<p><strong>ಲಂಡನ್:</strong> ಉತ್ತಮ ಆಟಗಾರರು ಇರುವ ಭಾರತ ತಂಡವೇ ಮುಂಬರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸುವ ನೆಚ್ಚಿನ ತಂಡವಾಗಿದೆ. ಆತಿಥೇಯ ತಂಡವೂ ಆಗಿರುವುದರಿಂದ ಅವಕಾಶ ಹೆಚ್ಚು ಎಂದು ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕ್ ಆಥರ್ಟನ್ ಅಭಿಪ್ರಾಯಪಟ್ಟಿದ್ದಾರೆ.</p>.<p>ಆಲ್ರೌಂಡರ್ ರವೀಂದ್ರ ಜಡೇಜ, ವೇಗಿ ಜಸ್ಪ್ರೀತ್ ಬೂಮ್ರಾ ಮತ್ತು ಮೊಹಮ್ಮದ್ ಶಮಿ ಅವರಿಲ್ಲದಿದ್ದರೂ ಭಾರತ ತಂಡವು ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯನ್ನು 3–2ರಿಂದ ಜಯಿಸಿದೆ.</p>.<p>ಈ ಕುರಿತು ಪ್ರತಿಕ್ರಿಯಿಸಿದ ಆಥರ್ಟನ್, ’ಐಪಿಎಲ್ ಮತ್ತು ಟಿ20 ಕ್ರಿಕೆಟ್ನಲ್ಲಿ ಹೆಚ್ಚು ಆಡುವುದರಿಂದ ಭಾರತ ತಂಡದಲ್ಲಿ ಪ್ರತಿಭಾವಂತ ಆಟಗಾರರ ದೊಡ್ಡ ಪಡೆಯೇ ಇದೆ. ಕೇವಲ ಮೂವರು ಬೌಲರ್ಗಳ ನೆರವಿನಿಂದಲೇ ಇಂಗ್ಲೆಂಡ್ ತಂಡವನ್ನು ಸೋಲಿಸಿರುವುದು ಇದಕ್ಕೆ ಉದಾಹರಣೆ‘ ಎಂದಿದ್ದಾರೆ.</p>.<p>’ಇದೆಲ್ಲದರ ಜೊತೆಗೆ ವಿಶ್ವಕಪ್ ಟೂರ್ನಿಯು ಭಾರತದಲ್ಲಿಯೇ ನಡೆಯಲಿದೆ. ತಮ್ಮದೇ ಅಂಗಳ ಮತ್ತು ವಾತಾವರಣವೂ ತಂಡದ ಗೆಲುವಿನ ಅವಕಾಶವನ್ನು ಮತ್ತಷ್ಟು ಹೆಚ್ಚಿಸುತ್ತದೆ‘ ಎಂದರು.</p>.<p>‘ವಿಶ್ವಕಪ್ ಟೂರ್ನಿಯಲ್ಲಿ ಭಾರತಕ್ಕೆ ದಿಟ್ಟ ಪೈಪೋಟಿ ನೀಡುವ ತಂಡಗಳು ಇವೆ. ಆದ್ದರಿಂದ ಸುಲಭದ ಹಾದಿಯಾಗಲಾರದು. ಇಂಗ್ಲೆಂಡ್, ವೆಸ್ಟ್ ಇಂಡೀಸ್ ತಂಡಗಳು ಉತ್ತಮವಾಗಿ ಆಡಬಲ್ಲ ಸಮರ್ಥ ತಂಡಗಳಾಗಿವೆ‘ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಂಡನ್:</strong> ಉತ್ತಮ ಆಟಗಾರರು ಇರುವ ಭಾರತ ತಂಡವೇ ಮುಂಬರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸುವ ನೆಚ್ಚಿನ ತಂಡವಾಗಿದೆ. ಆತಿಥೇಯ ತಂಡವೂ ಆಗಿರುವುದರಿಂದ ಅವಕಾಶ ಹೆಚ್ಚು ಎಂದು ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕ್ ಆಥರ್ಟನ್ ಅಭಿಪ್ರಾಯಪಟ್ಟಿದ್ದಾರೆ.</p>.<p>ಆಲ್ರೌಂಡರ್ ರವೀಂದ್ರ ಜಡೇಜ, ವೇಗಿ ಜಸ್ಪ್ರೀತ್ ಬೂಮ್ರಾ ಮತ್ತು ಮೊಹಮ್ಮದ್ ಶಮಿ ಅವರಿಲ್ಲದಿದ್ದರೂ ಭಾರತ ತಂಡವು ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯನ್ನು 3–2ರಿಂದ ಜಯಿಸಿದೆ.</p>.<p>ಈ ಕುರಿತು ಪ್ರತಿಕ್ರಿಯಿಸಿದ ಆಥರ್ಟನ್, ’ಐಪಿಎಲ್ ಮತ್ತು ಟಿ20 ಕ್ರಿಕೆಟ್ನಲ್ಲಿ ಹೆಚ್ಚು ಆಡುವುದರಿಂದ ಭಾರತ ತಂಡದಲ್ಲಿ ಪ್ರತಿಭಾವಂತ ಆಟಗಾರರ ದೊಡ್ಡ ಪಡೆಯೇ ಇದೆ. ಕೇವಲ ಮೂವರು ಬೌಲರ್ಗಳ ನೆರವಿನಿಂದಲೇ ಇಂಗ್ಲೆಂಡ್ ತಂಡವನ್ನು ಸೋಲಿಸಿರುವುದು ಇದಕ್ಕೆ ಉದಾಹರಣೆ‘ ಎಂದಿದ್ದಾರೆ.</p>.<p>’ಇದೆಲ್ಲದರ ಜೊತೆಗೆ ವಿಶ್ವಕಪ್ ಟೂರ್ನಿಯು ಭಾರತದಲ್ಲಿಯೇ ನಡೆಯಲಿದೆ. ತಮ್ಮದೇ ಅಂಗಳ ಮತ್ತು ವಾತಾವರಣವೂ ತಂಡದ ಗೆಲುವಿನ ಅವಕಾಶವನ್ನು ಮತ್ತಷ್ಟು ಹೆಚ್ಚಿಸುತ್ತದೆ‘ ಎಂದರು.</p>.<p>‘ವಿಶ್ವಕಪ್ ಟೂರ್ನಿಯಲ್ಲಿ ಭಾರತಕ್ಕೆ ದಿಟ್ಟ ಪೈಪೋಟಿ ನೀಡುವ ತಂಡಗಳು ಇವೆ. ಆದ್ದರಿಂದ ಸುಲಭದ ಹಾದಿಯಾಗಲಾರದು. ಇಂಗ್ಲೆಂಡ್, ವೆಸ್ಟ್ ಇಂಡೀಸ್ ತಂಡಗಳು ಉತ್ತಮವಾಗಿ ಆಡಬಲ್ಲ ಸಮರ್ಥ ತಂಡಗಳಾಗಿವೆ‘ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>