<p><strong>ಪೊಷೆಸ್ಟ್ರೂಮ್:</strong>ಬಾಂಗ್ಲಾದೇಶ ತಂಡದ ಆಟಗಾರರು 19 ವರ್ಷದೊಳಗಿನವರ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತದ ಎದುರು ಗೆಲುವು ಸಾಧಿಸಿದ ಬಳಿಕ ಆಕ್ರಮಣಕಾರಿಯಾಗಿ ಸಂಭ್ರಮಾಚರಣೆ ನಡೆಸಿದ್ದನ್ನು ಐಸಿಸಿ ಗಂಭೀರವಾಗಿ ಪರಿಗಣಿಸಿದೆ ಎಂದು ಟೀಂ ಇಂಡಿಯಾ ವ್ಯವಸ್ಥಾಪಕ ಅನಿಲ್ ಪಟೇಲ್ ಹೇಳಿದ್ದಾರೆ.</p>.<p>‘ಆ ಕ್ಷಣ ಏನಾಯಿತು ಎಂಬುದು ನಿಜವಾಗಿಯೂ ಗೊತ್ತಾಗಲಿಲ್ಲ’ ಎಂದಿರುವ ಪಟೇಲ್, ‘ಖಂಡಿತಾ ಪ್ರತಿಯೊಬ್ಬರಿಗೂ ಗಾಬರಿಯಾಯಿತು. ಆದರೆ, ಏನಾಯಿತು ಎಂದು ಖಚಿತವಾಗಿ ನಮಗೆ ಗೊತ್ತಾಗಲಿಲ್ಲ. ಐಸಿಸಿಯ ಅಧಿಕಾರಿಗಳು ಪಂದ್ಯದ ಕೊನೆಯ ಕೆಲ ಹೊತ್ತಿನ ವಿಡಿಯೊಗಳನ್ನು ಪರಿಶೀಲಿಸಿದ ಬಳಿಕ ನಮಗೂ ವಾಸ್ತವವನ್ನು ತಿಳಿಸಲಿದ್ದಾರೆ’ ಎಂದು ಹೇಳಿದ್ದಾರೆ.</p>.<p>ಬಾಂಗ್ಲಾ ತಂಡದ ಕೆಲವು ಆಟಗಾರರುಸಂಭ್ರಮಾಚರಣೆ ಭರದಲ್ಲಿ ಉದ್ಧಟತನದಿಂದ ವರ್ತಿಸಿದ್ದರು. ಆ ತಂಡದ ನಾಯಕ ಅಕ್ಬರ್ ಅಲಿ, ‘ಇದೊಂದು ದುರದೃಷ್ಟಕರ ಘಟನೆ’ ಎನ್ನುವ ಮೂಲಕಘಟನೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ಬಾಂಗ್ಲಾ ವರ್ತನೆಯನ್ನು ಖಂಡಿಸಿದ್ದ ಭಾರತ ತಂಡದ ನಾಯಕ ಪ್ರಿಯಂ ಗರ್ಗ್, ‘ಇದು ಅಸಹ್ಯಕರ’ ಎಂದು ಕಿಡಿ ಕಾರಿದ್ದರು.</p>.<p><strong>ಇದನ್ನೂ ಓದಿ:</strong><a href="https://www.prajavani.net/stories/national/cricket-under-19-worldcup-2020-clash-bangla-vs-india-704235.html" target="_blank">ಯುವ ವಿಶ್ವಕಪ್ | ಟ್ರೋಫಿಗೆದ್ದ ನಂತರ ಉದ್ಧಟತನ ತೋರಿದ ಬಾಂಗ್ಲಾ</a></p>.