಲ್ಕತ್ತ:</strong> ತರಬೇತಿ ಶಿಬಿರಗಳು ಆರಂಭವಾದ ಬಳಿಕ ಸೀನಿಯರ್ ಹಾಗೂ 23 ವರ್ಷದೊಳಗಿನವರ ತಂಡಗಳ ಆಟಗಾರರನ್ನು ಕಡ್ಡಾಯವಾಗಿ ನೇತ್ರ ತಪಾಸಣೆಗೆ ಒಳಪಡಿಸಲು ಬಂಗಾಳ ಕ್ರಿಕೆಟ್ ಸಂಸ್ಥೆಯು (ಸಿಎಬಿ) ನಿರ್ಧರಿಸಿದೆ.</p>.<p>ಸಿಎಬಿ ಅಧಿಕಾರಿಗಳು ಹಾಗೂ ಕೋಚ್ಗಳ ನಡುವೆ ಮಂಗಳವಾರ ನಡೆದ ಚರ್ಚೆಯ ವೇಳೆ ಮುಖ್ಯ ಕೋಚ್ ಅರುಣ್ ಲಾಲ್ ಅವರು ಈ ವಿಷಯ ಪ್ರಸ್ತಾಪಿಸಿದರು. ಇದಕ್ಕೆ ಎಲ್ಲರೂ ಸಮ್ಮತಿ ಸೂಚಿಸಿದ್ದಾರೆ.</p>.<p>‘ಲಾಕ್ಡೌನ್ನಿಂದಾಗಿ ಆಟಗಾರರು ಸುಮಾರು ಎರಡೂವರೆ ತಿಂಗಳುಗಳಿಂದಲೂ ಮನೆಯಲ್ಲೇ ಇದ್ದಾರೆ. ಅವರು ತರಬೇತಿಗೆ ಮರಳಿದ ಬಳಿಕ ದೃಷ್ಟಿಯ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿಯೇ ಎಲ್ಲರಿಗೂ ಕಡ್ಡಾಯವಾಗಿ ಕಣ್ಣಿನ ಪರೀಕ್ಷೆ ನಡೆಸಲು ತೀರ್ಮಾನಿಸಿದ್ದೇವೆ’ ಎಂದು ಸಿಎಬಿ ಅಧ್ಯಕ್ಷ ಅಭಿಷೇಕ್ ದಾಲ್ಮಿಯಾ ತಿಳಿಸಿದ್ದಾರೆ.</p>.<p>‘ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಮಾರ್ಗಸೂಚಿಗಳನ್ನು ಎದುರು ನೋಡುತ್ತಿದ್ದೇವೆ. ಆಟಗಾರರು ಹಾಗೂ ನೆರವು ಸಿಬ್ಬಂದಿಯ ಸುರಕ್ಷತೆ ನಮ್ಮ ಆದ್ಯತೆಯಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ನಾವು ಕೂಡ ಮಾರ್ಗಸೂಚಿ ಸಿದ್ಧಪಡಿಸುತ್ತಿದ್ದೇವೆ’ ಎಂದೂ ಅವರು ಹೇಳಿದ್ದಾರೆ.</p>.<p>‘ಕ್ರಿಕೆಟ್ನಲ್ಲಿ ಕೈ ಮತ್ತು ಕಣ್ಣಿನ ಸಮನ್ವಯ ಬಹಳ ಅಗತ್ಯ. ದೃಷ್ಟಿ ದೋಷವಿದ್ದರೆ ಚೆಂಡನ್ನು ಗುರುತಿಸುವುದು ಕಷ್ಟವಾಗಲಿದೆ.ಹೀಗಾಗಿ ಎಲ್ಲರೂ ಕಣ್ಣಿನ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ. ಇದು ಸ್ವಾಗತಾರ್ಹ ನಿರ್ಧಾರ’ ಎಂದು ಹಿರಿಯ ಕ್ರಿಕೆಟಿಗ ದೀಪ್ದಾಸ್ ಗುಪ್ತಾ ನುಡಿದಿದ್ದಾರೆ.</p>.<p>‘ಪಂದ್ಯದ ವೇಳೆ ಆಟಗಾರರು ಸುಲಭವಾಗಿ ಕ್ಯಾಚ್ಗಳನ್ನು ಕೈಚೆಲ್ಲುತ್ತಾರೆ. ತಮ್ಮತ್ತ ಸಾಗಿಬಂದ ಚೆಂಡನ್ನು ಬೇಗನೆ ಗುರುತಿಸುವಲ್ಲಿ ಎಡವುತ್ತಾರೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದಲೇ ನೇತ್ರ ತಪಾಸಣೆಯನ್ನು ಕಡ್ಡಾಯ ಮಾಡಿದ್ದೇವೆ’ ಎಂದು ಸಿಎಬಿಯ ಕ್ರಿಕೆಟ್ ಆಪರೇಷನ್ಸ್ ವಿಭಾಗದ ಮ್ಯಾನೇಜರ್ ಜಾಯ್ದೀಪ್ ಮುಖರ್ಜಿ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>