<p><strong>ಆರಂಭದಿಂದಲೂ ಕಿರಿಕ್</strong><br />ಟಾಸ್ ಗೆದ್ದರೂ ಭಾರತವನ್ನು ಮೊದಲು ಬ್ಯಾಟಿಂಗ್ಗೆಆಹ್ವಾನಿಸಿದ ಬಾಂಗ್ಲಾ ತಂಡ ಆರಂಭದಿಂದಲೂ ಆಕ್ರಮಣಕಾರಿಯಾಗಿಯೇ ಕಾಣಿಸಿಕೊಂಡಿತು. ಆ ತಂಡದ ಫೀಲ್ಡರ್ಗಳು ಮತ್ತು ಬೌಲರ್ಗಳುಸ್ಲೆಡ್ಜಿಂಗ್ ತಂತ್ರ ಅನುಸರಿಸಿದರು.ಅದರಲ್ಲೂ ವೇಗದ ಬೌಲರ್ ಶೋರಿಫುಲ್ ಇಸ್ಲಾಂ ಪ್ರತಿ ಎಸೆತದ ಬಳಿಕವೂ ಭಾರತದ ಬ್ಯಾಟ್ಸ್ಮನ್ಗಳನ್ನು ಮಾತಿನ ಮೂಲಕ (ಸ್ಲೆಡ್ಜಿಂಗ್) ಕೆಣಕುತ್ತಿದ್ದರು.</p>.<p>ಹೀಗಾಗಿ ಕೆಲ ಕ್ರಿಕೆಟ್ ವಿಶ್ಲೇಷಕರು, ‘ಎದುರಾಳಿಗಳ ಮಾತಿನತ್ತ ಗಮನ ಹರಿಸಿದ್ದರಿಂದಾಗಿಯೇ ಭಾರತ ಹೆಚ್ಚು ರನ್ ಗಳಿಸಲು ಸಾಧ್ಯವಾಗಿಲ್ಲ’ ಎಂದು ವಿಶ್ಲೇಷಿಸಿದ್ದರು.</p>.<p>ಪಂದ್ಯದಲ್ಲಿಭಾರತ ಅಲ್ಪಮೊತ್ತಕ್ಕೆ ಕುಸಿದಿತ್ತು. ಆರಂಭಿಕ ಬ್ಯಾಟ್ಸ್ಮನ್ ಯಶಸ್ವಿ ಜೈಸ್ವಾಲ್ 88 ರನ್ ಗಳಿಸಿ ನೆರವಾಗಿದ್ದರು. ಅವರ ಆಟದ ಹೊರತಾಗಿಯೂ ಗರ್ಗ್ ಪಡೆಕೇವಲ 177 ರನ್ಗಳಿಗೆ ಆಲೌಟ್ ಆಗಿತ್ತು. ಈ ಮೊತ್ತ ಬೆನ್ನಟ್ಟಿದ ಬಾಂಗ್ಲಾ ತಂಡ 42.1 ಓವರ್ಗಳಲ್ಲಿ 170 ರನ್ ಗಳಿಸಿದ್ದಾಗ ಮಳೆ ಸುರಿಯಿತು.</p>.<p>ಹೀಗಾಗಿ ಡಕ್ವರ್ಥ್ ಲೂಯಿಸ್ ನಿಯಮದನ್ವಯ ಬಾಂಗ್ಲಾಗೆ 3 ವಿಕೆಟ್ ಜಯ ಘೋಷಿಸಲಾಯಿತು.</p>.<p><strong>ಇದನ್ನೂ ಓದಿ:</strong><a href="https://www.prajavani.net/sports/cricket/yashasvi-jaiswal-gets-most-runs-and-ravi-bishnoi-gets-most-wickets-in-2020-u19-world-cup-priyam-garg-704248.html" target="_blank">ಯುವ ವಿಶ್ವಕಪ್ | ಹೆಚ್ಚು ರನ್ ಗಳಿಸಿದ ಜೈಸ್ವಾಲ್, ಅಧಿಕ ವಿಕೆಟ್ ಪಡೆದ ಬಿಷ್ಣೋಯಿ</a></p>.<p><strong>ಬಾಂಗ್ಲಾ ಆಟಗಾರರ ಉದ್ಧಟತನ</strong><br />ಜಯ ನಿರ್ಧಾರವಾಗುತ್ತಿದ್ದಂತೆ ಮೈದಾನದತ್ತ ಓಡಿದ ಬಾಂಗ್ಲಾ ಆಟಗಾರರು, ವಿಜಯೋತ್ಸವದಲ್ಲಿ ತೊಡಗಿದರು. ಸಂಭ್ರಮಿಸುವ ಭರದಲ್ಲಿ ಕೆಲವರು ಭಾರತದ ಆಟಗಾರರತ್ತಆಕ್ರಮಣಕಾರಿಯಾಗಿ ಸನ್ನೆಗಳನ್ನು ಮಾಡಿ ಉದ್ಧಟತನ ತೋರಿದ್ದಾರೆ.ಕೆಲವರಂತೂ ಮೈದಾನದಲ್ಲಿಯೇ ಉರುಳಾಡಿರುವುದು, ಏಕಾಏಕಿ ಭಾರತದ ಆಟಗಾರರ ಬಳಿ ಬಂದು ಏರುದನಿಯಲ್ಲಿ ಮಾತನಾಡುತ್ತಿರುವುದು ವಿಡಿಯೊಗಳಲ್ಲಿ ಸ್ಪಷ್ಟವಾಗಿ ದಾಖಲಾಗಿದೆ.</p>.<p>ಇದರಿಂದ ಕೆರಳಿದ ಭಾರತದ ಆಟಗಾರರು ಮಾತಿನ ಚಕಮಕಿಗೆ ಇಳಿದರು.ಈ ವೇಳೆ ಉಭಯ ತಂಡದವರು ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದರು.</p>.<p>ಭಾರತದ ನಾಯಕ ಪ್ರಿಯಂ, ಪರಿಸ್ಥಿತಿ ತಿಳಿಗೊಳಿಸಲು ಮಧ್ಯಪ್ರವೇಶಿಸಿದರಾದರೂ ಸಾಧ್ಯವಾಗಲಿಲ್ಲ. ಬಳಿಕ ತಂಡದ ತರಬೇತದಾರರು, ಸಹಾಯಕ ಸಿಬ್ಬಂದಿ ಹಾಗೂ ಕ್ರೀಡಾಂಗಣದ ಸಿಬ್ಬಂದಿ ಬಂದು ಉಭಯ ಆಟಗಾರರನ್ನು ದೂರ ಸರಿಸಿದರು.</p>.<p><strong>ಕ್ಷಮೆ ಕೋರಿದ ರೆಫ್ರಿ</strong><br />ಪಂದ್ಯ ಮುಗಿದ ಬಳಿಕ ತಮ್ಮ ಬಳಿ ಬಂದ ರೆಫ್ರಿ ಗ್ರೇಮ್ ಲಾಬ್ರೋಯ್, ಮೈದಾನದಲ್ಲಾದಪ್ರಹಸನದ ಬಗ್ಗೆ ಕ್ಷಮೆ ಕೋರಿದರು ಎಂದು ಪಟೇಲ್ ಹೇಳಿಕೊಂಡಿದ್ದಾರೆ.</p>.<p>‘ಪಂದ್ಯದ ಬಳಿಕ ರೆಫ್ರಿ ಅವರು ನನ್ನನ್ನು ಭೇಟಿ ಮಾಡಿದರು.ಘಟನೆ ಬಗ್ಗೆ ನನ್ನ ಬಳಿ ಕ್ಷಮೆ ಕೋರಿದರು. ಈ ಪಂದ್ಯದ ವೇಳೆ ಮತ್ತು ಕೊನೆಯ ಕೆಲ ಕ್ಷಣ ಏನಾಯಿತು ಎಂಬುದನ್ನು ಐಸಿಸಿ ತುಂಬಾ ಗಂಭೀರವಾಗಿ ಪರಿಗಣಿಸಲಿದೆ ಎಂದು ತಿಳಿಸಿದರು. ವಿಡಿಯೊಗಳ ಜೊತೆಗೆ ಅವರೂಘಟನೆಗೆ ಸಾಕ್ಷಿಯಾಗಲಿದ್ದಾರೆ. ನಂತರ ನಮಗೆ ಏನಾಯಿತು ಎಂಬುದನ್ನು ತಿಳಿಸಲಿದ್ದಾರೆ’ ಎಂದು ಹೇಳಿಕೆ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪೊಷೆಸ್ಟ್ರೂಮ್:</strong>ಬಾಂಗ್ಲಾದೇಶ ತಂಡದ ಆಟಗಾರರು 19 ವರ್ಷದೊಳಗಿನವರ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತದ ಎದುರು ಗೆಲುವು ಸಾಧಿಸಿದ ಬಳಿಕ ಆಕ್ರಮಣಕಾರಿಯಾಗಿ ಸಂಭ್ರಮಾಚರಣೆ ನಡೆಸಿದ್ದನ್ನು ಐಸಿಸಿ ಗಂಭೀರವಾಗಿ ಪರಿಗಣಿಸಿದೆ ಎಂದು ಟೀಂ ಇಂಡಿಯಾ ವ್ಯವಸ್ಥಾಪಕ ಅನಿಲ್ ಪಟೇಲ್ ಹೇಳಿದ್ದಾರೆ.</p>.<p>‘ಆ ಕ್ಷಣ ಏನಾಯಿತು ಎಂಬುದು ನಿಜವಾಗಿಯೂ ಗೊತ್ತಾಗಲಿಲ್ಲ’ ಎಂದಿರುವ ಪಟೇಲ್, ‘ಖಂಡಿತಾ ಪ್ರತಿಯೊಬ್ಬರಿಗೂ ಗಾಬರಿಯಾಯಿತು. ಆದರೆ, ಏನಾಯಿತು ಎಂದು ಖಚಿತವಾಗಿ ನಮಗೆ ಗೊತ್ತಾಗಲಿಲ್ಲ. ಐಸಿಸಿಯ ಅಧಿಕಾರಿಗಳು ಪಂದ್ಯದ ಕೊನೆಯ ಕೆಲ ಹೊತ್ತಿನ ವಿಡಿಯೊಗಳನ್ನು ಪರಿಶೀಲಿಸಿದ ಬಳಿಕ ನಮಗೂ ವಾಸ್ತವವನ್ನು ತಿಳಿಸಲಿದ್ದಾರೆ’ ಎಂದು ಹೇಳಿದ್ದಾರೆ.</p>.<p>ಬಾಂಗ್ಲಾ ತಂಡದ ಕೆಲವು ಆಟಗಾರರುಸಂಭ್ರಮಾಚರಣೆ ಭರದಲ್ಲಿ ಉದ್ಧಟತನದಿಂದ ವರ್ತಿಸಿದ್ದರು. ಆ ತಂಡದ ನಾಯಕ ಅಕ್ಬರ್ ಅಲಿ, ‘ಇದೊಂದು ದುರದೃಷ್ಟಕರ ಘಟನೆ’ ಎನ್ನುವ ಮೂಲಕಘಟನೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ಬಾಂಗ್ಲಾ ವರ್ತನೆಯನ್ನು ಖಂಡಿಸಿದ್ದ ಭಾರತ ತಂಡದ ನಾಯಕ ಪ್ರಿಯಂ ಗರ್ಗ್, ‘ಇದು ಅಸಹ್ಯಕರ’ ಎಂದು ಕಿಡಿ ಕಾರಿದ್ದರು.</p>.<p><strong>ಇದನ್ನೂ ಓದಿ:</strong><a href="https://www.prajavani.net/stories/national/cricket-under-19-worldcup-2020-clash-bangla-vs-india-704235.html" target="_blank">ಯುವ ವಿಶ್ವಕಪ್ | ಟ್ರೋಫಿಗೆದ್ದ ನಂತರ ಉದ್ಧಟತನ ತೋರಿದ ಬಾಂಗ್ಲಾ</a></p>.<p><strong>ಆರಂಭದಿಂದಲೂ ಕಿರಿಕ್</strong><br />ಟಾಸ್ ಗೆದ್ದರೂ ಭಾರತವನ್ನು ಮೊದಲು ಬ್ಯಾಟಿಂಗ್ಗೆಆಹ್ವಾನಿಸಿದ ಬಾಂಗ್ಲಾ ತಂಡ ಆರಂಭದಿಂದಲೂ ಆಕ್ರಮಣಕಾರಿಯಾಗಿಯೇ ಕಾಣಿಸಿಕೊಂಡಿತು. ಆ ತಂಡದ ಫೀಲ್ಡರ್ಗಳು ಮತ್ತು ಬೌಲರ್ಗಳುಸ್ಲೆಡ್ಜಿಂಗ್ ತಂತ್ರ ಅನುಸರಿಸಿದರು.ಅದರಲ್ಲೂ ವೇಗದ ಬೌಲರ್ ಶೋರಿಫುಲ್ ಇಸ್ಲಾಂ ಪ್ರತಿ ಎಸೆತದ ಬಳಿಕವೂ ಭಾರತದ ಬ್ಯಾಟ್ಸ್ಮನ್ಗಳನ್ನು ಮಾತಿನ ಮೂಲಕ (ಸ್ಲೆಡ್ಜಿಂಗ್) ಕೆಣಕುತ್ತಿದ್ದರು.</p>.<p>ಹೀಗಾಗಿ ಕೆಲ ಕ್ರಿಕೆಟ್ ವಿಶ್ಲೇಷಕರು, ‘ಎದುರಾಳಿಗಳ ಮಾತಿನತ್ತ ಗಮನ ಹರಿಸಿದ್ದರಿಂದಾಗಿಯೇ ಭಾರತ ಹೆಚ್ಚು ರನ್ ಗಳಿಸಲು ಸಾಧ್ಯವಾಗಿಲ್ಲ’ ಎಂದು ವಿಶ್ಲೇಷಿಸಿದ್ದರು.</p>.<p>ಪಂದ್ಯದಲ್ಲಿಭಾರತ ಅಲ್ಪಮೊತ್ತಕ್ಕೆ ಕುಸಿದಿತ್ತು. ಆರಂಭಿಕ ಬ್ಯಾಟ್ಸ್ಮನ್ ಯಶಸ್ವಿ ಜೈಸ್ವಾಲ್ 88 ರನ್ ಗಳಿಸಿ ನೆರವಾಗಿದ್ದರು. ಅವರ ಆಟದ ಹೊರತಾಗಿಯೂ ಗರ್ಗ್ ಪಡೆಕೇವಲ 177 ರನ್ಗಳಿಗೆ ಆಲೌಟ್ ಆಗಿತ್ತು. ಈ ಮೊತ್ತ ಬೆನ್ನಟ್ಟಿದ ಬಾಂಗ್ಲಾ ತಂಡ 42.1 ಓವರ್ಗಳಲ್ಲಿ 170 ರನ್ ಗಳಿಸಿದ್ದಾಗ ಮಳೆ ಸುರಿಯಿತು.</p>.<p>ಹೀಗಾಗಿ ಡಕ್ವರ್ಥ್ ಲೂಯಿಸ್ ನಿಯಮದನ್ವಯ ಬಾಂಗ್ಲಾಗೆ 3 ವಿಕೆಟ್ ಜಯ ಘೋಷಿಸಲಾಯಿತು.</p>.<p><strong>ಇದನ್ನೂ ಓದಿ:</strong><a href="https://www.prajavani.net/sports/cricket/yashasvi-jaiswal-gets-most-runs-and-ravi-bishnoi-gets-most-wickets-in-2020-u19-world-cup-priyam-garg-704248.html" target="_blank">ಯುವ ವಿಶ್ವಕಪ್ | ಹೆಚ್ಚು ರನ್ ಗಳಿಸಿದ ಜೈಸ್ವಾಲ್, ಅಧಿಕ ವಿಕೆಟ್ ಪಡೆದ ಬಿಷ್ಣೋಯಿ</a></p>.<p><strong>ಬಾಂಗ್ಲಾ ಆಟಗಾರರ ಉದ್ಧಟತನ</strong><br />ಜಯ ನಿರ್ಧಾರವಾಗುತ್ತಿದ್ದಂತೆ ಮೈದಾನದತ್ತ ಓಡಿದ ಬಾಂಗ್ಲಾ ಆಟಗಾರರು, ವಿಜಯೋತ್ಸವದಲ್ಲಿ ತೊಡಗಿದರು. ಸಂಭ್ರಮಿಸುವ ಭರದಲ್ಲಿ ಕೆಲವರು ಭಾರತದ ಆಟಗಾರರತ್ತಆಕ್ರಮಣಕಾರಿಯಾಗಿ ಸನ್ನೆಗಳನ್ನು ಮಾಡಿ ಉದ್ಧಟತನ ತೋರಿದ್ದಾರೆ.ಕೆಲವರಂತೂ ಮೈದಾನದಲ್ಲಿಯೇ ಉರುಳಾಡಿರುವುದು, ಏಕಾಏಕಿ ಭಾರತದ ಆಟಗಾರರ ಬಳಿ ಬಂದು ಏರುದನಿಯಲ್ಲಿ ಮಾತನಾಡುತ್ತಿರುವುದು ವಿಡಿಯೊಗಳಲ್ಲಿ ಸ್ಪಷ್ಟವಾಗಿ ದಾಖಲಾಗಿದೆ.</p>.<p>ಇದರಿಂದ ಕೆರಳಿದ ಭಾರತದ ಆಟಗಾರರು ಮಾತಿನ ಚಕಮಕಿಗೆ ಇಳಿದರು.ಈ ವೇಳೆ ಉಭಯ ತಂಡದವರು ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದರು.</p>.<p>ಭಾರತದ ನಾಯಕ ಪ್ರಿಯಂ, ಪರಿಸ್ಥಿತಿ ತಿಳಿಗೊಳಿಸಲು ಮಧ್ಯಪ್ರವೇಶಿಸಿದರಾದರೂ ಸಾಧ್ಯವಾಗಲಿಲ್ಲ. ಬಳಿಕ ತಂಡದ ತರಬೇತದಾರರು, ಸಹಾಯಕ ಸಿಬ್ಬಂದಿ ಹಾಗೂ ಕ್ರೀಡಾಂಗಣದ ಸಿಬ್ಬಂದಿ ಬಂದು ಉಭಯ ಆಟಗಾರರನ್ನು ದೂರ ಸರಿಸಿದರು.</p>.<p><strong>ಕ್ಷಮೆ ಕೋರಿದ ರೆಫ್ರಿ</strong><br />ಪಂದ್ಯ ಮುಗಿದ ಬಳಿಕ ತಮ್ಮ ಬಳಿ ಬಂದ ರೆಫ್ರಿ ಗ್ರೇಮ್ ಲಾಬ್ರೋಯ್, ಮೈದಾನದಲ್ಲಾದಪ್ರಹಸನದ ಬಗ್ಗೆ ಕ್ಷಮೆ ಕೋರಿದರು ಎಂದು ಪಟೇಲ್ ಹೇಳಿಕೊಂಡಿದ್ದಾರೆ.</p>.<p>‘ಪಂದ್ಯದ ಬಳಿಕ ರೆಫ್ರಿ ಅವರು ನನ್ನನ್ನು ಭೇಟಿ ಮಾಡಿದರು.ಘಟನೆ ಬಗ್ಗೆ ನನ್ನ ಬಳಿ ಕ್ಷಮೆ ಕೋರಿದರು. ಈ ಪಂದ್ಯದ ವೇಳೆ ಮತ್ತು ಕೊನೆಯ ಕೆಲ ಕ್ಷಣ ಏನಾಯಿತು ಎಂಬುದನ್ನು ಐಸಿಸಿ ತುಂಬಾ ಗಂಭೀರವಾಗಿ ಪರಿಗಣಿಸಲಿದೆ ಎಂದು ತಿಳಿಸಿದರು. ವಿಡಿಯೊಗಳ ಜೊತೆಗೆ ಅವರೂಘಟನೆಗೆ ಸಾಕ್ಷಿಯಾಗಲಿದ್ದಾರೆ. ನಂತರ ನಮಗೆ ಏನಾಯಿತು ಎಂಬುದನ್ನು ತಿಳಿಸಲಿದ್ದಾರೆ’ ಎಂದು ಹೇಳಿಕೆ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>